<p>ಧಾರವಾಡ: ‘ಕವಿಯಾದವನು ಇಡೀ ಲೋಕದ ಕಲ್ಯಾಣವನ್ನು ಬಯಸುತ್ತಾನೆ’ ಎಂದು ಹಿರಿಯ ಸಾಹಿತಿ ಡಾ.ಪಂಚಾಕ್ಷರಿ ಹಿರೇಮಠ ಹೇಳಿದರು.<br /> ಮಂಗಳವಾರ ಇಲ್ಲಿನ ಕರ್ನಾಟಕ ವಿದ್ಯಾವರ್ಧಕ ಸಂಘದ ರಾ.ಹ.ದೇಶಪಾಂಡೆ ಸಭಾಭವನದಲ್ಲಿ ಅನ್ವೇಷಣ ಕೂಟದ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ನರಸಿಂಹ ಪರಾಂಜಪೆ ಅವರು ಬರೆದ ‘ಎದೆಯಾಳದ ಸತ್ಯ’ ಎಂಬ ಕವನ ಸಂಕಲನ ಬಿಡುಗಡೆ ಮಾಡಿ ಅವರು ಮಾತನಾಡಿದರು.<br /> <br /> ‘ಜೀವನದ ಆಗು ಹೋಗುಗಳನ್ನೆಲ್ಲ ಗ್ರಹಿಸಿ ಅದನ್ನು ಅನುಭವದ ಮೂಲಕ ಹದಗೊಳಿಸಿ ಸೊಗಸು ತುಂಬಿ ಹಂಚಿದಾಗ ಅದು ಜೀವನ್ಮುಖಿ ಕಾವ್ಯವೆನಿಸುತ್ತದೆ. ಕಾವ್ಯದ ಸರಳೀಕರಣ ಕೂಡ ಸುಲಭದ ಮಾತಲ್ಲ. ಈ ಎಲ್ಲ ಗುಣ ಲಕ್ಷಣಗಳಿಂದ ಕೂಡಿದ ನರಸಿಂಹ ಪರಾಂಜಪೆಯವರ ಪ್ರಸ್ತುತ ಕವನ ಸಂಕಲನ ಎದೆಯಾಳದ ಸತ್ಯ, ಅವರನ್ನು ಪ್ರಜ್ಞಾವಂತ ಕವಿಗಳ ಸಾಲಿನ ಮುಂಚೂಣಿಯಲ್ಲಿ ನಿಲ್ಲಿಸುವಂತಹ ಒಂದು ಅಪರೂಪದ ಕೃತಿಯಾಗಿದೆ’ ಎಂದರು.<br /> <br /> ಅಧ್ಯಕ್ಷತೆ ವಹಿಸಿದ್ದ ಹಿರಿಯ ವಿಮರ್ಶಕ ಡಾ.ಗಿರಡ್ಡಿ ಗೋವಿಂದರಾಜ, ‘ಯಾವುದೋ ಕ್ಷಣದಲ್ಲಿ ಒರತೆಯ ಬಾಯಿಗೆ ಸಿಕ್ಕ ಕಲ್ಲು ಸಿಡಿದಾಗ ಜಲರಾಶಿ ಚಿಮ್ಮಿದಂತೆ ಅಡಗಿಕೊಂಡಿರುವ ಕಾವ್ಯ ಪ್ರತ್ಯಕ್ಷವಾಗುವುದೊಂದು ರಹಸ್ಯಮಯ ಉಪಕ್ರಮ. ಅಂಥ ಸಮಯದಲ್ಲಿ ಉದ್ಭವಿಸಿದ ಈ ಸಂಕಲನದ ಅನೇಕ ಕವಿತೆಗಳು ಚಿತ್ರಮಯ ಶೈಲಿಯಲ್ಲಿ ಮೂಡಿನಿಂತಿವೆ’ ಎಂದರು.<br /> <br /> ಕವನ ಸಂಕಲನ ಪರಿಚಯಿಸಿದ ನಿವೃತ್ತ ಪ್ರಾಧ್ಯಪಕ ಡಾ.ಬಾಳಣ್ಣ ಶೀಗಿಹಳ್ಳಿ ‘ಯಾವ ಆಟಾಟೋಪ, ಅಬ್ಬರ, ಆಕ್ರೋಶ, ದ್ವೇಷಗಳನ್ನೂ ಕಾಣದ, ಅರಿವಿನ ವಿಸ್ತರಣೆಯಿಂದ ತುಂಬಿ ನಿಂತ ಪರಾಂಜಪೆಯವರ ಕವನಗಳು ಸಂಯಮಶೀಲ ನಡಿಗೆಯಿಂದ ಚಲಿಸುತ್ತ, ಸಂಕೀರ್ಣತೆಯಿಂದ ಬಿಡಿಸಿಕೊಂಡ ಸದ್ಭಾವದ ರಚನೆಗಳಾಗಿ ಅರಳಿನಿಂತಿವೆ’ ಎಂದರು,<br /> <br /> ಕೃತಿಕಾರ ನರಸಿಂಹ ಪರಾಂಜಪೆಯವರು ಈ ಸಂಗ್ರಹದ ಕೆಲ ಕವನಗಳನ್ನು ಓದಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಶ್ರೀಧರ ಕುಲಕರ್ಣಿ ಪ್ರಾರ್ಥಿಸಿದರು. ವೆಂಕಟೇಶ ದೇಸಾಯಿ ಸ್ವಾಗತಿಸಿ, ನಿರೂಪಿಸಿದರು. ಪ್ರೊ.ದೀಪಕ ಆಲೂರ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಧಾರವಾಡ: ‘ಕವಿಯಾದವನು ಇಡೀ ಲೋಕದ ಕಲ್ಯಾಣವನ್ನು ಬಯಸುತ್ತಾನೆ’ ಎಂದು ಹಿರಿಯ ಸಾಹಿತಿ ಡಾ.ಪಂಚಾಕ್ಷರಿ ಹಿರೇಮಠ ಹೇಳಿದರು.<br /> ಮಂಗಳವಾರ ಇಲ್ಲಿನ ಕರ್ನಾಟಕ ವಿದ್ಯಾವರ್ಧಕ ಸಂಘದ ರಾ.ಹ.ದೇಶಪಾಂಡೆ ಸಭಾಭವನದಲ್ಲಿ ಅನ್ವೇಷಣ ಕೂಟದ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ನರಸಿಂಹ ಪರಾಂಜಪೆ ಅವರು ಬರೆದ ‘ಎದೆಯಾಳದ ಸತ್ಯ’ ಎಂಬ ಕವನ ಸಂಕಲನ ಬಿಡುಗಡೆ ಮಾಡಿ ಅವರು ಮಾತನಾಡಿದರು.<br /> <br /> ‘ಜೀವನದ ಆಗು ಹೋಗುಗಳನ್ನೆಲ್ಲ ಗ್ರಹಿಸಿ ಅದನ್ನು ಅನುಭವದ ಮೂಲಕ ಹದಗೊಳಿಸಿ ಸೊಗಸು ತುಂಬಿ ಹಂಚಿದಾಗ ಅದು ಜೀವನ್ಮುಖಿ ಕಾವ್ಯವೆನಿಸುತ್ತದೆ. ಕಾವ್ಯದ ಸರಳೀಕರಣ ಕೂಡ ಸುಲಭದ ಮಾತಲ್ಲ. ಈ ಎಲ್ಲ ಗುಣ ಲಕ್ಷಣಗಳಿಂದ ಕೂಡಿದ ನರಸಿಂಹ ಪರಾಂಜಪೆಯವರ ಪ್ರಸ್ತುತ ಕವನ ಸಂಕಲನ ಎದೆಯಾಳದ ಸತ್ಯ, ಅವರನ್ನು ಪ್ರಜ್ಞಾವಂತ ಕವಿಗಳ ಸಾಲಿನ ಮುಂಚೂಣಿಯಲ್ಲಿ ನಿಲ್ಲಿಸುವಂತಹ ಒಂದು ಅಪರೂಪದ ಕೃತಿಯಾಗಿದೆ’ ಎಂದರು.<br /> <br /> ಅಧ್ಯಕ್ಷತೆ ವಹಿಸಿದ್ದ ಹಿರಿಯ ವಿಮರ್ಶಕ ಡಾ.ಗಿರಡ್ಡಿ ಗೋವಿಂದರಾಜ, ‘ಯಾವುದೋ ಕ್ಷಣದಲ್ಲಿ ಒರತೆಯ ಬಾಯಿಗೆ ಸಿಕ್ಕ ಕಲ್ಲು ಸಿಡಿದಾಗ ಜಲರಾಶಿ ಚಿಮ್ಮಿದಂತೆ ಅಡಗಿಕೊಂಡಿರುವ ಕಾವ್ಯ ಪ್ರತ್ಯಕ್ಷವಾಗುವುದೊಂದು ರಹಸ್ಯಮಯ ಉಪಕ್ರಮ. ಅಂಥ ಸಮಯದಲ್ಲಿ ಉದ್ಭವಿಸಿದ ಈ ಸಂಕಲನದ ಅನೇಕ ಕವಿತೆಗಳು ಚಿತ್ರಮಯ ಶೈಲಿಯಲ್ಲಿ ಮೂಡಿನಿಂತಿವೆ’ ಎಂದರು.<br /> <br /> ಕವನ ಸಂಕಲನ ಪರಿಚಯಿಸಿದ ನಿವೃತ್ತ ಪ್ರಾಧ್ಯಪಕ ಡಾ.ಬಾಳಣ್ಣ ಶೀಗಿಹಳ್ಳಿ ‘ಯಾವ ಆಟಾಟೋಪ, ಅಬ್ಬರ, ಆಕ್ರೋಶ, ದ್ವೇಷಗಳನ್ನೂ ಕಾಣದ, ಅರಿವಿನ ವಿಸ್ತರಣೆಯಿಂದ ತುಂಬಿ ನಿಂತ ಪರಾಂಜಪೆಯವರ ಕವನಗಳು ಸಂಯಮಶೀಲ ನಡಿಗೆಯಿಂದ ಚಲಿಸುತ್ತ, ಸಂಕೀರ್ಣತೆಯಿಂದ ಬಿಡಿಸಿಕೊಂಡ ಸದ್ಭಾವದ ರಚನೆಗಳಾಗಿ ಅರಳಿನಿಂತಿವೆ’ ಎಂದರು,<br /> <br /> ಕೃತಿಕಾರ ನರಸಿಂಹ ಪರಾಂಜಪೆಯವರು ಈ ಸಂಗ್ರಹದ ಕೆಲ ಕವನಗಳನ್ನು ಓದಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಶ್ರೀಧರ ಕುಲಕರ್ಣಿ ಪ್ರಾರ್ಥಿಸಿದರು. ವೆಂಕಟೇಶ ದೇಸಾಯಿ ಸ್ವಾಗತಿಸಿ, ನಿರೂಪಿಸಿದರು. ಪ್ರೊ.ದೀಪಕ ಆಲೂರ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>