<p><strong>ಶಿವಮೊಗ್ಗ:</strong> ‘ಆಧುನಿಕ ಕನ್ನಡ ಸಾಹಿತ್ಯದ ಮೇಲೆ ಪಾಶ್ಚಿಮಾತ್ಯ ಸಾಹಿತ್ಯದ ಪ್ರಭಾವ ಬೀರಿದರೂ ಕನ್ನಡ ಲೇಖಕರು ವಿವಿಧ ದೃಷ್ಟಿಕೋನಗಳಲ್ಲಿ ಹೊಸ ಸಾಹಿತ್ಯ ಪರಂಪರೆಯನ್ನು ನೀಡುತ್ತಿದ್ದಾರೆ’ ಎಂದು ವಿಮರ್ಶಕ ರಹಮತ್ ತರಿಕೆರೆ ಹೇಳಿದರು.<br /> <br /> ನಗರದ ಕಮಲಾ ನೆಹರೂ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಸೋಮವಾರ ಪಲ್ಲವ ಪ್ರಕಾಶನ ಹಮ್ಮಿಕೊಂಡಿದ್ದ ವಿಮರ್ಶಕ ಪ್ರೊ.ರಾಜೇಂದ್ರ ಚೆನ್ನಿ ಅವರ ವಿಮರ್ಶಾ ಕೃತಿ ‘ಸದ್ಯದ ಹಂಗು’ ಬಿಡುಗಡೆಗೊಳಿಸಿ ಅವರು, ಮಾತನಾಡಿದರು.<br /> <br /> ಕನ್ನಡ ಲೇಖಕರು ಪಾಶ್ಚಿಮಾತ್ಯ ಪರಂಪರೆಯ ಪ್ರಭಾವವನ್ನು ಅಂತರ್ಗತ ಮಾಡಿಕೊಂಡು, ಹೊಸ ಹೊಸ ಸಾಹಿತ್ಯದ ಪ್ರಯೋಗಗಳಿಗೆ ನಾಂದಿಯಾಡಿದ್ದಾರೆ ಎಂದರು.<br /> <br /> ಸಾಹಿತ್ಯ ಎನ್ನುವುದು ತಿಳಿವಳಿಕೆ ಕಲಿಸುವ ಒಂದು ಮಾರ್ಗ. ಇಂದು ಕನ್ನಡ ಸಾಹಿತ್ಯವು ಸ್ವಂತಿಕೆ ಮತ್ತು ಆಸ್ಮಿತೆಯನ್ನು ಶೋಧಿಸುತ್ತಿದೆ. ಇಂದಿನ ಕನ್ನಡ ವಿಮರ್ಶಕರು ಪಂಕ್ತಿಯತೆಯ ಗುಣಗಳನ್ನು ಮೈಗೂಡಿಸಿಕೊಂಡಿದ್ದಾರೆ ಎಂದು ಹೇಳಿದರು.<br /> <br /> ಇಂದು ಪ್ರಜಾಪ್ರಭುತ್ವ ವಿರೋಧಿಶಕ್ತಿಗಳ ಬಲ ಹಾಗೂ ಜಾಗತೀಕರಣದ ಶಕ್ತಿಗಳು ಜೀವನದಲ್ಲಿ ತಲ್ಲಣಗಳನ್ನು ಸೃಷ್ಟಿಸುತ್ತಿವೆ. ಇದರಲ್ಲಿ ಕನ್ನಡ ಸಾಹಿತ್ಯದ ಹೊಣೆಗಾರಿಕೆ ಏನು? ಎಂದು ಪ್ರಶ್ನಿಸಿದರು.<br /> <br /> ರಾಜೇಂದ್ರ ಚೆನ್ನಿ ಅವರ ವಿಮರ್ಶಾ ಕೃತಿಯಲ್ಲಿ ಸೈದ್ಧಾಂತಿಕ ಬರಹಗಾರರ ಬಗ್ಗೆ ವಸ್ತುನಿಷ್ಠವಾಗಿ ಮೌಲ್ಯಮಾಪನ ಮಾಡಿ, ಎಲ್ಲಾ ಸೈದ್ಧಾಂತಿಕ ಹಿನ್ನೆಲೆಯ ಬರಹಗಾರರಿಗೆ ಪ್ರಾತಿನಿಧ್ಯ ನೀಡಿದ್ದಾರೆ ಎಂದು ತಿಳಿಸಿದರು.<br /> <br /> ಸಾಹಿತ್ಯದ ಹೊಣೆಗಾರಿಕೆ ಹಾಗೂ ಕ್ರಿಯಾಶೀಲತೆಯ ಬಗ್ಗೆ ಅಪಾರವಾದ ಭರವಸೆಯನ್ನು ಕೃತಿಕಾರ ಇಟ್ಟುಕೊಂಡಿದ್ದಾರೆ. ಕನ್ನಡ ಬರಹಗಾರರು ಸೃಜನಶೀಲ ಬರವಣಿಗೆಯಲ್ಲಿ ತೊಡಗಿಸಿಕೊಳ್ಳಲು ಹೋರಾಟಗಾರನ ಪಾತ್ರ ನಿರ್ವಹಿಸುವುದರ ಜೊತೆಗೆ, ಸಾಮಾಜಿಕ ಚಳವಳಿಗಳಲ್ಲಿಯೂ ತೊಡಗಿಸಿಕೊಂಡಿದ್ದಾರೆ ಎಂದರು.<br /> <br /> ರಾಣಿ ಚೆನ್ನಮ್ಮ ವಿವಿ ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಎಂ.ಜಿ.ಹೆಗಡೆ, ಕೃತಿಕಾರ ಪ್ರೊ.ರಾಜೇಂದ್ರ ಚೆನ್ನಿ, ವಿಮರ್ಶಕ ಡಾ.ಕುಂಸಿ ಉಮೇಶ, ಪ್ರೊ.ನಾಗರಾಜರಾವ್ ಮತ್ತಿತರರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿವಮೊಗ್ಗ:</strong> ‘ಆಧುನಿಕ ಕನ್ನಡ ಸಾಹಿತ್ಯದ ಮೇಲೆ ಪಾಶ್ಚಿಮಾತ್ಯ ಸಾಹಿತ್ಯದ ಪ್ರಭಾವ ಬೀರಿದರೂ ಕನ್ನಡ ಲೇಖಕರು ವಿವಿಧ ದೃಷ್ಟಿಕೋನಗಳಲ್ಲಿ ಹೊಸ ಸಾಹಿತ್ಯ ಪರಂಪರೆಯನ್ನು ನೀಡುತ್ತಿದ್ದಾರೆ’ ಎಂದು ವಿಮರ್ಶಕ ರಹಮತ್ ತರಿಕೆರೆ ಹೇಳಿದರು.<br /> <br /> ನಗರದ ಕಮಲಾ ನೆಹರೂ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಸೋಮವಾರ ಪಲ್ಲವ ಪ್ರಕಾಶನ ಹಮ್ಮಿಕೊಂಡಿದ್ದ ವಿಮರ್ಶಕ ಪ್ರೊ.ರಾಜೇಂದ್ರ ಚೆನ್ನಿ ಅವರ ವಿಮರ್ಶಾ ಕೃತಿ ‘ಸದ್ಯದ ಹಂಗು’ ಬಿಡುಗಡೆಗೊಳಿಸಿ ಅವರು, ಮಾತನಾಡಿದರು.<br /> <br /> ಕನ್ನಡ ಲೇಖಕರು ಪಾಶ್ಚಿಮಾತ್ಯ ಪರಂಪರೆಯ ಪ್ರಭಾವವನ್ನು ಅಂತರ್ಗತ ಮಾಡಿಕೊಂಡು, ಹೊಸ ಹೊಸ ಸಾಹಿತ್ಯದ ಪ್ರಯೋಗಗಳಿಗೆ ನಾಂದಿಯಾಡಿದ್ದಾರೆ ಎಂದರು.<br /> <br /> ಸಾಹಿತ್ಯ ಎನ್ನುವುದು ತಿಳಿವಳಿಕೆ ಕಲಿಸುವ ಒಂದು ಮಾರ್ಗ. ಇಂದು ಕನ್ನಡ ಸಾಹಿತ್ಯವು ಸ್ವಂತಿಕೆ ಮತ್ತು ಆಸ್ಮಿತೆಯನ್ನು ಶೋಧಿಸುತ್ತಿದೆ. ಇಂದಿನ ಕನ್ನಡ ವಿಮರ್ಶಕರು ಪಂಕ್ತಿಯತೆಯ ಗುಣಗಳನ್ನು ಮೈಗೂಡಿಸಿಕೊಂಡಿದ್ದಾರೆ ಎಂದು ಹೇಳಿದರು.<br /> <br /> ಇಂದು ಪ್ರಜಾಪ್ರಭುತ್ವ ವಿರೋಧಿಶಕ್ತಿಗಳ ಬಲ ಹಾಗೂ ಜಾಗತೀಕರಣದ ಶಕ್ತಿಗಳು ಜೀವನದಲ್ಲಿ ತಲ್ಲಣಗಳನ್ನು ಸೃಷ್ಟಿಸುತ್ತಿವೆ. ಇದರಲ್ಲಿ ಕನ್ನಡ ಸಾಹಿತ್ಯದ ಹೊಣೆಗಾರಿಕೆ ಏನು? ಎಂದು ಪ್ರಶ್ನಿಸಿದರು.<br /> <br /> ರಾಜೇಂದ್ರ ಚೆನ್ನಿ ಅವರ ವಿಮರ್ಶಾ ಕೃತಿಯಲ್ಲಿ ಸೈದ್ಧಾಂತಿಕ ಬರಹಗಾರರ ಬಗ್ಗೆ ವಸ್ತುನಿಷ್ಠವಾಗಿ ಮೌಲ್ಯಮಾಪನ ಮಾಡಿ, ಎಲ್ಲಾ ಸೈದ್ಧಾಂತಿಕ ಹಿನ್ನೆಲೆಯ ಬರಹಗಾರರಿಗೆ ಪ್ರಾತಿನಿಧ್ಯ ನೀಡಿದ್ದಾರೆ ಎಂದು ತಿಳಿಸಿದರು.<br /> <br /> ಸಾಹಿತ್ಯದ ಹೊಣೆಗಾರಿಕೆ ಹಾಗೂ ಕ್ರಿಯಾಶೀಲತೆಯ ಬಗ್ಗೆ ಅಪಾರವಾದ ಭರವಸೆಯನ್ನು ಕೃತಿಕಾರ ಇಟ್ಟುಕೊಂಡಿದ್ದಾರೆ. ಕನ್ನಡ ಬರಹಗಾರರು ಸೃಜನಶೀಲ ಬರವಣಿಗೆಯಲ್ಲಿ ತೊಡಗಿಸಿಕೊಳ್ಳಲು ಹೋರಾಟಗಾರನ ಪಾತ್ರ ನಿರ್ವಹಿಸುವುದರ ಜೊತೆಗೆ, ಸಾಮಾಜಿಕ ಚಳವಳಿಗಳಲ್ಲಿಯೂ ತೊಡಗಿಸಿಕೊಂಡಿದ್ದಾರೆ ಎಂದರು.<br /> <br /> ರಾಣಿ ಚೆನ್ನಮ್ಮ ವಿವಿ ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಎಂ.ಜಿ.ಹೆಗಡೆ, ಕೃತಿಕಾರ ಪ್ರೊ.ರಾಜೇಂದ್ರ ಚೆನ್ನಿ, ವಿಮರ್ಶಕ ಡಾ.ಕುಂಸಿ ಉಮೇಶ, ಪ್ರೊ.ನಾಗರಾಜರಾವ್ ಮತ್ತಿತರರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>