ದಿನ ಭವಿಷ್ಯ: ಈ ರಾಶಿಯವರು ವ್ಯಕ್ತಿಗಳ ಸ್ನೇಹವನ್ನು ಬೆಳೆಸುವಾಗ ಸರಿಯಾಗಿ ಯೋಚಿಸಿ
Published 28 ಏಪ್ರಿಲ್ 2024, 23:06 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಬೇಡಿಕೆ ಕಡಿಮೆ ಆಗಿರುವ ವಿದ್ವಾಂಸರಿಗೆ ಶಿಷ್ಯರ ಮೂಲಕ ಹೆಚ್ಚಿನ ಮನ್ನಣೆ, ಗೌರವ ಸಿಗುವ ಸಾಧ್ಯತೆ ಇದೆ. ಒಂಟಿತನ ಹೋಗಲಾಡಿಸಿಕೊಳ್ಳಲು ಕ್ರಿಯಾತ್ಮಕ ಕೆಲಸಗಳತ್ತ ಮನಸ್ಸು ಹರಿಸುವಿರಿ.
28 ಏಪ್ರಿಲ್ 2024, 23:06 IST
ವೃಷಭ
ಯುವಕ–ಯುವತಿಯರು ರಾಜಕೀಯ ಪಕ್ಷಗಳ ಹಿಂದೆ ಬಿದ್ದು ಕಾಲಹರಣ ಮಾಡದೆ ಕಾರ್ಯಗಳ ಮೇಲೆ ಗಮನಹರಿಸುವುದು ಉತ್ತಮ. ಮಗನ ಕಾರ್ಯಸಿದ್ಧಿಗೆ ಗಣೇಶನಿಗೆ ಪೂಜೆ ಮಾಡಿಸಿ.
28 ಏಪ್ರಿಲ್ 2024, 23:06 IST
ಮಿಥುನ
ಅಂದುಕೊಂಡ ಕಾರ್ಯದ ವಿಘ್ನಗಳನ್ನು ಸಂಘಟನೆಯಿಂದ ಪರಿಹರಿಸಿಕೊಂಡು ಪೂರ್ಣವಾಗಿದ್ದನ್ನು ಕಂಡು ಹರ್ಷವಾಗುವುದು. ಕ್ರೀಡಾಪಟುಗಳಿಗೆ ಮಾರ್ಗದರ್ಶಕರ ಸಹಾಯ ಸಿಗುತ್ತದೆ.
28 ಏಪ್ರಿಲ್ 2024, 23:06 IST
ಕರ್ಕಾಟಕ
ಅಕ್ಕ ಪಕ್ಕದವರ ಭಿನ್ನಾಭಿಪ್ರಾಯಗಳಿಗೆ ಪ್ರತಿಕ್ರಿಯಿಸುವುದು ಸಮಂಜಸವಲ್ಲ. ಭಾರದ ವಸ್ತುಗಳನ್ನು ಎತ್ತಿ ಇಳಿಸುವಂಥ ಕೆಲಸಗಳನ್ನು ಮಾಡಲು ಹೋಗಿ ದೇಹದ ಭಾಗಗಳನ್ನು ಉಳುಕಿಸಿಕೊಳ್ಳುತ್ತೀರಿ.
28 ಏಪ್ರಿಲ್ 2024, 23:06 IST
ಸಿಂಹ
ಮಾಡದೆ ಇರುವ ತಪ್ಪುಗಳ ಆಪಾದನೆ ಬಂದು ಅದನ್ನು ನಿವಾರಿಸಿ ಕೊಳ್ಳಲಾಗದೇ ತೊಳಲಾಡಬೇಕಾಗುವುದು. ಇತರರ ಬಗ್ಗೆ ಗೌರವ , ತಾಳ್ಮೆ ಹೊಂದಿರುವುದು ಬಹಳ ಮುಖ್ಯವಾಗುತ್ತದೆ.
28 ಏಪ್ರಿಲ್ 2024, 23:06 IST
ಕನ್ಯಾ
ಸುತ್ತಿ ಬಳಸಿ ವಿಷಯಗಳನ್ನು ಕುಟುಂಬದ ಎದುರು ಇಡುವುದಕ್ಕಿಂತ ಆಕಾಂಕ್ಷೆಗಳನ್ನು ನೇರವಾಗಿ ತಿಳಿಸಿದರೆ ಫಲಿತಾಂಶವು ದೊರೆಯುವುದು. ದಿನಸಿ ವ್ಯಾಪಾರಿಗಳಿಗೆ ಲಾಭ ಸಿಗುತ್ತದೆ.
28 ಏಪ್ರಿಲ್ 2024, 23:06 IST
ತುಲಾ
ಪರಿಸ್ಥಿತಿ ಹಾಗೂ ಅವಕಾಶಗಳನ್ನು ಜಾಣತನದಿಂದ ಉಪಯೋಗಿಸಿಕೊಂಡಲ್ಲಿ ಸ್ಥಿರತೆ ಪ್ರಾಪ್ತಿ . ಏಕಾಗ್ರತೆಯ ಕೊರತೆಯಿಂದ ಕೆಲಸದಲ್ಲಿ ಏನಾದರೂ ತಪ್ಪುಗಳಾಗುತ್ತಲೇ ಇರುತ್ತದೆ.
28 ಏಪ್ರಿಲ್ 2024, 23:06 IST
ವೃಶ್ಚಿಕ
ಕುಟುಂಬದವರು ಬಯಸುವ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸುವ ಕಡೆ ಗಮನಹರಿಸಿ. ಕೃಷ್ಣ –ಸುಧಾಮರಂಥ ಸ್ನೇಹಕ್ಕೆ ಇಲ್ಲದ ವಿಚಾರಗಳಿಗೆ ಜಗಳವೇಳುವ ಸಾಧ್ಯತೆಗಳಿವೆ.
28 ಏಪ್ರಿಲ್ 2024, 23:06 IST
ಧನು
ಸಿಮೆಂಟ್ ಕಾರ್ಖಾನೆಗಳಲ್ಲಿ ಕೆಲಸ ಮಾಡುವವರಿಗೆ ಶ್ವಾಸಕೋಶದ ಸಮಸ್ಯೆಗಳು ಎದುರಾಗಬಹುದು. ಮನೋಕಾಮನೆಗಳನ್ನು ಪೂರೈಸಿಕೊಳ್ಳಲು ಪ್ರಯತ್ನಿಸಿ. ಹಣದ ಅಡಚಣೆ ಇರುವುದಿಲ್ಲ.
28 ಏಪ್ರಿಲ್ 2024, 23:06 IST
ಮಕರ
ವ್ಯಕ್ತಿಗಳ ಸ್ನೇಹವನ್ನು ಬೆಳೆಸಿ ವ್ಯವಹರಿಸುವಾಗ ಸರಿಯಾಗಿ ಯೋಚಿಸಿ ನಿರ್ಧಾರ ತೆಗೆದುಕೊಳ್ಳಿ. ಜನರ ಎದುರು ಕಣ್ಣೀರು ಹಾಕಿ ದುಃಖವನ್ನು ವ್ಯಕ್ತಪಡಿಸಬೇಡಿ. ಉಷ್ಣದಿಂದ ಸಮಸ್ಯೆಗಳಾಗಬಹುದು.
28 ಏಪ್ರಿಲ್ 2024, 23:06 IST
ಕುಂಭ
ಮನೆಯ ಜಾನುವಾರು, ಸಾಕುಪ್ರಾಣಿಗಳ ಆರೋಗ್ಯದ ವಿಷಯವಾಗಿ ತಲೆಕೆಡಿಸಿಕೊಳ್ಳಬೇಕಾದ ಪರಿಸ್ಥಿತಿ ಎದುರಾಗುವುದು. ಲಾಭದ ಹಾದಿಯಲ್ಲೇ ಬಂದ ಸಣ್ಣ ನಷ್ಟವು ಒಮ್ಮೆ ಎಡವಿದಂತಾಗಬಹುದು.
28 ಏಪ್ರಿಲ್ 2024, 23:06 IST
ಮೀನ
ಹತ್ತಿರದ ವ್ಯಕ್ತಿಯೊಂದಿಗಿನ ವಾಗ್ವಾದವು ಮನಸ್ಸನ್ನು ಗಾಸಿಗೊಳಿಸುತ್ತದೆ. ಮನೆಯವರೆದುರು ಇರುವ ಉದ್ದಟತನವು ಮೂರನೆ ವ್ಯಕ್ತಿಗಳ ಎದುರು ಪ್ರದರ್ಶನವಾಗುವುದು ಬೇಡ.
28 ಏಪ್ರಿಲ್ 2024, 23:06 IST