ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗದಾಯುದ್ಧ ಪಾಶ್ಚಾತ್ಯ ಮಾದರಿ ಮಹಾಕಾವ್ಯ’

Last Updated 30 ಜುಲೈ 2014, 19:45 IST
ಅಕ್ಷರ ಗಾತ್ರ

ಬೆಂಗಳೂರು: ‘ರನ್ನನ ಗದಾಯುದ್ಧ ಮಹಾಕಾವ್ಯ ಪಾಶ್ಚಾತ್ಯ ಕಾವ್ಯ ಮಾದ­ರಿ­ಯಲ್ಲಿರುವ ಭಾರತದ ಏಕೈಕ ಮಹಾ­ಕಾವ್ಯ’ ಎಂದು ಹಿರಿಯ ವಿದ್ವಾಂಸ ಪ್ರೊ. ಎಂ.ಎಚ್.ಕೃಷ್ಣಯ್ಯ ಪ್ರತಿಪಾದಿಸಿದರು.

ಬೆಂಗಳೂರು ಆಕಾಶವಾಣಿ, ಮುಧೋ­­ಳದ ಕವಿ ಚಕ್ರವರ್ತಿ ರನ್ನ ಪ್ರತಿಷ್ಠಾನ, ಭಾರತೀಯ ವಿದ್ಯಾಭವ­ನದ ಆಶ್ರಯದಲ್ಲಿ ಭಾರತೀಯ ವಿದ್ಯಾ­ಭವನ­ದಲ್ಲಿ ಬುಧವಾರ ನಡೆದ ‘ಶ್ರೀ ಕವಿರತ್ನ ರನ್ನ’ ವಿಚಾರ­ಸಂಕಿರ­ಣದಲ್ಲಿ ಅವರು ಮಾತನಾಡಿದರು.
‘ಭಾರತೀಯ ಕಾವ್ಯ ಮಾದರಿ ಸಾಂಪ್ರದಾಯಿಕವಾದುದು. ಆದರೆ, ಪಾಶ್ಚಾತ್ಯ ಕಾವ್ಯದಲ್ಲಿನ ಕಥೆ ಬಿಕ್ಕಟ್ಟಿನ ರೀತಿಯಲ್ಲಿ ತಟಕ್ಕನೆ ಆರಂಭವಾ­ಗು­ತ್ತದೆ’ ಎಂದು ಅವರು ವಿಶ್ಲೇಷಿಸಿದರು.

‘ರನ್ನನ ಸಂಕಲ್ಪಶಕ್ತಿ ಪಂಪ ಕವಿಗಿಂತ ವಿಭಿನ್ನವಾದುದು. ಪಂಪನಿಗೆ ವೈದಿಕ ಪರಂಪರೆಯ ಹಿನ್ನೆಲೆ ಇತ್ತು. ರನ್ನನಿಗೆ ವಿದ್ಯಾದಾಹ ಇತ್ತು. ಎಲ್ಲ ವಿರೋ­ಧದ ನಡುವೆಯೂ ಅವರು ವಿದ್ಯಾದಾಹ ತಣಿಸಿಕೊಂಡರು’ ಎಂದರು. ಹಿರಿಯ ಸಾಹಿತಿ ಡಾ. ಹಂಪ ನಾಗ­ರಾಜಯ್ಯ, ‘ಕೃತಜ್ಞತಾ ಭಾವ ರನ್ನ ಕವಿಯ ವಿಶೇಷ ಗುಣ. ತನಗೆ ಆಶ್ರಯ ನೀಡಿದವರ ಹೆಸರನ್ನೇ ಕವಿ ತನ್ನ ಮಕ್ಕಳಿಗೆ ಇಟ್ಟಿದ್ದರು. ಇಂತಹ ಗುಣ ಅಪರೂಪ’ ಎಂದು ಬಣ್ಣಿಸಿದರು.

‘ರನ್ನ ಶಾಸನ ಕವಿ. ಕನ್ನಡದಲ್ಲಿ ಸ್ತ್ರೀ­ವಾದಕ್ಕೆ ಮೊದಲ ಭೂಮಿಕೆ ಒದಗಿಸಿದ ಕವಿಯೂ ಹೌದು. ಅಲ್ಲಿ ತನಕ ಮಹಿ­ಳೆಯ ಶೃಂಗಾರವನ್ನು ಮಾತ್ರ ವರ್ಣಿಸ­ಲಾ­ಗುತ್ತಿತ್ತು. ರನ್ನ ಮಹಿಳೆಯ ಸಮಗ್ರ ಗುಣವಿಶೇಷ­ಗಳನ್ನು ವರ್ಣಿಸಿದರು’ ಎಂದರು.
ಹಿರಿಯ ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ, ‘ಹಳೆ ಕಾವ್ಯಗಳ ಓದು­ವವರ ಸಂಖ್ಯೆ ಕಡಿಮೆಯಾಗಿದೆ ಎಂಬ ಮಾತು ಕೇಳಿ ಬರುತ್ತಿದೆ. ಇಂತಹ  ಸ್ಥಿತಿ ಎಲ್ಲ ಕಾಲದಲ್ಲೂ ಇತ್ತು. ಪ್ರಾಚೀನ ಕಾವ್ಯಗಳನ್ನು ಪ್ರಸ್ತುತ­ಗೊಳಿ­ಸುವ ಕೆಲಸ­ವನ್ನು ಜಾಸ್ತಿ ಮಾಡಿದರೆ ಓದುಗರ ಸಂಖ್ಯೆಯೂ ಹೆಚ್ಚುತ್ತದೆ. ಹೊಸ ವಿವೇ­ಕದ ಮುಖಾಂತರ ಹಳೆಯ ಕವಿಗಳ, ಕಾವ್ಯಗಳ ಪ್ರವೇಶ ಮಾಡಿ ನಮ್ಮ ನಡುವೆ ಪ್ರಸ್ತುತಗೊಳಿಸುವ ಕೆಲಸ ಆಗ­ಬೇಕು’ ಎಂದು ಸಲಹೆ ನೀಡಿದರು.

ಬೆಂಗಳೂರು ಆಕಾಶವಾಣಿ ಕೇಂದ್ರದ ನಿರ್ದೇಶಕ ಡಾ.ಬಸವರಾಜ ಸಾದರ, ರನ್ನ ಪ್ರತಿಷ್ಠಾನದ ಡಾ.ಪದ್ಮಿನಿ ನಾಗ­ರಾಜು ಮತ್ತಿತರರು ಇದ್ದರು. ಸುಮಾ ಪ್ರಸಾದ್‌ ಅವರು ರನ್ನನ ಕಾವ್ಯಗಳಿಂದ ಆಯ್ದ ಭಾಗಗಳ ಗಮಕ ವಾಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT