<p><strong>ಬೆಂಗಳೂರು:</strong> ‘ನಿರಂಜನ ಅವರು ಓದುಗರಿಗೆ ಬದ್ಧರಾಗಿದ್ದರು. ಜನರಿಗೆ ಬೌದ್ಧಿಕವಾಗಿ ಅಗತ್ಯವಿರುವ ಸಾಹಿತ್ಯವನ್ನು ಸೃಷ್ಟಿಸಿದ ಅಪರೂಪದ ಲೇಖಕ’ ಎಂದು ಸಾಹಿತಿ ಡಾ.ಚಂದ್ರಶೇಖರ ಕಂಬಾರ ಹೇಳಿದರು. ಕನ್ನಡ ವಿಕಿಪೀಡಿಯ ಸಮುದಾಯವು ಸಾಹಿತಿ ನಿರಂಜನ ಅವರ ಪುಸ್ತಕಗಳನ್ನು ವಿಕಿಪೀಡಿಯದಲ್ಲಿ ಬಿಡುಗಡೆ ಮಾಡಲು ಬುಧವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.<br /> <br /> ‘ನಾನು ಸಾಹಿತ್ಯ ರಚನೆಗೆ ತೊಡಗುವುದಕ್ಕೂ ಹಿಂದೆಯೇ ನಿರಂಜನ ಅವರು ತಮ್ಮ ಲೇಖನಗಳ ಮೂಲಕ ದೊಡ್ಡ ಪ್ರಭಾವಳಿಯನ್ನು ಸೃಷ್ಟಿಸಿದ್ದರು. ಅವರೊಂದಿಗೆ ಹೆಚ್ಚು ಬೆರೆಯಲು ಸಾಧ್ಯವಾಗಲಿಲ್ಲ. ಆದರೆ, ಅವರ ಮೇಲೆ ಗೌರವ ಇದೆ’ ಎಂದರು.<br /> <br /> ಹೊಸತು ಪತ್ರಿಕೆಯ ಸಂಪಾದಕ ಡಾ.ಸಿದ್ದನಗೌಡ ಪಾಟೀಲ ಮಾತನಾಡಿ, ‘ನಿರಂಜನ ಅವರು ಸಾಹಿತ್ಯ ರಚನೆಯನ್ನು ಗುರಿಯಾಗಿಸಿಕೊಂಡವರಲ್ಲ. ಸಾಹಿತ್ಯವನ್ನು ಮಾಧ್ಯಮವನ್ನಾಗಿ ಬಳಸಿಕೊಂಡು ಸಾಮಾಜಿಕ ಬದಲಾವಣೆಗೆ ಬೇಕಾದ ಅಂಶಗಳನ್ನು ತಮ್ಮ ಕೃತಿಗಳ ಮೂಲಕ ನೀಡಿದರು’ ಎಂದರು.<br /> <br /> ‘ಅವರ 13ನೇ ವಯಸ್ಸಿನಲ್ಲಿ ಮೊದಲ ಕಥಾ ಸಂಕಲನ ಪ್ರಕಟವಾಯಿತು. 19ನೇ ವಯಸ್ಸಿನಲ್ಲಿ ಪತ್ರಕರ್ತರಾಗಿ ವೃತ್ತಿ ಆರಂಭಿಸಿದರು. ಬದುಕೇ ಅವರ ವಿಶ್ವವಿದ್ಯಾಲಯವಾಗಿತ್ತು. 23 ಕಾದಂಬರಿ, 10 ಕಥಾ ಸಂಕಲನ ಮತ್ತು 2 ಸಾವಿರ ಅಂಕಣ ಬರಹಗಳನ್ನು ಬರೆದಿದ್ದಾರೆ’ ಎಂದರು.<br /> <br /> ನಿರಂಜನ ಅವರ ಪುತ್ರಿ ಡಾ.ತೇಜಸ್ವಿನಿ ಅವರು ನಿರಂಜನ ಅವರ 55 ಕೃತಿಗಳನ್ನು ಕ್ರಿಯೇಟಿವ್ ಕಾಮನ್ಸ್ ಪರವಾನಗಿಯೊಂದಿಗೆ ವಿಕಿಪೀಡಿಯದಲ್ಲಿ ಪ್ರಕಟ ಮಾಡಲು ಸಹಿ ಹಾಕಿದರು. ‘ಪ್ರಜಾವಾಣಿ’ಯ ಮುಖ್ಯ ಉಪಸಂಪಾದಕ ಎನ್.ಎ.ಎಂ.ಇಸ್ಮಾಯಿಲ್ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ‘ನಿರಂಜನ ಅವರು ಓದುಗರಿಗೆ ಬದ್ಧರಾಗಿದ್ದರು. ಜನರಿಗೆ ಬೌದ್ಧಿಕವಾಗಿ ಅಗತ್ಯವಿರುವ ಸಾಹಿತ್ಯವನ್ನು ಸೃಷ್ಟಿಸಿದ ಅಪರೂಪದ ಲೇಖಕ’ ಎಂದು ಸಾಹಿತಿ ಡಾ.ಚಂದ್ರಶೇಖರ ಕಂಬಾರ ಹೇಳಿದರು. ಕನ್ನಡ ವಿಕಿಪೀಡಿಯ ಸಮುದಾಯವು ಸಾಹಿತಿ ನಿರಂಜನ ಅವರ ಪುಸ್ತಕಗಳನ್ನು ವಿಕಿಪೀಡಿಯದಲ್ಲಿ ಬಿಡುಗಡೆ ಮಾಡಲು ಬುಧವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.<br /> <br /> ‘ನಾನು ಸಾಹಿತ್ಯ ರಚನೆಗೆ ತೊಡಗುವುದಕ್ಕೂ ಹಿಂದೆಯೇ ನಿರಂಜನ ಅವರು ತಮ್ಮ ಲೇಖನಗಳ ಮೂಲಕ ದೊಡ್ಡ ಪ್ರಭಾವಳಿಯನ್ನು ಸೃಷ್ಟಿಸಿದ್ದರು. ಅವರೊಂದಿಗೆ ಹೆಚ್ಚು ಬೆರೆಯಲು ಸಾಧ್ಯವಾಗಲಿಲ್ಲ. ಆದರೆ, ಅವರ ಮೇಲೆ ಗೌರವ ಇದೆ’ ಎಂದರು.<br /> <br /> ಹೊಸತು ಪತ್ರಿಕೆಯ ಸಂಪಾದಕ ಡಾ.ಸಿದ್ದನಗೌಡ ಪಾಟೀಲ ಮಾತನಾಡಿ, ‘ನಿರಂಜನ ಅವರು ಸಾಹಿತ್ಯ ರಚನೆಯನ್ನು ಗುರಿಯಾಗಿಸಿಕೊಂಡವರಲ್ಲ. ಸಾಹಿತ್ಯವನ್ನು ಮಾಧ್ಯಮವನ್ನಾಗಿ ಬಳಸಿಕೊಂಡು ಸಾಮಾಜಿಕ ಬದಲಾವಣೆಗೆ ಬೇಕಾದ ಅಂಶಗಳನ್ನು ತಮ್ಮ ಕೃತಿಗಳ ಮೂಲಕ ನೀಡಿದರು’ ಎಂದರು.<br /> <br /> ‘ಅವರ 13ನೇ ವಯಸ್ಸಿನಲ್ಲಿ ಮೊದಲ ಕಥಾ ಸಂಕಲನ ಪ್ರಕಟವಾಯಿತು. 19ನೇ ವಯಸ್ಸಿನಲ್ಲಿ ಪತ್ರಕರ್ತರಾಗಿ ವೃತ್ತಿ ಆರಂಭಿಸಿದರು. ಬದುಕೇ ಅವರ ವಿಶ್ವವಿದ್ಯಾಲಯವಾಗಿತ್ತು. 23 ಕಾದಂಬರಿ, 10 ಕಥಾ ಸಂಕಲನ ಮತ್ತು 2 ಸಾವಿರ ಅಂಕಣ ಬರಹಗಳನ್ನು ಬರೆದಿದ್ದಾರೆ’ ಎಂದರು.<br /> <br /> ನಿರಂಜನ ಅವರ ಪುತ್ರಿ ಡಾ.ತೇಜಸ್ವಿನಿ ಅವರು ನಿರಂಜನ ಅವರ 55 ಕೃತಿಗಳನ್ನು ಕ್ರಿಯೇಟಿವ್ ಕಾಮನ್ಸ್ ಪರವಾನಗಿಯೊಂದಿಗೆ ವಿಕಿಪೀಡಿಯದಲ್ಲಿ ಪ್ರಕಟ ಮಾಡಲು ಸಹಿ ಹಾಕಿದರು. ‘ಪ್ರಜಾವಾಣಿ’ಯ ಮುಖ್ಯ ಉಪಸಂಪಾದಕ ಎನ್.ಎ.ಎಂ.ಇಸ್ಮಾಯಿಲ್ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>