ಅಸ್ವಾಭಾವಿಕ ನೈತಿಕ ನಿಲುವಿನ ಹಿಂಸೆ
ವೇಶ್ಯಾವಾಟಿಕೆಯ ಬಗ್ಗೆ ನಮ್ಮ ಈಗಿನ ಇರುಸುಮುರುಸು–ಇತ್ತೀಚಿನ ಕೆಲವು ಶತಮಾನಗಳಲ್ಲಿ ಇಸ್ಲಾಂ ಮತ್ತು ಕ್ರೈಸ್ತ ಮತಗಳ ಉಗ್ರ ನೈತಿಕ ನಿಲುವಿನ ಪ್ರಭಾವದ ಬಳುವಳಿ. ಹಿಂದೆ ವಾರಾಂಗನೆಯರು ನಮ್ಮ ಸಮಾಜದ ಅವಿಭಾಜ್ಯ ಅಂಗವಾಗಿದ್ದು ಅವರಿಗೆ ಘನತೆ ಗೌರವ ಇತ್ತು. ನೃತ್ಯ, ಸಂಗೀತ ಮುಂತಾದ ವಿದ್ಯೆಗಳಲ್ಲಿ ವಿಶೇಷ ಪರಿಣತಿ ಹೊಂದಿದವರಾಗಿರುತ್ತಿದ್ದರು. ಅನೇಕರು ಸಮಾಜಮುಖಿಗಳೂ ಆಗಿದ್ದರು. ಕರ್ನಾಟಕದಲ್ಲಿ ಅಧಿಕ ಸಂಖ್ಯೆಯ ಕೆರೆಕಟ್ಟೆಗಳನ್ನು ಕಟ್ಟಿಸಿದವರು ವೇಶ್ಯೆಯರೇ ಆಗಿದ್ದರು. ಕರ್ನಾಟಕದ ದಾವಣಗೆರೆ ಜಿಲ್ಲೆಯಲ್ಲಿರುವ ಅತಿದೊಡ್ಡ ಕೆರೆಯ ಹೆಸರು ಸೂಳೆಕೆರೆ. ಸೂಳೆಕೆರೆ, ಸೂಳೆಬಾವಿ ಹೆಸರಿನ ಊರುಗಳು ನಮ್ಮಲ್ಲಿವೆ.Last Updated 15 ಸೆಪ್ಟೆಂಬರ್ 2014, 19:30 IST