ಹುಬ್ಬಳ್ಳಿ: ಕವಿ, ವಿಮರ್ಶಕ, ಅನುವಾದಕ ಜಗದೀಶ ಮಂಗಳೂರಮಠ (70) ಸೋಮವಾರ ರಾತ್ರಿ ೭. ೩೦ಕ್ಕೆ ಇಲ್ಲಿ ಹೃದಯಾಘಾತದಿಂದ ನಿಧನರಾದರು. ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿ, ಆರು ವರ್ಷ ಹಿಂದೆ ನಿವೃತ್ತರಾದ ಅವರಿಗೆ ಪತ್ನಿ, ಪುತ್ರ ಹಾಗೂ ಇಬ್ಬರು ಪುತ್ರಿಯರು ಇದ್ದಾರೆ.
‘ಕಲ್ಲರಳಿ ಹೂವಾಗಿ‘, ‘ಉರಿಯ ಚಪ್ಪರದೊಳಗೆ’, ‘ಬರುವೆನೆಂದವನು’ ಇವು ಮೂರು ಅವರ ಕವನ ಸಂಕಲನಗಳು. ‘ಪ್ರತಿಸ್ಪಂದನ’ ವಿಮರ್ಶಾ ಕೃತಿ, ‘ಅಹಕ್ಯುವಿನ ಸತ್ಯ ಕತೆ’ (ಅನುವಾದಿತ ಕಾದಂಬರಿ), ‘ಹಚ್ಚೇವು ಕನ್ನಡದ ದೀಪ’ (ಸಂಪಾದನಾ ಕೃತಿ, - ಕವಿ ಡಿ.ಎಸ್. ಕರ್ಕಿ ಸಮಗ್ರ ಕಾವ್ಯ ) ಅವರ ಪ್ರಮುಖ ಕೃತಿಗಳು. ಅಂತ್ಯಸಂಸ್ಕಾರವು ವಿಮಾನ ನಿಲ್ದಾಣ ರಸ್ತೆಯ ರುದ್ರಭೂಮಿಯಲ್ಲಿ ಮಂಗಳವಾರ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.