ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಂತರ್ಜಾತಿ ವಿವಾಹ ಒಪ್ಪಿಕೊಳ್ಳಿ’

Last Updated 8 ಮಾರ್ಚ್ 2015, 20:17 IST
ಅಕ್ಷರ ಗಾತ್ರ

ಮೈಸೂರು: ‘ವೇದಕಾಲದಲ್ಲಿ ಜಾತಿ ಪದ್ಧತಿ ಇರಲಿಲ್ಲ. ಕಸುಬಿಗೆ ಅನುಗುಣವಾಗಿ ಜಾತಿಗಳು ಹುಟ್ಟಿ­ಕೊಂಡವು. ಇದೀಗ ಜನರು ಕೂಡ ವೃತ್ತಿಯನ್ನು ಬದ­ಲಾ­ಯಿಸಿದ್ದಾರೆ. ಹಾಗಾಗಿ, ನಗರ ಪ್ರದೇಶದಲ್ಲಿ ಅಂತ­ರ್ಜಾತಿ ವಿವಾಹವೂ ಹೆಚ್ಚುತ್ತಿದೆ. ನಮಗೆ ಕಷ್ಟ­ವಾ-­ದರೂ ಅದನ್ನು ಒಪ್ಪಿಕೊಳ್ಳಲೇಬೇಕು’ ಎಂದು ಸಾಹಿತಿ ಡಾ.ಎಸ್‌.ಎಲ್‌. ಭೈರಪ್ಪ ಹೇಳಿದರು.

ನಗರದ ಶಾರದಾ­ವಿಲಾಸ ಶತಮಾ­ನೋ­ತ್ಸವ ಭವನದಲ್ಲಿ ಮೈಸೂರಿನ ವೇದ­ಶಾಸ್ತ್ರ ಪೋಷಿಣಿ ಸಭಾ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿದ್ವಾಂಸರನ್ನು ಸನ್ಮಾನಿಸಿ ಅವರು ಮಾತನಾಡಿದರು.

‘ನಮ್ಮ ವಿದ್ವಾಂಸರು ವೇದ, ಉಪನಿಷತ್ತು ಅಧ್ಯ­ಯನ ಮಾಡಿದರೆ ಸಾಲದು. ಬೇರೆ ಧರ್ಮಗಳ ಧರ್ಮ­ಗ್ರಂಥವನ್ನೂ ಅಧ್ಯಯನ ಮಾಡಿ, ಅಲ್ಲಿರುವ ಸತ್ವವನ್ನು ಅರ್ಥೈಸಬೇಕು. ಆಗ ನಮ್ಮ ಧರ್ಮದ ಶಕ್ತಿ ಏನೆಂ­ಬುದು ತಿಳಿಯುತ್ತದೆ. ನಮ್ಮ ಹಿಂದೂ ಧರ್ಮ­ದಲ್ಲಿ ಬೇರೆ ಧರ್ಮ, ಸಂಸ್ಕೃತಿಯನ್ನು ಗೌರವದಿಂದ ಕಾಣು­ತ್ತೇವೆ. ಆದರೆ, ಬೇರೆ ಧರ್ಮದವರು ಆ ರೀತಿ ಆಲೋ­ಚನೆ ಮಾಡುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT