ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸತ್ಯಾಗ್ರಹ ಕೈಬಿಡಿ: ಅನಂತಮೂರ್ತಿ ಮನವಿ

Last Updated 28 ಜನವರಿ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಕೈಮಗ್ಗ ಕ್ಷೇತ್ರ­ದಲ್ಲಿ ಯಾಂತ್ರೀಕ­ರಣ ನಿಲ್ಲಿಸಬೇಕು ಎಂದು ಆಗ್ರ­ಹಿಸಿ ಹಿರಿಯ ರಂಗ­ಕರ್ಮಿ ಪ್ರಸನ್ನ ನಡೆ­ಸಲು ಉದ್ದೇಶಿ­ಸಿ­ರುವ ಉಪ­ವಾಸ ಸತ್ಯಾ­ಗ್ರಹ ಕೈಬಿಡ­ಬೇಕು’ ಎಂದು ಹಿರಿಯ ಸಾಹಿತಿ ಡಾ.ಯು.­ಆರ್‌.­ಅನಂತಮೂರ್ತಿ ಮನವಿ ಮಾಡಿದ್ದಾರೆ.

‘ಕೈಮಗ್ಗದ ಕುಶಲತೆಯನ್ನೂ, ಜೊತೆಗೇ ಜೀವನೋಪಾಯವಾದ ತಂತ್ರಗಾರಿಕೆಯನ್ನೂ ನಾವು ಕಳೆದುಕೊಳ್ಳಕೂಡದು. ಈ ಬಗ್ಗೆ ನೀವು ಹೋರಾಡುತ್ತಾ ಇದ್ದೀರಿ. ಆದರೆ, ಉಪವಾಸ ಕೂರಬಾರದು. ಜನರನ್ನು ಇನ್ನೂ ಎಚ್ಚರಿಸ­ಬೇಕಾಗಿದೆ. ಅದನ್ನು ನಾವು ನೀವು ಜತೆಗೂಡಿ ಮಾಡ­ಬೇಕು. ನಾವೆಲ್ಲ ನಿಮ್ಮೊಂದಿಗೆ ಇದ್ದೇವೆ’ ಎಂದು ಪ್ರಸನ್ನ ಅವರಿಗೆ ಬರೆದ ಪತ್ರದಲ್ಲಿ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT