ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರು ವ್ಯಕ್ತಿಗಳ ಸ್ನೇಹವನ್ನು ಬೆಳೆಸುವಾಗ ಸರಿಯಾಗಿ ಯೋಚಿಸಿ
Published 28 ಏಪ್ರಿಲ್ 2024, 23:06 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಬೇಡಿಕೆ ಕಡಿಮೆ ಆಗಿರುವ ವಿದ್ವಾಂಸರಿಗೆ ಶಿಷ್ಯರ ಮೂಲಕ ಹೆಚ್ಚಿನ ಮನ್ನಣೆ, ಗೌರವ ಸಿಗುವ ಸಾಧ್ಯತೆ ಇದೆ. ಒಂಟಿತನ ಹೋಗಲಾಡಿಸಿಕೊಳ್ಳಲು ಕ್ರಿಯಾತ್ಮಕ ಕೆಲಸಗಳತ್ತ ಮನಸ್ಸು ಹರಿಸುವಿರಿ.
ವೃಷಭ
ಯುವಕ–ಯುವತಿಯರು ರಾಜಕೀಯ ಪಕ್ಷಗಳ ಹಿಂದೆ ಬಿದ್ದು ಕಾಲಹರಣ ಮಾಡದೆ ಕಾರ್ಯಗಳ ಮೇಲೆ ಗಮನಹರಿಸುವುದು ಉತ್ತಮ. ಮಗನ ಕಾರ್ಯಸಿದ್ಧಿಗೆ ಗಣೇಶನಿಗೆ ಪೂಜೆ ಮಾಡಿಸಿ.
ಮಿಥುನ
ಅಂದುಕೊಂಡ ಕಾರ್ಯದ ವಿಘ್ನಗಳನ್ನು ಸಂಘಟನೆಯಿಂದ ಪರಿಹರಿಸಿಕೊಂಡು ಪೂರ್ಣವಾಗಿದ್ದನ್ನು ಕಂಡು ಹರ್ಷವಾಗುವುದು. ಕ್ರೀಡಾಪಟುಗಳಿಗೆ ಮಾರ್ಗದರ್ಶಕರ ಸಹಾಯ ಸಿಗುತ್ತದೆ.
ಕರ್ಕಾಟಕ
ಅಕ್ಕ ಪಕ್ಕದವರ ಭಿನ್ನಾಭಿಪ್ರಾಯಗಳಿಗೆ ಪ್ರತಿಕ್ರಿಯಿಸುವುದು ಸಮಂಜಸವಲ್ಲ. ಭಾರದ ವಸ್ತುಗಳನ್ನು ಎತ್ತಿ ಇಳಿಸುವಂಥ ಕೆಲಸಗಳನ್ನು ಮಾಡಲು ಹೋಗಿ ದೇಹದ ಭಾಗಗಳನ್ನು ಉಳುಕಿಸಿಕೊಳ್ಳುತ್ತೀರಿ.
ಸಿಂಹ
ಮಾಡದೆ ಇರುವ ತಪ್ಪುಗಳ ಆಪಾದನೆ ಬಂದು ಅದನ್ನು ನಿವಾರಿಸಿ ಕೊಳ್ಳಲಾಗದೇ ತೊಳಲಾಡಬೇಕಾಗುವುದು. ಇತರರ ಬಗ್ಗೆ ಗೌರವ , ತಾಳ್ಮೆ ಹೊಂದಿರುವುದು ಬಹಳ ಮುಖ್ಯವಾಗುತ್ತದೆ.
ಕನ್ಯಾ
ಸುತ್ತಿ ಬಳಸಿ ವಿಷಯಗಳನ್ನು ಕುಟುಂಬದ ಎದುರು ಇಡುವುದಕ್ಕಿಂತ ಆಕಾಂಕ್ಷೆಗಳನ್ನು ನೇರವಾಗಿ ತಿಳಿಸಿದರೆ ಫಲಿತಾಂಶವು ದೊರೆಯುವುದು. ದಿನಸಿ ವ್ಯಾಪಾರಿಗಳಿಗೆ ಲಾಭ ಸಿಗುತ್ತದೆ.
ತುಲಾ
ಪರಿಸ್ಥಿತಿ ಹಾಗೂ ಅವಕಾಶಗಳನ್ನು ಜಾಣತನದಿಂದ ಉಪಯೋಗಿಸಿಕೊಂಡಲ್ಲಿ ಸ್ಥಿರತೆ ಪ್ರಾಪ್ತಿ . ಏಕಾಗ್ರತೆಯ ಕೊರತೆಯಿಂದ ಕೆಲಸದಲ್ಲಿ ಏನಾದರೂ ತಪ್ಪುಗಳಾಗುತ್ತಲೇ ಇರುತ್ತದೆ.
ವೃಶ್ಚಿಕ
ಕುಟುಂಬದವರು ಬಯಸುವ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸುವ ಕಡೆ ಗಮನಹರಿಸಿ. ಕೃಷ್ಣ –ಸುಧಾಮರಂಥ ಸ್ನೇಹಕ್ಕೆ ಇಲ್ಲದ ವಿಚಾರಗಳಿಗೆ ಜಗಳವೇಳುವ ಸಾಧ್ಯತೆಗಳಿವೆ.
ಧನು
ಸಿಮೆಂಟ್ ಕಾರ್ಖಾನೆಗಳಲ್ಲಿ ಕೆಲಸ ಮಾಡುವವರಿಗೆ ಶ್ವಾಸಕೋಶದ ಸಮಸ್ಯೆಗಳು ಎದುರಾಗಬಹುದು. ಮನೋಕಾಮನೆಗಳನ್ನು ಪೂರೈಸಿಕೊಳ್ಳಲು ಪ್ರಯತ್ನಿಸಿ. ಹಣದ ಅಡಚಣೆ ಇರುವುದಿಲ್ಲ.
ಮಕರ
ವ್ಯಕ್ತಿಗಳ ಸ್ನೇಹವನ್ನು ಬೆಳೆಸಿ ವ್ಯವಹರಿಸುವಾಗ ಸರಿಯಾಗಿ ಯೋಚಿಸಿ ನಿರ್ಧಾರ ತೆಗೆದುಕೊಳ್ಳಿ. ಜನರ ಎದುರು ಕಣ್ಣೀರು ಹಾಕಿ ದುಃಖವನ್ನು ವ್ಯಕ್ತಪಡಿಸಬೇಡಿ. ಉಷ್ಣದಿಂದ ಸಮಸ್ಯೆಗಳಾಗಬಹುದು.
ಕುಂಭ
ಮನೆಯ ಜಾನುವಾರು, ಸಾಕುಪ್ರಾಣಿಗಳ ಆರೋಗ್ಯದ ವಿಷಯವಾಗಿ ತಲೆಕೆಡಿಸಿಕೊಳ್ಳಬೇಕಾದ ಪರಿಸ್ಥಿತಿ ಎದುರಾಗುವುದು. ಲಾಭದ ಹಾದಿಯಲ್ಲೇ ಬಂದ ಸಣ್ಣ ನಷ್ಟವು ಒಮ್ಮೆ ಎಡವಿದಂತಾಗಬಹುದು.
ಮೀನ
ಹತ್ತಿರದ ವ್ಯಕ್ತಿಯೊಂದಿಗಿನ ವಾಗ್ವಾದವು ಮನಸ್ಸನ್ನು ಗಾಸಿಗೊಳಿಸುತ್ತದೆ. ಮನೆಯವರೆದುರು ಇರುವ ಉದ್ದಟತನವು ಮೂರನೆ ವ್ಯಕ್ತಿಗಳ ಎದುರು ಪ್ರದರ್ಶನವಾಗುವುದು ಬೇಡ.