ಕೊಲಂಬೊ: ‘ಹಣಕಾಸಿನ ಬಿಕ್ಕಟ್ಟಿಗೆ ಸಿಲುಕಿರುವ ಶ್ರೀಲಂಕಾದ ಆರ್ಥಿಕತೆಯ ಸುಧಾರಣೆಗೆ ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಪ್ರಕಟಿಸಿರುವ ₹24 ಸಾವಿರ ಕೋಟಿ ನೆರವನ್ನು ಅವಲಂಬಿಸದೆ ಪರ್ಯಾಯ ಮಾರ್ಗವಿಲ್ಲ’ ಎಂದು ಶ್ರೀಲಂಕಾದ ಸೆಂಟ್ರಲ್ ಬ್ಯಾಂಕ್ನ ಗವರ್ನರ್ ನಂದಲಾಲ್ ವೀರಸಿಂಘೆಂ ಹೇಳಿದ್ದಾರೆ.
ಐಎಂಎಫ್ ಘೋಷಿಸಿರುವ ಪ್ಯಾಕೇಜ್ನ ಷರತ್ತುಗಳ ಬಗ್ಗೆ ಪ್ರತಿಪಕ್ಷಗಳು ಎತ್ತಿರುವ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ‘ಆರ್ಥಿಕ ನೆರವಿನ ಪರ್ಯಾಯ ಮಾರ್ಗಗಳ ಬಗ್ಗೆ ಪ್ರಯತ್ನಿಸಿದ್ದರೆ ನಾವೇಕೆ ದಿವಾಳಿಯಾಗುತ್ತಿದ್ದೆವು? ಹಾಗಾಗಿ, ಐಎಂಎಫ್ನ ನೆರವು ಸ್ವೀಕರಿಸದೆ ಬೇರೆ ಮಾರ್ಗವಿಲ್ಲ’ ಎಂದು ಹೇಳಿದ್ದಾರೆ.
ಪ್ಯಾಕೇಜ್ನಡಿ ಘೋಷಿಸಿರುವ ಮೊತ್ತದ ಪೈಕಿ ಎರಡನೇ ಹಂತದಲ್ಲಿ ₹2,805 ಕೋಟಿ ಬಿಡುಗಡೆಗೆ ಈ ತಿಂಗಳ ಆರಂಭದಲ್ಲಿ ಐಎಂಎಫ್ ಅನುಮೋದನೆ ನೀಡಿದೆ.