<p><strong>ಶಾಂತರಸ ಪ್ರಧಾನ ವೇದಿಕೆ (ರಾಯಚೂರು):</strong> ‘ಸಾಮಾಜಿಕ ಅಸಮಾನತೆ ಕೊನೆಗೊಳ್ಳುವವರೆಗೆ ದಲಿತ ಮತ್ತು ಬಂಡಾಯ ಸಾಹಿತ್ಯದ ವಸ್ತು ಲೇಖಕರಲ್ಲಿ ಜೀವಂತವಾಗಿರುತ್ತದೆ. ಹೊಸ ತಲೆಮಾರಿನ ಯುವಕರಿಗೂ ದಲಿತ ಹಾಗೂ ಬಂಡಾಯ ಸಾಹಿತ್ಯದ ವಸ್ತು ಇಷ್ಟ’ ಎಂದು ಸಾಹಿತಿ ಡಾ.ಎಲ್. ಹನುಮಂತಯ್ಯ ಹೇಳಿದರು.<br /> 82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ‘ದಲಿತ, ಬಂಡಾಯ ಸಾಹಿತ್ಯ ಮತ್ತು ಚಳವಳಿಗಳು‘ ಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹೊಸ ತಲೆಮಾರಿನವರು ಬರೆಯುತ್ತಿರುವ ರೀತಿ ಭಿನ್ನವಾಗಿದೆ. ಆದರೆ ಅವರು ಜಾತಿ, ವರ್ಗ, ಸಾಮಾಜಿಕ ಪಲ್ಲಟಗಳ ಬಗ್ಗೆಯೇ ಬರೆಯುತ್ತಿದ್ದಾರೆ’ ಎಂದರು.<br /> <br /> <strong>‘ಪ್ರಜಾವಾಣಿ’ ಗಮನಿಸಿ:</strong><br /> ‘ಕನ್ನಡ ಪತ್ರಿಕೆಗಳ, ಅದರಲ್ಲೂ ಮುಖ್ಯವಾಗಿ ‘ಪ್ರಜಾವಾಣಿ’ಯ ಕಥಾಸ್ಪರ್ಧೆಗಳಲ್ಲಿ ಬರೆಯುವ ಯುವ ಬರಹಗಾರರನ್ನು ಗಮನಿಸಬೇಕು. ಅವರ ಬರಹಗಳಲ್ಲಿ ಬಂಡಾಯದ ಭಾಷೆ ಇದೆ’ ಎಂದು ಹೇಳಿದರು.<br /> <br /> ‘ಇಂದಿನ ಲೇಖಕರಿಗೆ ಪ್ರೇರಣೆ ನೀಡಬಲ್ಲ ಯಾವ ಚಳವಳಿಯೂ ಇಲ್ಲ. ಹಾಗಾಗಿ, ಅಕಾಡೆಮಿಗಳು ಹಾಗೂ ಹಿರಿಯ ಲೇಖಕರು ಕಿರಿಯರಿಗೆ ತರಬೇತಿ ಕಾರ್ಯಕ್ರಮ ಆಯೋಜಿಸಬೇಕು’ ಎಂದು ಸಲಹೆ ನೀಡಿದರು.<br /> <br /> ಪ್ರಾಧ್ಯಾಪಕ ಡಾ. ಚಿನ್ನಸ್ವಾಮಿ ಸೋಸಲೆ ಮಾತನಾಡಿ ‘ಇಂಗ್ಲಿಷ್ ಶಿಕ್ಷಣ ಪಡೆದಿದ್ದ ಕೆಲವರು ಹಾಗೂ ಕೆಲವು ಮಾರ್ಕ್ಸ್ ವಾದಿಗಳು ರಾಜ್ಯದಲ್ಲಿ ದಲಿತ ಚಳವಳಿಗೆ ದೊಡ್ಡ ಕೊಡುಗೆ ನೀಡಿದರು. ಅಸ್ಪೃಶ್ಯರ ಸಾಹಿತ್ಯಕ್ಕೆ ಬ್ರಾಹ್ಮಣೇತರ ಸಾಹಿತಿಗಳ ಕೊಡುಗೆ ದೊಡ್ಡದು’ ಎಂದು ಅಭಿಪ್ರಾಯಪಟ್ಟರು.<br /> <br /> ‘ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ಮೈಸೂರು ಪ್ರವೇಶಿಸಲು ಡಾ.ಬಿ.ಆರ್. ಅಂಬೇಡ್ಕರ್ ಅವರಿಗೆ ಸಾಧ್ಯವಾಗಲಿಲ್ಲ. ನಮ್ಮಲ್ಲಿ ಅಲಿಖಿತ ಸಂವಿಧಾನ ಆಡಳಿತ ನಡೆಸುತ್ತಿದೆ. ಲಿಖಿತ ಸಂವಿಧಾನಕ್ಕೆ ಎಲ್ಲರೂ ಬೆಲೆ ಕೊಡುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.<br /> <br /> ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಲಕ್ಷ್ನೀನಾರಾಯಣ ನಾಗವಾರ ಮಾತನಾಡಿ, ‘ಕೆಲವು ಪ್ರಗತಿಪರರು ಮೇಲೆ ಬರಲು ಮಾತ್ರ ಜಾತೀಯತೆಯ ಬಗ್ಗೆ ಮಾತನಾಡುತ್ತಾರೆ. ಆದರೆ, ಆಂತರ್ಯದಲ್ಲಿ ಅವರು ಎಷ್ಟು ಶುದ್ಧರು ಎಂಬುದು ಪ್ರಶ್ನಾರ್ಹವಾಗಿಯೇ ಉಳಿದಿರುತ್ತದೆ’ ಎಂದರು.<br /> <br /> <strong>‘ದುಡಿಮೆ ಕೊಡಿ, ಪುಕ್ಕಟೆ ಕೊಡುಗೆ ಬೇಡ’</strong><br /> ರಾಯಚೂರು: ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಇಂದಿರಾ ಗಾಂಧಿ ರಾಷ್ಟ್ರೀಯ ಬುಡಕಟ್ಟು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ತೇಜಸ್ವಿ ಕಟ್ಟಿಮನಿ, ‘ದಲಿತರು ದುಡಿಯಲು ಸಿದ್ಧರಿದ್ದಾರೆ. ಸರ್ಕಾರಗಳು ಅವರಿಗೆ ದುಡಿಮೆಯ ಮಾರ್ಗ ದೊರಕಿಸಬೇಕು. ಪುಕ್ಕಟ್ಟೆಯಾಗಿ ಅದು-ಇದು ಕೊಡುವುದು ಸರಿಯಲ್ಲ’ ಎಂದರು.</p>.<p>‘ಸತತ ಐದು ವರ್ಷ ಪಡಿತರ ಅಕ್ಕಿಗೆ ಹೊಂದಿಕೊಂಡ ಜನರ ಪರಿಸ್ಥಿತಿ, ಕೊನೆಗೊಂದು ದಿನ ಅಕ್ಕಿ ಸಿಗುವುದು ನಿಂತಾಗ ಏನಾಗಬಹುದು. ಪುಕ್ಕಟ್ಟೆಯಾಗಿ ಏನಾದರೂ ಕೊಡುವುದಿದ್ದರೆ ಶಿಕ್ಷಣ, ಕೌಶಲ ತರಬೇತಿ ಕೊಡಿ’ ಎಂದು ಸರ್ಕಾರಕ್ಕೆ ಸಲಹೆ ನೀಡಿದರು.<br /> <br /> ‘ಅನುಕೂಲಸ್ಥ ದಲಿತರು, ದಲಿತರಿಗೆ ಸರ್ಕಾರ ಕೊಡುವ ಸವಲತ್ತುಗಳನ್ನು ಪಡೆಯಬಾರದು. ಅಂಥ ಸವಲತ್ತುಗಳನ್ನು ಬಡ ದಲಿತರ ಮಕ್ಕಳಿಗೆ ಬಿಟ್ಟುಕೊಡಬೇಕು. ನಾನು ಕೂಡ ಈ ಮಾತನ್ನು ಪಾಲಿಸುತ್ತಿದ್ದೇನೆ’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಾಂತರಸ ಪ್ರಧಾನ ವೇದಿಕೆ (ರಾಯಚೂರು):</strong> ‘ಸಾಮಾಜಿಕ ಅಸಮಾನತೆ ಕೊನೆಗೊಳ್ಳುವವರೆಗೆ ದಲಿತ ಮತ್ತು ಬಂಡಾಯ ಸಾಹಿತ್ಯದ ವಸ್ತು ಲೇಖಕರಲ್ಲಿ ಜೀವಂತವಾಗಿರುತ್ತದೆ. ಹೊಸ ತಲೆಮಾರಿನ ಯುವಕರಿಗೂ ದಲಿತ ಹಾಗೂ ಬಂಡಾಯ ಸಾಹಿತ್ಯದ ವಸ್ತು ಇಷ್ಟ’ ಎಂದು ಸಾಹಿತಿ ಡಾ.ಎಲ್. ಹನುಮಂತಯ್ಯ ಹೇಳಿದರು.<br /> 82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ‘ದಲಿತ, ಬಂಡಾಯ ಸಾಹಿತ್ಯ ಮತ್ತು ಚಳವಳಿಗಳು‘ ಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹೊಸ ತಲೆಮಾರಿನವರು ಬರೆಯುತ್ತಿರುವ ರೀತಿ ಭಿನ್ನವಾಗಿದೆ. ಆದರೆ ಅವರು ಜಾತಿ, ವರ್ಗ, ಸಾಮಾಜಿಕ ಪಲ್ಲಟಗಳ ಬಗ್ಗೆಯೇ ಬರೆಯುತ್ತಿದ್ದಾರೆ’ ಎಂದರು.<br /> <br /> <strong>‘ಪ್ರಜಾವಾಣಿ’ ಗಮನಿಸಿ:</strong><br /> ‘ಕನ್ನಡ ಪತ್ರಿಕೆಗಳ, ಅದರಲ್ಲೂ ಮುಖ್ಯವಾಗಿ ‘ಪ್ರಜಾವಾಣಿ’ಯ ಕಥಾಸ್ಪರ್ಧೆಗಳಲ್ಲಿ ಬರೆಯುವ ಯುವ ಬರಹಗಾರರನ್ನು ಗಮನಿಸಬೇಕು. ಅವರ ಬರಹಗಳಲ್ಲಿ ಬಂಡಾಯದ ಭಾಷೆ ಇದೆ’ ಎಂದು ಹೇಳಿದರು.<br /> <br /> ‘ಇಂದಿನ ಲೇಖಕರಿಗೆ ಪ್ರೇರಣೆ ನೀಡಬಲ್ಲ ಯಾವ ಚಳವಳಿಯೂ ಇಲ್ಲ. ಹಾಗಾಗಿ, ಅಕಾಡೆಮಿಗಳು ಹಾಗೂ ಹಿರಿಯ ಲೇಖಕರು ಕಿರಿಯರಿಗೆ ತರಬೇತಿ ಕಾರ್ಯಕ್ರಮ ಆಯೋಜಿಸಬೇಕು’ ಎಂದು ಸಲಹೆ ನೀಡಿದರು.<br /> <br /> ಪ್ರಾಧ್ಯಾಪಕ ಡಾ. ಚಿನ್ನಸ್ವಾಮಿ ಸೋಸಲೆ ಮಾತನಾಡಿ ‘ಇಂಗ್ಲಿಷ್ ಶಿಕ್ಷಣ ಪಡೆದಿದ್ದ ಕೆಲವರು ಹಾಗೂ ಕೆಲವು ಮಾರ್ಕ್ಸ್ ವಾದಿಗಳು ರಾಜ್ಯದಲ್ಲಿ ದಲಿತ ಚಳವಳಿಗೆ ದೊಡ್ಡ ಕೊಡುಗೆ ನೀಡಿದರು. ಅಸ್ಪೃಶ್ಯರ ಸಾಹಿತ್ಯಕ್ಕೆ ಬ್ರಾಹ್ಮಣೇತರ ಸಾಹಿತಿಗಳ ಕೊಡುಗೆ ದೊಡ್ಡದು’ ಎಂದು ಅಭಿಪ್ರಾಯಪಟ್ಟರು.<br /> <br /> ‘ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ಮೈಸೂರು ಪ್ರವೇಶಿಸಲು ಡಾ.ಬಿ.ಆರ್. ಅಂಬೇಡ್ಕರ್ ಅವರಿಗೆ ಸಾಧ್ಯವಾಗಲಿಲ್ಲ. ನಮ್ಮಲ್ಲಿ ಅಲಿಖಿತ ಸಂವಿಧಾನ ಆಡಳಿತ ನಡೆಸುತ್ತಿದೆ. ಲಿಖಿತ ಸಂವಿಧಾನಕ್ಕೆ ಎಲ್ಲರೂ ಬೆಲೆ ಕೊಡುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.<br /> <br /> ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಲಕ್ಷ್ನೀನಾರಾಯಣ ನಾಗವಾರ ಮಾತನಾಡಿ, ‘ಕೆಲವು ಪ್ರಗತಿಪರರು ಮೇಲೆ ಬರಲು ಮಾತ್ರ ಜಾತೀಯತೆಯ ಬಗ್ಗೆ ಮಾತನಾಡುತ್ತಾರೆ. ಆದರೆ, ಆಂತರ್ಯದಲ್ಲಿ ಅವರು ಎಷ್ಟು ಶುದ್ಧರು ಎಂಬುದು ಪ್ರಶ್ನಾರ್ಹವಾಗಿಯೇ ಉಳಿದಿರುತ್ತದೆ’ ಎಂದರು.<br /> <br /> <strong>‘ದುಡಿಮೆ ಕೊಡಿ, ಪುಕ್ಕಟೆ ಕೊಡುಗೆ ಬೇಡ’</strong><br /> ರಾಯಚೂರು: ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಇಂದಿರಾ ಗಾಂಧಿ ರಾಷ್ಟ್ರೀಯ ಬುಡಕಟ್ಟು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ತೇಜಸ್ವಿ ಕಟ್ಟಿಮನಿ, ‘ದಲಿತರು ದುಡಿಯಲು ಸಿದ್ಧರಿದ್ದಾರೆ. ಸರ್ಕಾರಗಳು ಅವರಿಗೆ ದುಡಿಮೆಯ ಮಾರ್ಗ ದೊರಕಿಸಬೇಕು. ಪುಕ್ಕಟ್ಟೆಯಾಗಿ ಅದು-ಇದು ಕೊಡುವುದು ಸರಿಯಲ್ಲ’ ಎಂದರು.</p>.<p>‘ಸತತ ಐದು ವರ್ಷ ಪಡಿತರ ಅಕ್ಕಿಗೆ ಹೊಂದಿಕೊಂಡ ಜನರ ಪರಿಸ್ಥಿತಿ, ಕೊನೆಗೊಂದು ದಿನ ಅಕ್ಕಿ ಸಿಗುವುದು ನಿಂತಾಗ ಏನಾಗಬಹುದು. ಪುಕ್ಕಟ್ಟೆಯಾಗಿ ಏನಾದರೂ ಕೊಡುವುದಿದ್ದರೆ ಶಿಕ್ಷಣ, ಕೌಶಲ ತರಬೇತಿ ಕೊಡಿ’ ಎಂದು ಸರ್ಕಾರಕ್ಕೆ ಸಲಹೆ ನೀಡಿದರು.<br /> <br /> ‘ಅನುಕೂಲಸ್ಥ ದಲಿತರು, ದಲಿತರಿಗೆ ಸರ್ಕಾರ ಕೊಡುವ ಸವಲತ್ತುಗಳನ್ನು ಪಡೆಯಬಾರದು. ಅಂಥ ಸವಲತ್ತುಗಳನ್ನು ಬಡ ದಲಿತರ ಮಕ್ಕಳಿಗೆ ಬಿಟ್ಟುಕೊಡಬೇಕು. ನಾನು ಕೂಡ ಈ ಮಾತನ್ನು ಪಾಲಿಸುತ್ತಿದ್ದೇನೆ’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>