ಬೆಂಗಳೂರು: ಕೆಲಸ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದ ಮಣಿಪುರ ಮೂಲದ ಐವರ ಮೇಲೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿರುವ ಘಟನೆ ನಗರದ ಆಸ್ಟಿನ್ ಟೌನ್ ಬಳಿ ಸೋಮವಾರ ನಡೆದಿದೆ.
ಮಣಿಪುರದ ಬುಡಕಟ್ಟಿನ ‘ಕುಕಿ’ ಸಮುದಾಯಕ್ಕೆ ಸೇರಿದ ಇಬ್ಬರು ಬೆಳಗಿನ ಜಾವ 3ರ ಸುಮಾರಿಗೆ ಕೆಲಸ ಮುಗಿ ಸಿಕೊಂಡು ಬೈಕ್ಗಳಲ್ಲಿ ಮನೆಗೆ ಹೋಗುತ್ತಿದ್ದರು. ಈ ವೇಳೆ ಬೈಕ್ಗಳನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ.
ಇದೇ ಮಾರ್ಗವಾಗಿ ಹೋಗುತ್ತಿದ್ದ ಮಣಿಪುರದ ಮತ್ತೊಂದು ಬುಡಕಟ್ಟಿನ ‘ತಂಗ್ಖುಲ್’ ಸಮುದಾಯದ ಮೂವರು ಹಲ್ಲೆಗೊಳಗಾದವರ ನೆರವಿಗೆ ಬಂದಿದ್ದಾರೆ. ಇದನ್ನು ಗಮನಿಸಿದ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.
ಘಟನೆಯಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಉಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ಸೇಂಟ್ ಫಿಲೋಮಿನಾ ಆಸ್ಪತ್ರೆಗೆ ದಾಖಲಿಸಲಾಗಿದೆ.
‘ದುಷ್ಕರ್ಮಿಗಳು ನಮ್ಮ ಬಳಿ ಇದ್ದ ಹಣ ಹಾಗೂ ಬೈಕ್ಗಳನ್ನು ಕಿತ್ತುಕೊಂಡು ಪರಾರಿಯಾದರು’ ಎಂದು ಗಾಯಾಳುಗಳು ತಿಳಿಸಿದರು.
ಆದರೆ, ಈ ಸಂಬಂಧ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಯಾವುದೇ ದೂರು ದಾಖಲಾಗಿಲ್ಲ.