<p><strong>ಶಿವಮೊಗ್ಗ:</strong> ಇದು ಯೋಗಾ–ಯೋಗವೇ ಸರಿ. ಸಹಪಾಠಿಗಳಿಬ್ಬರಿಗೂ ಒಂದೇ ಪ್ರಶಸ್ತಿ ನಾಲ್ಕು ವರ್ಷ ಹಿಂದೆ–ಮುಂದೆ ಸಿಕ್ಕಿದೆ. ಇವರಿಬ್ಬರೂ ಅಕ್ಕ–ಪಕ್ಕದ ಊರಿನವರು; ಇಬ್ಬರೂ ಸಂಬಂಧಿಕರು ಎನ್ನುವುದು ಅಪರೂಪದಲ್ಲಿ ಅಪರೂಪ.</p>.<p>ರಾಜ್ಯ ಸರ್ಕಾರ ಗಮಕ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ನೀಡುವ ‘ಕುಮಾರವ್ಯಾಸ ಪ್ರಶಸ್ತಿ’ ಈ ಬಾರಿ ಶಿವಮೊಗ್ಗ ನಗರ ಸಮೀಪದ ಗಮಕ ವ್ಯಾಖ್ಯಾನಕಾರ ಮತ್ತೂರಿನ ಮಾರ್ಕಂಡೇಯ ಅವಧಾನಿ ಅವರಿಗೆ ಲಭಿಸಿದೆ. ನಾಲ್ಕು ವರ್ಷದ ಹಿಂದೆ ಮಾರ್ಕಂಡೇಯ ಅವಧಾನಿ ಅವರ ಸಹಪಾಠಿಯಾಗಿರುವ ಪಕ್ಕದ ಹಳ್ಳಿ ಹೊಸಹಳ್ಳಿಯ ವಾಚನಕಾರ ಎಚ್.ಆರ್.ಕೇಶವಮೂರ್ತಿ ಅವರಿಗೆ ಸರ್ಕಾರದ ಮೊಟ್ಟ–ಮೊದಲ ‘ಕುಮಾರವ್ಯಾಸ ಪ್ರಶಸ್ತಿ’ ಲಭಿಸಿತ್ತು.</p>.<p>ಎಚ್.ಆರ್.ಕೇಶವಮೂರ್ತಿ–ಮಾರ್ಕಂಡೇಯ ಅವಧಾನಿಗಳು ಜೋಡಿಹಕ್ಕಿಗಳಂತೆ. ಗಮಕ ವಾಚನ–ವ್ಯಾಖ್ಯಾನದ ಮೂಲಕ ಪಸರಿಸಿದ ಕಂಪು ಕನ್ನಡ ನಾಡಿನ ತುಂಬೆಲ್ಲಾ ಹಬ್ಬಿದೆ. ಲಕ್ಷ್ಮೀಶನ ‘ಜೈಮಿನಿ ಭಾರತ’ ಇವರಿಬ್ಬರ ಬಾಯಲ್ಲಿ ಅದೆಷ್ಟು ಸಲ ಜಲಧಾರೆಯಂತೆ ಹರಿದಿದೆಯೋ ಲೆಕ್ಕ ಇಲ್ಲ.<br /> <br /> ಪ್ರಶಸ್ತಿ ಘೋಷಣೆಯಾದ ಹಿನ್ನೆಲೆಯಲ್ಲಿ ‘ಪ್ರಜಾವಾಣಿ’ ಸೋಮವಾರ ಹೊಸಹಳ್ಳಿಗೆ ಹೋದಾಗ, ಸಂಜೆಯ ಗಮಕ ವಾಚನಕ್ಕೆ ಮಾರ್ಕಂಡೇಯ ಅವಧಾನಿ –ಎಚ್.ಆರ್.ಕೇಶವಮೂರ್ತಿ ಸಿದ್ಧ ರಾಗುತ್ತಿದ್ದರು. ಮಧ್ಯೆ–ಮಧ್ಯೆ ಗ್ರಾಮಸ್ಥರು ಬಂದು ಅಭಿನಂದನೆ ಹೇಳಿ, ಕಾಲಿಗೆ ಎರಗುತ್ತಿದ್ದರು. ಹೊಸಹಳ್ಳಿಯಲ್ಲಿ ಜೋಡಿ ಯಾಗಿಯೇ ಅವರಿಬ್ಬರೂ ಮಾತಿಗೆ ಸಿಕ್ಕರು.</p>.<p>‘ಪ್ರಶಸ್ತಿ ಘೋಷಣೆಯಾಗಿದ್ದು ಖುಷಿಯಾಗಿದೆ. ಅಪಾತ್ರರಿಗೆ ಪ್ರಶಸ್ತಿ ಕೊಟ್ಟುಬಿಟ್ಟರೇನೋ ಅನ್ನಿಸುತ್ತಿದೆ’ ಎಂದು ವಿನಯದಿಂದಲೇ ಹೇಳಿದರು ಮಾರ್ಕಂಡೇಯ ಅವಧಾನಿಗಳು.<br /> <br /> ‘ಸ್ನಾನ ಮಾಡಿದ ಒದ್ದೆ ಬಟ್ಟೆಯಲ್ಲಿ ಕುಳಿತು ಯಾವುದೇ ಫಲಾಪೇಕ್ಷೆ ಇಲ್ಲದೆ ಕುಮಾರವ್ಯಾಸ ಕಾವ್ಯ ರಚಿಸಿದ. ಆತನ ಕಾವ್ಯವನ್ನು ಈ ಹಿಂದೆ ಓದಿದ ರಾಮಾಶಾಸ್ತ್ರಿ, ಲಕ್ಷ್ಮೀಶ್ವರ ಶಾಸ್ತ್ರಿಗಳನ್ನು ಜನ ಆಗ ಗುರುತಿಸಲಿಲ್ಲ. ಈಗ ನಾವು ಪ್ರಶಸ್ತಿ ಹೆಸರಿನಲ್ಲಿ ಹಣ, ಕೀರ್ತಿ ಪಡೆಯುತ್ತಿದ್ದೇವೆ. ಕುಮಾರವ್ಯಾಸನ ಅನುಗ್ರಹ, ಶಾಸ್ತ್ರಿಗಳ ಅನುಭವದ ಮಾರ್ಗದಿಂದಾಗಿ ನಮಗೆ ಪ್ರಶಸ್ತಿ ಬಂದಿದೆ’ ಎಂದು ಅವರು ಸ್ಮರಿಸಿದರು.<br /> <br /> ಗಮಕ ಎನ್ನುವುದು ಕಲೆಗಾಗಿ ಕಲೆ, ಹೊಟ್ಟೆಪಾಡಿಗೆ ಅಲ್ಲವಾದ್ದರಿಂದ ಈ ಕ್ಷೇತ್ರಕ್ಕೆ ಯುವಜನಾಂಗವನ್ನು ಕರೆದು ತರುವುದು ಕಷ್ಟದ ಕೆಲಸ. ಆದರೂ ಪ್ರಯತ್ನ ಬಿಟ್ಟಿಲ್ಲ. ಕೆಲವರು ಬರುತ್ತಿದ್ದಾರೆ; ಆದರೆ, ಉತ್ಸಾಹ ಕಾಣುತ್ತಿಲ್ಲ. ಇದಕ್ಕೆ ಈಗಿನ ವಿದ್ಯಾಭ್ಯಾಸವೇ ಕಾರಣ’ ಎನ್ನುತ್ತಾರೆ ಅವಧಾನಿಗಳು.<br /> <br /> ಟಿ.ವಿ. ಬಂದ ಮೇಲೆ ಜನ ಸಂಗೀತ, ರಾಗಗಳನ್ನು ಅಲ್ಲಿಯೇ ಕೇಳುತ್ತಾರೆ; ಅಷ್ಟಕ್ಕೂ ತೃಪ್ತರಾಗುತ್ತಾರೆ. ಗಮಕ ವಾಚನ–ವ್ಯಾಖ್ಯಾನ ಕೇಳುವುದರಿಂದ ಸಿಗುವ ಸುಖದ ಅನುಭವ ಜನರಿಲ್ಲ. ಅದು ಪರಿಚಯವಾಗುವ ಕೆಲಸ ಆಗಬೇಕು’ ಎಂದು ಸಲಹೆ ನೀಡುತ್ತಾರೆ ಅವರು.<br /> ಶಾಲೆಯ ಪಠ್ಯಪುಸ್ತಕದಲ್ಲಿ ಗಮಕ ಕಲೆಯನ್ನು ಅಳವಡಿಸಬೇಕು.</p>.<p>5ರಿಂದ 10ನೇ ತರಗತಿ ಮಕ್ಕಳಿಗೆ ಸಣ್ಣ–ಪುಟ್ಟ ಪದ್ಯಗಳನ್ನು ಪಠ್ಯದಲ್ಲಿ ಇಡಬೇಕು. ದೊಡ್ಡವರಿಗೆ ಒಂದು ಸಂಧಿಭಾಗ ಇಡಬೇಕು. ಅವುಗಳ ಅರ್ಥವನ್ನು ರಾಗವಾಗಿ ಹೇಳಿಕೊಡಬೇಕು ಎನ್ನುತ್ತಾರೆ ಅವರು.</p>.<p>ಹೊಸಹಳ್ಳಿಯಲ್ಲಿ ಗಮಕಭವನ ನಿರ್ಮಿಸಿದ್ದು, ಅಲ್ಲಿ ಗಮಕ ವಾಚನ–ವ್ಯಾಖ್ಯಾನ ನಿರಂತರವಾಗಿ ನಡೆದಿದೆ. ಇದೇ ರೀತಿ ಸರ್ಕಾರ ಜಿಲ್ಲೆಗೊಂದು ಗಮಕ ಭವನ ನಿರ್ಮಿಸಬೇಕು’ ಎಂಬ ಸಲಹೆ ಅವರದ್ದು.</p>.<p>‘ಕುಮಾರವ್ಯಾಸನ ಹೆಸರಿನ ಪ್ರಥಮ ಪ್ರಶಸ್ತಿ ಸ್ವೀಕಾರದ ಸಂದರ್ಭದಲ್ಲಿ ನನ್ನ ಭಾಷಣದಲ್ಲಿ ಕುಮಾರವ್ಯಾಸ ಗದಗಿನ ಕೋಳಿವಾಡದ ಮನೆಯನ್ನು ಸರ್ಕಾರ ಸ್ಮಾರಕ ಮಾಡಬೇಕು ಎಂದು ಹೇಳಿದ್ದೆ. ಆದರೆ, ಇಷ್ಟು ವರ್ಷಗಳಾದರೂ ಅದು ಅಭಿವೃದ್ಧಿ ಕಂಡಿಲ್ಲ. ಕುಮಾರವ್ಯಾಸ ಭಾರತದ ತಾಳೆಗರಿ ಮೊದಲು ಪುಟ 12 ಚೂರಾಗಿದೆ.</p>.<p>ಅದನ್ನು ಸಂರಕ್ಷಿಸುವ ಕ್ರಮದ ಬಗ್ಗೆ ಯಾರೂ ಚಿಂತನೆ ಮಾಡುತ್ತಿಲ್ಲ’ ಎಂದು ಅಲ್ಲಿಯೇ ಇದ್ದ ಎಚ್.ಆರ್. ಕೇಶವಮೂರ್ತಿ ಹೇಳಿದರು.<br /> ‘ನನಗಿಂತ ಮೊದಲು ಈತನಿಗೆ ಪ್ರಶಸ್ತಿ ಸಿಗಬೇಕಿತ್ತು. ಆದರೆ, ವಾಚನಕಾರರಿಗೆ ಮೊದಲು ನೀಡಬೇಕೆಂಬ ನಿಯಮದ ಕಾರಣ ನನಗೆ ಸಿಕ್ಕಿತು’ ಎಂದು ಅವರು ವಿನಯದಿಂದ ಹೇಳಿದರು.</p>.<p>‘ನಮ್ಮೂರಿನ ಈ ಇಬ್ಬರು ಗಮಕ ಕಲೆಯನ್ನು ದೇಶ–ವಿದೇಶಕ್ಕೆ ತಲುಪಿಸಿದರು. ಅವರಿಬ್ಬರಿಗೂ ಕುಮಾರವ್ಯಾಸನ ಹೆಸರಿನ ಪ್ರಶಸ್ತಿ ಸಿಕ್ಕಿರುವುದು ಊರಿಗೆ ಹೆಮ್ಮೆ. ಇವರಿಬ್ಬರೂ ನಮ್ಮೂರಿನ ಮುಕುಟ ಮಣಿಗಳು’ ಎಂದು ಸಂತೋಷ ವ್ಯಕ್ತಪಡಿಸುತ್ತಾರೆ ಗ್ರಾಮಸ್ಥ ಡಾ.ಸತ್ಯನಾರಾಯಣಶಾಸ್ತ್ರಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿವಮೊಗ್ಗ:</strong> ಇದು ಯೋಗಾ–ಯೋಗವೇ ಸರಿ. ಸಹಪಾಠಿಗಳಿಬ್ಬರಿಗೂ ಒಂದೇ ಪ್ರಶಸ್ತಿ ನಾಲ್ಕು ವರ್ಷ ಹಿಂದೆ–ಮುಂದೆ ಸಿಕ್ಕಿದೆ. ಇವರಿಬ್ಬರೂ ಅಕ್ಕ–ಪಕ್ಕದ ಊರಿನವರು; ಇಬ್ಬರೂ ಸಂಬಂಧಿಕರು ಎನ್ನುವುದು ಅಪರೂಪದಲ್ಲಿ ಅಪರೂಪ.</p>.<p>ರಾಜ್ಯ ಸರ್ಕಾರ ಗಮಕ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ನೀಡುವ ‘ಕುಮಾರವ್ಯಾಸ ಪ್ರಶಸ್ತಿ’ ಈ ಬಾರಿ ಶಿವಮೊಗ್ಗ ನಗರ ಸಮೀಪದ ಗಮಕ ವ್ಯಾಖ್ಯಾನಕಾರ ಮತ್ತೂರಿನ ಮಾರ್ಕಂಡೇಯ ಅವಧಾನಿ ಅವರಿಗೆ ಲಭಿಸಿದೆ. ನಾಲ್ಕು ವರ್ಷದ ಹಿಂದೆ ಮಾರ್ಕಂಡೇಯ ಅವಧಾನಿ ಅವರ ಸಹಪಾಠಿಯಾಗಿರುವ ಪಕ್ಕದ ಹಳ್ಳಿ ಹೊಸಹಳ್ಳಿಯ ವಾಚನಕಾರ ಎಚ್.ಆರ್.ಕೇಶವಮೂರ್ತಿ ಅವರಿಗೆ ಸರ್ಕಾರದ ಮೊಟ್ಟ–ಮೊದಲ ‘ಕುಮಾರವ್ಯಾಸ ಪ್ರಶಸ್ತಿ’ ಲಭಿಸಿತ್ತು.</p>.<p>ಎಚ್.ಆರ್.ಕೇಶವಮೂರ್ತಿ–ಮಾರ್ಕಂಡೇಯ ಅವಧಾನಿಗಳು ಜೋಡಿಹಕ್ಕಿಗಳಂತೆ. ಗಮಕ ವಾಚನ–ವ್ಯಾಖ್ಯಾನದ ಮೂಲಕ ಪಸರಿಸಿದ ಕಂಪು ಕನ್ನಡ ನಾಡಿನ ತುಂಬೆಲ್ಲಾ ಹಬ್ಬಿದೆ. ಲಕ್ಷ್ಮೀಶನ ‘ಜೈಮಿನಿ ಭಾರತ’ ಇವರಿಬ್ಬರ ಬಾಯಲ್ಲಿ ಅದೆಷ್ಟು ಸಲ ಜಲಧಾರೆಯಂತೆ ಹರಿದಿದೆಯೋ ಲೆಕ್ಕ ಇಲ್ಲ.<br /> <br /> ಪ್ರಶಸ್ತಿ ಘೋಷಣೆಯಾದ ಹಿನ್ನೆಲೆಯಲ್ಲಿ ‘ಪ್ರಜಾವಾಣಿ’ ಸೋಮವಾರ ಹೊಸಹಳ್ಳಿಗೆ ಹೋದಾಗ, ಸಂಜೆಯ ಗಮಕ ವಾಚನಕ್ಕೆ ಮಾರ್ಕಂಡೇಯ ಅವಧಾನಿ –ಎಚ್.ಆರ್.ಕೇಶವಮೂರ್ತಿ ಸಿದ್ಧ ರಾಗುತ್ತಿದ್ದರು. ಮಧ್ಯೆ–ಮಧ್ಯೆ ಗ್ರಾಮಸ್ಥರು ಬಂದು ಅಭಿನಂದನೆ ಹೇಳಿ, ಕಾಲಿಗೆ ಎರಗುತ್ತಿದ್ದರು. ಹೊಸಹಳ್ಳಿಯಲ್ಲಿ ಜೋಡಿ ಯಾಗಿಯೇ ಅವರಿಬ್ಬರೂ ಮಾತಿಗೆ ಸಿಕ್ಕರು.</p>.<p>‘ಪ್ರಶಸ್ತಿ ಘೋಷಣೆಯಾಗಿದ್ದು ಖುಷಿಯಾಗಿದೆ. ಅಪಾತ್ರರಿಗೆ ಪ್ರಶಸ್ತಿ ಕೊಟ್ಟುಬಿಟ್ಟರೇನೋ ಅನ್ನಿಸುತ್ತಿದೆ’ ಎಂದು ವಿನಯದಿಂದಲೇ ಹೇಳಿದರು ಮಾರ್ಕಂಡೇಯ ಅವಧಾನಿಗಳು.<br /> <br /> ‘ಸ್ನಾನ ಮಾಡಿದ ಒದ್ದೆ ಬಟ್ಟೆಯಲ್ಲಿ ಕುಳಿತು ಯಾವುದೇ ಫಲಾಪೇಕ್ಷೆ ಇಲ್ಲದೆ ಕುಮಾರವ್ಯಾಸ ಕಾವ್ಯ ರಚಿಸಿದ. ಆತನ ಕಾವ್ಯವನ್ನು ಈ ಹಿಂದೆ ಓದಿದ ರಾಮಾಶಾಸ್ತ್ರಿ, ಲಕ್ಷ್ಮೀಶ್ವರ ಶಾಸ್ತ್ರಿಗಳನ್ನು ಜನ ಆಗ ಗುರುತಿಸಲಿಲ್ಲ. ಈಗ ನಾವು ಪ್ರಶಸ್ತಿ ಹೆಸರಿನಲ್ಲಿ ಹಣ, ಕೀರ್ತಿ ಪಡೆಯುತ್ತಿದ್ದೇವೆ. ಕುಮಾರವ್ಯಾಸನ ಅನುಗ್ರಹ, ಶಾಸ್ತ್ರಿಗಳ ಅನುಭವದ ಮಾರ್ಗದಿಂದಾಗಿ ನಮಗೆ ಪ್ರಶಸ್ತಿ ಬಂದಿದೆ’ ಎಂದು ಅವರು ಸ್ಮರಿಸಿದರು.<br /> <br /> ಗಮಕ ಎನ್ನುವುದು ಕಲೆಗಾಗಿ ಕಲೆ, ಹೊಟ್ಟೆಪಾಡಿಗೆ ಅಲ್ಲವಾದ್ದರಿಂದ ಈ ಕ್ಷೇತ್ರಕ್ಕೆ ಯುವಜನಾಂಗವನ್ನು ಕರೆದು ತರುವುದು ಕಷ್ಟದ ಕೆಲಸ. ಆದರೂ ಪ್ರಯತ್ನ ಬಿಟ್ಟಿಲ್ಲ. ಕೆಲವರು ಬರುತ್ತಿದ್ದಾರೆ; ಆದರೆ, ಉತ್ಸಾಹ ಕಾಣುತ್ತಿಲ್ಲ. ಇದಕ್ಕೆ ಈಗಿನ ವಿದ್ಯಾಭ್ಯಾಸವೇ ಕಾರಣ’ ಎನ್ನುತ್ತಾರೆ ಅವಧಾನಿಗಳು.<br /> <br /> ಟಿ.ವಿ. ಬಂದ ಮೇಲೆ ಜನ ಸಂಗೀತ, ರಾಗಗಳನ್ನು ಅಲ್ಲಿಯೇ ಕೇಳುತ್ತಾರೆ; ಅಷ್ಟಕ್ಕೂ ತೃಪ್ತರಾಗುತ್ತಾರೆ. ಗಮಕ ವಾಚನ–ವ್ಯಾಖ್ಯಾನ ಕೇಳುವುದರಿಂದ ಸಿಗುವ ಸುಖದ ಅನುಭವ ಜನರಿಲ್ಲ. ಅದು ಪರಿಚಯವಾಗುವ ಕೆಲಸ ಆಗಬೇಕು’ ಎಂದು ಸಲಹೆ ನೀಡುತ್ತಾರೆ ಅವರು.<br /> ಶಾಲೆಯ ಪಠ್ಯಪುಸ್ತಕದಲ್ಲಿ ಗಮಕ ಕಲೆಯನ್ನು ಅಳವಡಿಸಬೇಕು.</p>.<p>5ರಿಂದ 10ನೇ ತರಗತಿ ಮಕ್ಕಳಿಗೆ ಸಣ್ಣ–ಪುಟ್ಟ ಪದ್ಯಗಳನ್ನು ಪಠ್ಯದಲ್ಲಿ ಇಡಬೇಕು. ದೊಡ್ಡವರಿಗೆ ಒಂದು ಸಂಧಿಭಾಗ ಇಡಬೇಕು. ಅವುಗಳ ಅರ್ಥವನ್ನು ರಾಗವಾಗಿ ಹೇಳಿಕೊಡಬೇಕು ಎನ್ನುತ್ತಾರೆ ಅವರು.</p>.<p>ಹೊಸಹಳ್ಳಿಯಲ್ಲಿ ಗಮಕಭವನ ನಿರ್ಮಿಸಿದ್ದು, ಅಲ್ಲಿ ಗಮಕ ವಾಚನ–ವ್ಯಾಖ್ಯಾನ ನಿರಂತರವಾಗಿ ನಡೆದಿದೆ. ಇದೇ ರೀತಿ ಸರ್ಕಾರ ಜಿಲ್ಲೆಗೊಂದು ಗಮಕ ಭವನ ನಿರ್ಮಿಸಬೇಕು’ ಎಂಬ ಸಲಹೆ ಅವರದ್ದು.</p>.<p>‘ಕುಮಾರವ್ಯಾಸನ ಹೆಸರಿನ ಪ್ರಥಮ ಪ್ರಶಸ್ತಿ ಸ್ವೀಕಾರದ ಸಂದರ್ಭದಲ್ಲಿ ನನ್ನ ಭಾಷಣದಲ್ಲಿ ಕುಮಾರವ್ಯಾಸ ಗದಗಿನ ಕೋಳಿವಾಡದ ಮನೆಯನ್ನು ಸರ್ಕಾರ ಸ್ಮಾರಕ ಮಾಡಬೇಕು ಎಂದು ಹೇಳಿದ್ದೆ. ಆದರೆ, ಇಷ್ಟು ವರ್ಷಗಳಾದರೂ ಅದು ಅಭಿವೃದ್ಧಿ ಕಂಡಿಲ್ಲ. ಕುಮಾರವ್ಯಾಸ ಭಾರತದ ತಾಳೆಗರಿ ಮೊದಲು ಪುಟ 12 ಚೂರಾಗಿದೆ.</p>.<p>ಅದನ್ನು ಸಂರಕ್ಷಿಸುವ ಕ್ರಮದ ಬಗ್ಗೆ ಯಾರೂ ಚಿಂತನೆ ಮಾಡುತ್ತಿಲ್ಲ’ ಎಂದು ಅಲ್ಲಿಯೇ ಇದ್ದ ಎಚ್.ಆರ್. ಕೇಶವಮೂರ್ತಿ ಹೇಳಿದರು.<br /> ‘ನನಗಿಂತ ಮೊದಲು ಈತನಿಗೆ ಪ್ರಶಸ್ತಿ ಸಿಗಬೇಕಿತ್ತು. ಆದರೆ, ವಾಚನಕಾರರಿಗೆ ಮೊದಲು ನೀಡಬೇಕೆಂಬ ನಿಯಮದ ಕಾರಣ ನನಗೆ ಸಿಕ್ಕಿತು’ ಎಂದು ಅವರು ವಿನಯದಿಂದ ಹೇಳಿದರು.</p>.<p>‘ನಮ್ಮೂರಿನ ಈ ಇಬ್ಬರು ಗಮಕ ಕಲೆಯನ್ನು ದೇಶ–ವಿದೇಶಕ್ಕೆ ತಲುಪಿಸಿದರು. ಅವರಿಬ್ಬರಿಗೂ ಕುಮಾರವ್ಯಾಸನ ಹೆಸರಿನ ಪ್ರಶಸ್ತಿ ಸಿಕ್ಕಿರುವುದು ಊರಿಗೆ ಹೆಮ್ಮೆ. ಇವರಿಬ್ಬರೂ ನಮ್ಮೂರಿನ ಮುಕುಟ ಮಣಿಗಳು’ ಎಂದು ಸಂತೋಷ ವ್ಯಕ್ತಪಡಿಸುತ್ತಾರೆ ಗ್ರಾಮಸ್ಥ ಡಾ.ಸತ್ಯನಾರಾಯಣಶಾಸ್ತ್ರಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>