<p><strong>ಬೆಂಗಳೂರು:</strong> ‘ತನ್ನ ಕಾಲದ ಸಾಮಾಜಿಕ ವ್ಯವಸ್ಥೆಯ ಬಗ್ಗೆ ವಿರೋಧ ಪಕ್ಷದಂತೆ ದನಿ ಎತ್ತಿದ ವಚನಕಾರ ಅಂಬಿಗರ ಚೌಡಯ್ಯ’ ಸಾಹಿತಿ ಡಾ.ಪಿ.ವಿ.ನಾರಾಯಣ ಹೇಳಿದರು.<br /> <br /> ಅಂಬಿಗರ ಚೌಡಯ್ಯ ಜಯಂತಿ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.<br /> <br /> ‘ವೈದಿಕ ವ್ಯವಸ್ಥೆಯ ವಿರುದ್ಧದ ಪ್ರತಿಭಟನೆ ವಚನ ಚಳವಳಿ. ತಳ ಸಮುದಾಯದ ಜನ ತಮ್ಮ ಅಭಿ-ಪ್ರಾಯಗಳನ್ನು ಹೇಳಿಕೊಳ್ಳುವ ಅವಕಾಶ ಸಿಕ್ಕಿದ್ದು 12ನೇ ಶತಮಾನದಲ್ಲಿ. ಆ ಕಾಲದಲ್ಲಿ ತನಗನಿಸಿದ್ದನ್ನು ನೇರವಾಗಿ ಹೇಳಿದವನು ಅಂಬಿಗರ ಚೌಡಯ್ಯ’ ಎಂದು ಅವರು ಅಭಿಪ್ರಾಯಪಟ್ಟರು.<br /> <br /> ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಸಾಹಿತಿ ಪುಸ್ತಕಮನೆ ಹರಿಹರಪ್ರಿಯ, ‘ಅಂಬಿಗರ ಚೌಡಯ್ಯ, ಮಡಿವಾಳ ಮಾಚಯ್ಯ, ಉರಿಲಿಂಗ ಪೆದ್ದಿ ಮತ್ತಿತರ ವಚನಕಾರರು ಕಠಿಣ ಭಾಷೆ ಬಳಸಿ ಸಮಾಜದ ಡೊಂಕುಗಳನ್ನು ಟೀಕಿಸಿದವರು’ ಎಂದರು.<br /> <br /> ‘ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ, ಸಿದ್ಧರಾಮ ಮೊದಲಾದ ವಚನಕಾರರನ್ನು ಮಾತ್ರ ಶ್ರೇಷ್ಠರೆಂದು ಭಾವಿಸುವುದು ಸರಿಯಲ್ಲ. ತಳ ಸಮುದಾಯದ ವಚನಕಾರರ ಬಗ್ಗೆಯೂ ಪ್ರತ್ಯೇಕವಾದ ಅಧ್ಯಯನ ನಡೆಯಬೇಕು. ಬಸವಣ್ಣನ ನೆರಳಿನಲ್ಲಿ ಇತರೆ ವಚನಕಾರರನ್ನು ನೋಡುವ ಮನೋಭಾವ ತಪ್ಪಬೇಕು. ವಚನಕಾರರ ಬಗ್ಗೆ ವಸ್ತುನಿಷ್ಠ ವಿಮರ್ಶೆ ನಡೆಯಬೇಕು’ ಎಂದು ಹೇಳಿದರು.<br /> <br /> ಲೇಖಕ ಪ್ರೊ.ಶಿವರಾಮಯ್ಯ ಮಾತನಾಡಿ, ‘ನೇರ ಮಾತಿನ ವಚನಕಾರ ಅಂಬಿಗರ ಚೌಡಯ್ಯ. ಆಡಂಬರದ ಜರತಾರಿ ಜಗದ್ಗುರುಗಳ ಬಗ್ಗೆ ಕಠಿಣ ಮಾತುಗಳನ್ನಾಡುವ ಆತ ಭಂಡ ಭಕ್ತರನ್ನು ಟೀಕಿಸುತ್ತಾನೆ. ಆತನ ವಚನಗಳಲ್ಲಿ ಆಂತರಿಕ ಹಾಗೂ ಬಾಹ್ಯ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಕಾಳಜಿ ಕಾಣುತ್ತದೆ’ ಎಂದರು.<br /> <br /> ಲೇಖಕ ಡಾ.ಟಿ.ಗೋವಿಂದರಾಜು, ‘ಧರ್ಮದ ಹೆಸರಿನಲ್ಲಿ ಜನರನ್ನು ವಂಚಿಸಿ ಹಣ ಮಾಡಿಕೊಳ್ಳುವವರು ಹಿಂದೆಯೂ ಇದ್ದರು, ಇಂದಿಗೂ ಇದ್ದಾರೆ. ಧರ್ಮದ ಹೆಸರಿನ ಡಾಂಬಿಕ ಆಚರಣೆಗಳನ್ನು ಅಂಬಿಗರ ಚೌಡಯ್ಯ ತನ್ನ ವಚನಗಳಲ್ಲಿ ಕಟುವಾಗಿ ಟೀಕಿಸಿದ್ದಾನೆ’ ಎಂದು ಹೇಳಿದರು.<br /> <br /> ಕಾರ್ಯಕ್ರಮಕ್ಕೂ ಮುನ್ನ ವಿವಿಧ ಜನಪದ ಕಲಾತಂಡಗಳಿಂದ ಜನಪದ ಕಲಾ ಪ್ರದರ್ಶನ ನಡೆಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ‘ತನ್ನ ಕಾಲದ ಸಾಮಾಜಿಕ ವ್ಯವಸ್ಥೆಯ ಬಗ್ಗೆ ವಿರೋಧ ಪಕ್ಷದಂತೆ ದನಿ ಎತ್ತಿದ ವಚನಕಾರ ಅಂಬಿಗರ ಚೌಡಯ್ಯ’ ಸಾಹಿತಿ ಡಾ.ಪಿ.ವಿ.ನಾರಾಯಣ ಹೇಳಿದರು.<br /> <br /> ಅಂಬಿಗರ ಚೌಡಯ್ಯ ಜಯಂತಿ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.<br /> <br /> ‘ವೈದಿಕ ವ್ಯವಸ್ಥೆಯ ವಿರುದ್ಧದ ಪ್ರತಿಭಟನೆ ವಚನ ಚಳವಳಿ. ತಳ ಸಮುದಾಯದ ಜನ ತಮ್ಮ ಅಭಿ-ಪ್ರಾಯಗಳನ್ನು ಹೇಳಿಕೊಳ್ಳುವ ಅವಕಾಶ ಸಿಕ್ಕಿದ್ದು 12ನೇ ಶತಮಾನದಲ್ಲಿ. ಆ ಕಾಲದಲ್ಲಿ ತನಗನಿಸಿದ್ದನ್ನು ನೇರವಾಗಿ ಹೇಳಿದವನು ಅಂಬಿಗರ ಚೌಡಯ್ಯ’ ಎಂದು ಅವರು ಅಭಿಪ್ರಾಯಪಟ್ಟರು.<br /> <br /> ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಸಾಹಿತಿ ಪುಸ್ತಕಮನೆ ಹರಿಹರಪ್ರಿಯ, ‘ಅಂಬಿಗರ ಚೌಡಯ್ಯ, ಮಡಿವಾಳ ಮಾಚಯ್ಯ, ಉರಿಲಿಂಗ ಪೆದ್ದಿ ಮತ್ತಿತರ ವಚನಕಾರರು ಕಠಿಣ ಭಾಷೆ ಬಳಸಿ ಸಮಾಜದ ಡೊಂಕುಗಳನ್ನು ಟೀಕಿಸಿದವರು’ ಎಂದರು.<br /> <br /> ‘ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ, ಸಿದ್ಧರಾಮ ಮೊದಲಾದ ವಚನಕಾರರನ್ನು ಮಾತ್ರ ಶ್ರೇಷ್ಠರೆಂದು ಭಾವಿಸುವುದು ಸರಿಯಲ್ಲ. ತಳ ಸಮುದಾಯದ ವಚನಕಾರರ ಬಗ್ಗೆಯೂ ಪ್ರತ್ಯೇಕವಾದ ಅಧ್ಯಯನ ನಡೆಯಬೇಕು. ಬಸವಣ್ಣನ ನೆರಳಿನಲ್ಲಿ ಇತರೆ ವಚನಕಾರರನ್ನು ನೋಡುವ ಮನೋಭಾವ ತಪ್ಪಬೇಕು. ವಚನಕಾರರ ಬಗ್ಗೆ ವಸ್ತುನಿಷ್ಠ ವಿಮರ್ಶೆ ನಡೆಯಬೇಕು’ ಎಂದು ಹೇಳಿದರು.<br /> <br /> ಲೇಖಕ ಪ್ರೊ.ಶಿವರಾಮಯ್ಯ ಮಾತನಾಡಿ, ‘ನೇರ ಮಾತಿನ ವಚನಕಾರ ಅಂಬಿಗರ ಚೌಡಯ್ಯ. ಆಡಂಬರದ ಜರತಾರಿ ಜಗದ್ಗುರುಗಳ ಬಗ್ಗೆ ಕಠಿಣ ಮಾತುಗಳನ್ನಾಡುವ ಆತ ಭಂಡ ಭಕ್ತರನ್ನು ಟೀಕಿಸುತ್ತಾನೆ. ಆತನ ವಚನಗಳಲ್ಲಿ ಆಂತರಿಕ ಹಾಗೂ ಬಾಹ್ಯ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಕಾಳಜಿ ಕಾಣುತ್ತದೆ’ ಎಂದರು.<br /> <br /> ಲೇಖಕ ಡಾ.ಟಿ.ಗೋವಿಂದರಾಜು, ‘ಧರ್ಮದ ಹೆಸರಿನಲ್ಲಿ ಜನರನ್ನು ವಂಚಿಸಿ ಹಣ ಮಾಡಿಕೊಳ್ಳುವವರು ಹಿಂದೆಯೂ ಇದ್ದರು, ಇಂದಿಗೂ ಇದ್ದಾರೆ. ಧರ್ಮದ ಹೆಸರಿನ ಡಾಂಬಿಕ ಆಚರಣೆಗಳನ್ನು ಅಂಬಿಗರ ಚೌಡಯ್ಯ ತನ್ನ ವಚನಗಳಲ್ಲಿ ಕಟುವಾಗಿ ಟೀಕಿಸಿದ್ದಾನೆ’ ಎಂದು ಹೇಳಿದರು.<br /> <br /> ಕಾರ್ಯಕ್ರಮಕ್ಕೂ ಮುನ್ನ ವಿವಿಧ ಜನಪದ ಕಲಾತಂಡಗಳಿಂದ ಜನಪದ ಕಲಾ ಪ್ರದರ್ಶನ ನಡೆಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>