ಆರೋಗ್ಯ ಕೇಂದ್ರಗಳ ಕೊರತೆಯಿಂದಾಗಿ ಗ್ರಾಮೀಣ ಭಾಗದಲ್ಲಿ ಆರೋಗ್ಯ ಸೇವೆ ಮರೀಚಿಕೆಯಾಗಿದ್ದ ಸಂದರ್ಭದಲ್ಲಿ 46 ಹೊಸ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಘೋಷಿಸಿರುವುದು ಸಮಂಜಸವಾಗಿದೆ. ಈ ಭಾಗದಲ್ಲಿ ಹತ್ತಾರು ನದಿಗಳಿದ್ದರೂ ರೈತರ ಜಮೀನುಗಳಿಗೆ ನೀರು ಒದಗಿಸುವ ಕೆಲಸವಾಗಿರಲಿಲ್ಲ. ಹತ್ತಕ್ಕಿಂತ ಹೆಚ್ಚು ಕೆರೆ ತುಂಬಿಸುವುದು, ನವಲಿ ಸಮತೋಲನ ಜಲಾಶಯ ನಿರ್ಮಾಣದಂತಹ ಬೃಹತ್ ಯೋಜನೆ ಮತ್ತು ನಾಲ್ಕೈದು ಬ್ಯಾರೇಜ್ ನಿರ್ಮಾಣ ಮಾಡಲು ಮುಂದಾಗಿರುವುದು ರೈತರಲ್ಲಿ ಚೈತನ್ಯ ಮೂಡಿಸುವಂತಿದೆ.