ಕಾಡುಪ್ರಾಣಿಗಳ ಬಗ್ಗೆ ಮಾನವೀಯತೆ ತೋರಿಸುವ ಮನುಷ್ಯರ ನಡವಳಿಕೆ ಕುರಿತ ಡಾ. ಅಶೋಕ್ ಕೆ.ಆರ್. ಅವರ ಲೇಖನ (ಸಂಗತ, ಸೆ. 23) ವಿಚಾರಯೋಗ್ಯವಾಗಿದೆ.
ತಾನು ಮಾಡುತ್ತಿರುವ ಪ್ರಕೃತಿ ನಿಯಮದ ಉಲ್ಲಂಘನೆಯನ್ನು ವಿಶ್ಲೇಷಿಸುವ ಮನುಷ್ಯನ ಮನಸ್ಸು, ತನ್ನ ಆಯುರ್ವೃದ್ಧಿಗಾಗಿ ಮಾಡುವ ಕಾರ್ಯಗಳನ್ನು, ನಡೆಸುವ ಅಂತ್ಯಸಂಸ್ಕಾರವನ್ನು ‘ಜೀವನಪ್ರೀತಿ’ ಎಂಬ ಉದಾತ್ತ ಪದದ ಚೌಕಟ್ಟಿನಲ್ಲಿರಿಸುವುದು ಸರಿಯೇ ಎಂಬ ಜಿಜ್ಞಾಸೆ ಕಾಡುತ್ತದೆ. ಈ ದೃಷ್ಟಿಯಲ್ಲಿ, ಪಾರ್ಸಿಗಳ ಅಂತ್ಯಸಂಸ್ಕಾರ ವಿಧಿಯೇ ಸರ್ವೋತ್ತಮವೆನಿಸೀತು!
–ಕೃ.ನಾಗೇಶ, ಅರಸೀಕೆರೆ