ಕಾರವಾರ: ಬರಗಲ್ ಸಮೀಪ ಭಾನುವಾರ ಬೈಕಿಗೆ ಕೆಎಸ್ಆರ್ಟಿಸಿ ಬಸ್ ಡಿಕ್ಕಿಯಾಗಿ ಬೈಕ್ ಸವಾರ ಡೆಪ್ಯುಟಿ ಫಾರೆಸ್ಟರ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೋಹನ ರಾಠೋಡ (32)ಮೃತ ದುರ್ದೈವಿ. ಸಿದ್ಧರ ಅರಣ್ಯವಲಯದಲ್ಲಿ ಉಪ ಅರಣ್ಯಪಾಲಕರಾಗಿ ಕೆಲಸ ಮಾಡುತ್ತಿದ್ದರು.
ದೇವಳಮಕ್ಕಿಯಿಂದ ಸಿದ್ದರಕ್ಕೆ ತೆರಳುತ್ತಿದ್ದಾಗ ಘಟನೆ ಸಂಭವಿಸಿದೆ. ಮಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.