ಟ್ರೊಸ್ಟ್ ವಿಥ್ ಡೆಸ್ಟಿನಿ: ಸಾರ್ವಕಾಲಿಕ ಪ್ರಣಾಳಿಕೆ
ಭಾರತಕ್ಕೆ ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ಪ್ರಥಮ ಪ್ರಧಾನಿ ಜವಹರ ಲಾಲ್ ನೆಹರೂ ಅವರು ನೂತನ ಸಂಸತನ್ನುದ್ದೇಶಿಸಿ ಮಾಡಿದ `ಟ್ರೊಸ್ಟ್ ವಿಥ್ ಡೆಸ್ಟಿನಿ' ಭಾಷಣ ಜಗದ್ವಿಖ್ಯಾತ ಭಾಷಣಗಳಲ್ಲೊಂದಾಗಿದೆ. ಸ್ವಾತಂತ್ರ್ಯ ಸಂಭ್ರಮದ ನಡುವೆಯೇ ಸ್ವಾತಂತ್ರ್ಯ ಹೋರಾಟದ ನೋವು, ದುಮ್ಮೋನ ಎಲ್ಲವನ್ನೂ ಅಂತಸ್ಥ ಮಾಡಿಕೊಂಡು ಮುಂದಿನ ಹೊಣೆಗಾರಿಕೆಯನ್ನು ಸಂಸದರಿಗೆ ಹಾಗೂ ದೇಶದ ಜನತೆಗೆ ನೆಹರೂ ಅವರು ಮುಪ್ಪರಿಯದ ಮಾತುಗಳಲ್ಲಿ ಹೇಳಿದ್ದಾರೆ. ಅಂದು ಅವರು ಬಹಳ ದೊಡ್ಡ ಕನಸನ್ನು ಕಂಡರು; ಅದು ಪೂರ್ಣಪ್ರಮಾಣದಲ್ಲಿ ನನಸಾಗಿಲ್ಲ. ಅವರ ಎಚ್ಚರಿಕೆಯ ಮಾತುಗಳು ಇಂದಿಗೂ ಅನ್ವಯವಾಗುತ್ತವೆ. ಈಗ ಉಚಿತವಾಗಿ ನೀಡುವುದನ್ನೇ ಪ್ರಣಾಳಿಕೆ ಎಂದು ಭಾವಿಸಲಾಗಿರುವ ಸಂದರ್ಭದಲ್ಲಿ ಸಾರ್ವಕಾಲಿಕ ಪ್ರಣಾಳಿಕೆಯಂತೆ ಗೋಚರವಾಗುವ ಈ ಐತಿಹಾಸಿಕ ಭಾಷಣದ ಸಂಗ್ರಹ ರೂಪ ಇಲ್ಲಿದೆ.Last Updated 2 ಜುಲೈ 2013, 12:48 IST