ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರಕಾಸ್ತ್ರಗಳಿಂದ ಫೈನಾನ್ಶಿಯರ್‌ ಕೊಲೆ

Last Updated 2 ಡಿಸೆಂಬರ್ 2016, 19:56 IST
ಅಕ್ಷರ ಗಾತ್ರ

ಬೆಂಗಳೂರು: ಬನಶಂಕರಿ ಬಳಿಯ ಯಾರಬ್‌ ನಗರದಲ್ಲಿ ಶುಕ್ರವಾರ ರಾತ್ರಿ ದುಷ್ಕರ್ಮಿಗಳು, ಅವಿನಾಶ್‌ ಆನಂದ್‌ (34) ಎಂಬುವರನ್ನು ಮಾರಕಾಸ್ತ್ರ ಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.

‘ಬೈಯನಪಾಳ್ಯದ ನಿವಾಸಿ ಅವಿ ನಾಶ್‌, ಫೈನಾನ್ಶಿಯರ್‌ ಆಗಿದ್ದರು. ರಾತ್ರಿ 10ರ ಸುಮಾರಿಗೆ  ಕಾರಿನಲ್ಲಿ ಚಾಮರಾಜ ಪೇಟೆಯಿಂದ ಮನೆಗೆ ಹೋಗುತ್ತಿದ್ದರು. ಈ ವೇಳೆ ಇನ್ನೋವಾ ಕಾರಿನಲ್ಲಿ ಹಿಂಬಾ ಲಿಸಿಕೊಂಡು ಬಂದ ದುಷ್ಕರ್ಮಿಗಳು ಕೃತ್ಯ ಎಸಗಿ ಪರಾರಿಯಾಗಿದ್ದಾರೆ’ ಎಂದು ಪೊಲೀಸರು ತಿಳಿಸಿದರು. 

‘ಹಲವು ಗಂಟೆಗಳವರೆಗೆ ಅವಿನಾಶ್‌ ಅವರನ್ನು  ಹಿಂಬಾಲಿಸುತ್ತಿದ್ದ ದುಷ್ಕರ್ಮಿ ಗಳು, ಯಾರಬ್‌ ನಗರದ 1ನೇ ಕ್ರಾಸ್‌ ನಲ್ಲಿ ಅವರ ಕಾರು ತಡೆದು ನಿಲ್ಲಿಸಿದ್ದರು. ಕಾರಿನ ಬಾಗಿಲು ತೆಗೆಯುತ್ತಿದ್ದಂತೆ ದಾಳಿ ನಡೆಸಿದ ದುಷ್ಕರ್ಮಿಗಳು, ಮಾರಕಾಸ್ತ್ರ ಗಳಿಂದ  ತಲೆ ಹಾಗೂ ಕೈಗೆ ಹೊಡೆದಿದ್ದರು.

 ಅವಿನಾಶ್‌ ಸ್ಥಳದಲ್ಲೇ ಅಸುನೀಗಿದ್ದಾರೆ.   ಅವಿನಾಶ್‌ ವಿರುದ್ಧ  ಹಲವು ಠಾಣೆಗಳಲ್ಲಿ ಪ್ರಕರಣ ದಾಖಲಾಗಿರುವ ಬಗ್ಗೆ ಮಾಹಿತಿ ಇದೆ. ಆ ಬಗ್ಗೆ ಪರಿಶೀಲನೆ ನಡೆಸಲಾಗು ತ್ತಿದೆ. ಆರೋಪಿಗಳ ಪತ್ತೆಗೆ 4 ತಂಡ ರಚಿಸಲಾಗಿದೆ’ ಎಂದು  ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT