ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮ್ಮೇಳನಗಳು, ಪುಸ್ತಕದ ಪಾಡು

Last Updated 30 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಮತ್ತೊಂದು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಹೊಸ್ತಿಲಿನಲ್ಲಿದೆ. ಸಮ್ಮೇಳನದಲ್ಲಿ ಹಲವಾರು ಆಕರ್ಷಣೆಗಳಿದ್ದರೂ, ಸಾಹಿತ್ಯಾಭಿ­ಮಾನಿ­ಗಳ ಬಹುಮುಖ್ಯ ಆಕರ್ಷಣೆ ಎಂದರೆ ಪುಸ್ತಕ ಮಳಿಗೆಗಳು ಎಂಬುದರಲ್ಲಿ ಅನುಮಾನ ಇಲ್ಲ. ಬೆಂಗಳೂರು ನಗರವೊಂದನ್ನು ಬಿಟ್ಟರೆ, ರಾಜ್ಯದ ಯಾವುದೇ ಊರುಗಳಲ್ಲೂ ಎಲ್ಲಾ ಪ್ರಕಾಶನಗಳ ಅಪರೂಪದ ಕನ್ನಡ ಪುಸ್ತಕಗಳು ಸಿಗುವಂತಹ ದೊಡ್ಡ ಅಂಗಡಿಗಳಿಲ್ಲ. ಆದ್ದರಿಂದ ನೂರಾರು ಪುಸ್ತಕ ಪ್ರಕಾಶನ ಸಂಸ್ಥೆಗಳು ಭಾಗವ­ಹಿ­ಸುವ ಸಾಹಿತ್ಯ ಸಮ್ಮೇಳನದಿಂದಾಗಿ, ಆಯಾ ಭಾಗದ ಜನರಿಗೆ ಅಪರೂಪದ ಪುಸ್ತಕಗಳ ಸುಗ್ಗಿ.

ಕಳೆದ ಎಂಟು ವರ್ಷಗಳಿಂದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ  ಪುಸ್ತಕ ಮಳಿಗೆ  ಹಾಕಿದ ಅನುಭವ ನನ್ನದು. ಬೆಂಗಳೂರು ಮತ್ತು ಮಡಿಕೇರಿಗಳಲ್ಲಿ ನಡೆದ ಸಾಹಿತ್ಯ ಸಮ್ಮೇಳನ­ಗಳನ್ನು ಹೊರತು ಪಡಿಸಿದರೆ, ಬೇರೆ ಎಲ್ಲಾ ಊರುಗಳಲ್ಲೂ ನನಗೆ ಕಹಿ ಅನುಭವವೇ ಆಗಿದೆ. ಯಾವುದೇ ಕೌಶಲವಿಲ್ಲದ ಜನರು ಪುಸ್ತಕ ಮಾರಾಟ ಮಳಿಗೆಗಳನ್ನು ನಿರ್ಮಿಸುವದರಿಂದ, ವಿಪರೀತ ದೂಳು, ಬಿಸಿಲು, ಗಲಾಟೆ, ಕತ್ತಲು­ಗಳಿಂದ ಕಂಗೆಡುವಂತಾಗುತ್ತದೆ. ಸಮ್ಮೇಳನದಲ್ಲಿ ಮಾಡಿದ ವ್ಯಾಪಾರಕ್ಕಿಂತಲೂ ಹತ್ತು ಪಟ್ಟು ಹೆಚ್ಚು ಪುಸ್ತಕಗಳು ದೂಳು ಹಿಡಿದು ನಷ್ಟ ಉಂಟಾಗುತ್ತದೆ. ಈ ದೂಳಿನ ಪುಸ್ತಕಗಳನ್ನು ಸಮ್ಮೇಳನ ಮುಗಿದ ನಂತರ ಮತ್ತೆ  ಮಾರಾಟ ಮಾಡಲು ಸಾಧ್ಯವಿಲ್ಲ.

ಆದ್ದರಿಂದ ಈ ಬಾರಿ ಶ್ರವಣಬೆಳಗೊಳದಲ್ಲಿ ಸಮ್ಮೇಳನ ನಡೆಸುವಾಗ ಆ  ಪ್ರಶಾಂತ ವಾತಾವರಣದಲ್ಲಿ ಪುಸ್ತಕದ ಮಳಿಗೆಗಳನ್ನು ಸುಸಜ್ಜಿತವಾಗಿ ನಿರ್ಮಿಸುವ ಜವಾಬ್ದಾರಿಯನ್ನು ಸ್ವಾಗತ ಸಮಿತಿಯವರು  ವಹಿಸುವರೆಂದು ಆಶಿಸುತ್ತೇನೆ. ಈ ಬಾರಿಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿರು­ವವರು ಹಿಂದೆ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿದ್ದ  ಸಿದ್ಧಲಿಂಗಯ್ಯನವರು. ಆದ್ದರಿಂದ ಅವರಿಗೆ ಖಂಡಿತವಾಗಿಯೂ ಈ ನಿರೀಕ್ಷೆಯ ಮಹತ್ವ ತಿಳಿಯುತ್ತದೆ ಎನ್ನೋಣವೇ?

–ವಸುಧೇಂದ್ರ  ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT