ಮತ, ಧರ್ಮಗಳನ್ನು ಬದಿಗೊತ್ತಿ, ಸಹೋದರತ್ವ ವನ್ನು ಹಿಡಿದು, ಮತೀಯ ಸೌಹಾರ್ದತೆಯನ್ನು ತೋರಿ ಸಿದ ದಾರ್ಶನಿಕರು - ಕಳಸದ ಗುರುಗೋವಿಂದ ಭಟ್ಟರು ಹಾಗೂ ಶಿಶುನಾಳ ಶರೀಫರು. ಹಿಂದೂ ಹಾಗೂ ಇಸ್ಲಾಂ ಧರ್ಮಗಳ ಸಮಾನತೆ, ಸಮನ್ವಯ ಮತ್ತು ಸಮತೆಯನ್ನು, ಸಮಭಾವ, ಸಮಚಿತ್ತ ಹಾಗೂ ಸಮದೃಷ್ಟಿಯಿಂದ ನೋಡಿದಂತಹ ‘ಸಮಾನತೆಯ ಹರಿಕಾರರು’.