ಸೋಮವಾರ, 3 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಿ.ಆರ್‌.ಗುರುಪ್ರಸಾದ್‌

ಸಂಪರ್ಕ:
ADVERTISEMENT

ಬ್ಯಾಲಾಳು | ಚಂದ್ರಯಾನ 3ರ ಸಂಪರ್ಕದ ‘ಕಿವಿ ಬಾಯಿ’

ಚಂದ್ರಯಾನ3 ನೌಕೆ ಕೆಲವು ಸಮಯದಲ್ಲಿ ಭಾರತವಿರುವ ಭೂಭಾಗಕ್ಕೆ ಗೋಚರಿಸುವುದಿಲ್ಲ.
Last Updated 15 ಆಗಸ್ಟ್ 2023, 23:30 IST
ಬ್ಯಾಲಾಳು | ಚಂದ್ರಯಾನ 3ರ ಸಂಪರ್ಕದ ‘ಕಿವಿ ಬಾಯಿ’

GSLV | ಯಾನ ನಿರ್ವಹಣೆಯಲ್ಲಿ ಹೊಸ ಅಧ್ಯಾಯ

ಭಾರತದ ಯಾನ ನಿರ್ವಹಣಾ ಉಪಗ್ರಹಗಳ ಕ್ಷೇತ್ರದಲ್ಲಿ ಹೊಸದೊಂದು ಅಧ್ಯಾಯ ಆರಂಭವಾಯಿತು.
Last Updated 31 ಮೇ 2023, 0:19 IST
GSLV | ಯಾನ ನಿರ್ವಹಣೆಯಲ್ಲಿ ಹೊಸ ಅಧ್ಯಾಯ

ಎಲ್. ವಿ. ಎಂ. 3: ಮತ್ತೊಂದು ಯಶಸ್ಸು!

ಕಳೆದ ಭಾನುವಾರ (ಮಾರ್ಚ್ 26, 2023) ‘ಇಸ್ರೊ’ದ ವಿಜ್ಞಾನಿ ಹಾಗೂ ಎಂಜಿನಿಯರ್‌ಗಳಿಗೆ ವಿಶೇಷ ದಿನ. ಏಕೆಂದರೆ ಆ ದಿನ ಬೆಳಿಗ್ಗೆ ಭಾರತ ಇದುವರೆವಿಗೂ ನಿರ್ಮಿಸಿರುವ ರಾಕೆಟ್ ವಾಹನಗಳಲ್ಲೇ ಅತಿ ಶಕ್ತಿಶಾಲಿಯಾದ ‘ಎಲ್ ವಿ ಎಂ 3’ (ಇದಕ್ಕೆ ‘ಜಿ. ಎಸ್. ಎಲ್. ವಿ. ಮಾರ್ಕ್ 3’ ಎಂಬ ಹೆಸರೂ ಇದೆ) ಜಾಗತಿಕ ಮಟ್ಟದಲ್ಲಿ ಸಂಪರ್ಕ ಸೇವೆಯನ್ನು ಒದಗಿಸುತ್ತಿರುವ ಖಾಸಗಿ ಸಂಸ್ಥೆಗಳಲ್ಲಿ ಒಂದಾದ ‘ಒನ್ ವೆಬ್’ ಸಂಸ್ಥೆಗೆ ಸೇರಿದೆ 36 ಉಪಗ್ರಹಗಳನ್ನು ಹೊತ್ತು ಉಡಾವಣೆಗೆ ಸಿದ್ಧವಾಗಿ ನಿಂತಿತ್ತು.
Last Updated 28 ಮಾರ್ಚ್ 2023, 19:30 IST
ಎಲ್. ವಿ. ಎಂ. 3: ಮತ್ತೊಂದು ಯಶಸ್ಸು!

SSLV | ಎಸ್ಎಸ್ಎಲ್‌ವಿ: ನೂತನ ಉಡಾವಣಾ ರಾಕೆಟ್

ಭಾರತದ ಆಗ್ನೇಯ ಕರಾವಳಿಯಲ್ಲಿರುವ ಶ್ರೀಹರಿಕೋಟಾದಲ್ಲಿ ನಮ್ಮ ದೇಶದ ಏಕೈಕ ಉಪಗ್ರಹ ಉಡಾವಣಾ ನೆಲೆಯಾದ ‘ಸತೀಶ್ ಧವನ್ ಅಂತರಿಕ್ಷ ಕೇಂದ್ರ’ವಿದೆ. ಅಲ್ಲಿರುವ ಎರಡು ಉಡಾವಣಾ ವೇದಿಕೆಗಳ ಪೈಕಿ ಮೊದಲನೆಯದರಲ್ಲಿ ಸುಮಾರು ಹನ್ನೊಂದು ಮಹಡಿಗಳಷ್ಟು ಎತ್ತರದ ರಾಕೆಟ್ ಒಂದು ಈ ಫೆಬ್ರುವರಿ 10ರಂದು ಯಾನಕ್ಕೆ ಸಿದ್ಧವಾಗಿ ನಿಂತಿತ್ತು. ಭಾರತೀಯ ಅಂತರಿಕ್ಷ ಸಂಶೋಧನಾ ಸಂಸ್ಥೆ ‘ಇಸ್ರೊ’ ನಿರ್ಮಿಸಿದ 640 ಟನ್ ತೂಕದ ರಕ್ಕಸ ರಾಕೆಟ್ಟಾದ ‘ಎಲ್. ವಿ. ಎಂ. 3 (ಜಿ. ಎಸ್. ಎಲ್. ವಿ. ಮಾರ್ಕ್3)’ಗೆ ಹೋಲಿಸಿದಲ್ಲಿ (ಎತ್ತರ 14 ಮಹಡಿಗಳು) ಕೇವಲ 120 ಟನ್ ತೂಕದ ಆ ರಾಕೆಟ್ ಸಾಕಷ್ಟು ಚಿಕ್ಕದೆನ್ನಬಹುದು. ಅದಕ್ಕೆ ತಕ್ಕಂತೆ ಆ ರಾಕೆಟ್ ನ ಹೆಸರೇ ‘ಸ್ಮಾಲ್ ಸ್ಯಾಟಲೈಟ್ ಲಾಂಚ್ ವೆಹಿಕಲ್’ (‘ಎಸ್ ಎಸ್ ಎಲ್ ವಿ’), ಅಂದರೆ ‘ಪುಟ್ಟ ಉಪಗ್ರಹಗಳ ಉಡಾವಣಾ ವಾಹನ’.
Last Updated 15 ಫೆಬ್ರುವರಿ 2023, 0:00 IST
SSLV | ಎಸ್ಎಸ್ಎಲ್‌ವಿ: ನೂತನ ಉಡಾವಣಾ ರಾಕೆಟ್

ವಿಕ್ರಂ-ಎಸ್ ಭಾರತೀಯ ಅಂತರಿಕ್ಷ ಕ್ಷೇತ್ರದಲ್ಲಿ ನೂತನ ಯುಗ

ಶ್ರೀಹರಿಕೋಟಾ. ಭಾರತದ ಆಗ್ನೇಯ ಕರಾವಳಿಯಲ್ಲಿರುವ ಈ ದ್ವೀಪದಿಂದ ನೂರಾರು ಉಪಗ್ರಹಗಳು ಹಾಗೂ ಚಂದ್ರ ಮತ್ತು ಮಂಗಳಗ್ರಹವನ್ನು ಗುರಿಯಾಗಿಟ್ಟುಕೊಂಡ ರೋಬಾಟ್ ನೌಕೆಗಳು ಭಾರತದ ದೈತ್ಯ ರಾಕೆಟ್ ವಾಹನಗಳಲ್ಲಿ ಈ ಮೊದಲು ಅಂತರಿಕ್ಷಕ್ಕೆ ತೆರಳಿವೆ.
Last Updated 22 ನವೆಂಬರ್ 2022, 19:30 IST
ವಿಕ್ರಂ-ಎಸ್ ಭಾರತೀಯ ಅಂತರಿಕ್ಷ ಕ್ಷೇತ್ರದಲ್ಲಿ ನೂತನ ಯುಗ

ಡಾರ್ಟ್! ಇದು ಆತ್ಮಾಹುತಿ ರೋಬಾಟ್‌! ಕ್ಷುದ್ರಗ್ರಹಗಳಿಂದ ಭೂಮಿ ರಕ್ಷಿಸುತ್ತಾ?

ನಮ್ಮ ಭೂಮಿಯ ನಾನ್ನೂರೈವತ್ತು ಕೋಟಿ ವರ್ಷಗಳ ಇತಿಹಾಸದಲ್ಲಿ ಅನೇಕ ಬಾರಿ ಕ್ಷುದ್ರಗ್ರಹ (ಆಸ್ಟರಾಯ್ಡ್), ಧೂಮಕೇತು (ಕಾಮೆಟ್) ಹಾಗೂ ಅವುಗಳ ಚೂರುಗಳು ಬಂದಪ್ಪಳಿಸಿ ಡೈನೋಸಾರ್‌ಗಳೂ ಸೇರಿದಂತೆ ಸಾವಿರಾರು ಬಗೆಯ ಜೀವಿಗಳ ವಿನಾಶಕ್ಕೆ ಕಾರಣವಾಗಿವೆ ಎಂದು ವಿಜ್ಞಾನಿಗಳು ನುಡಿಯುತ್ತಾರೆ. ಆದರೆ ಬುದ್ಧಿಶಕ್ತಿಯನ್ನು ಹೊಂದಿರುವ ಭೂಜೀವಿಯಾದ ಮಾನವ ಇಂದು ಪುಟ್ಟ ಕ್ಷುದ್ರಗ್ರಹವೊಂದಕ್ಕೆ ತಾನು ನಿರ್ಮಿಸಿದ ಸಾಧನವೊಂದನ್ನು ಅಪ್ಪಳಿಸುವ ಕಷ್ಟಕರವಾದ ಸಾಹಸಕ್ಕೆ ಕೈಹಾಕಿದ್ದಾನೆ.
Last Updated 21 ಸೆಪ್ಟೆಂಬರ್ 2022, 0:30 IST
ಡಾರ್ಟ್! ಇದು ಆತ್ಮಾಹುತಿ ರೋಬಾಟ್‌! ಕ್ಷುದ್ರಗ್ರಹಗಳಿಂದ ಭೂಮಿ ರಕ್ಷಿಸುತ್ತಾ?

ಚಂದ್ರನ ಅನ್ವೇಷಣೆ: ಅಂದು ಅಪಾಲೋ ಇಂದು ಅರ್ಟಿಮಿಸ್

ಕನಿಷ್ಠ ಪಕ್ಷ ಒಂದು ವಾರವಾದರೂ ಇಬ್ಬರು ಗಗನಯಾತ್ರಿಗಳು ಚಂದ್ರನ ಮೇಲೆ ತಂಗುವಂತೆ ಮಾಡುವುದು ಮತ್ತು ಭವಿಷ್ಯದಲ್ಲಿ ಮಾನವರು ಅಲ್ಲಿ ಕಾಯಂ ಆಗಿ ನೆಲೆಸುವ ಕಾರ್ಯಕ್ಕೆ ನೆರವಾಗುವುದು ಆರ್ಟೆಮಿಸ್ ಕಾರ್ಯಕ್ರಮದ ಉದ್ದೇಶಗಳಾಗಿವೆ.
Last Updated 6 ಸೆಪ್ಟೆಂಬರ್ 2022, 19:30 IST
ಚಂದ್ರನ ಅನ್ವೇಷಣೆ: ಅಂದು ಅಪಾಲೋ ಇಂದು ಅರ್ಟಿಮಿಸ್
ADVERTISEMENT
ADVERTISEMENT
ADVERTISEMENT
ADVERTISEMENT