ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬುಧವಾರ, 21–12–1966

Last Updated 20 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ಡಾ. ಮಹಿಷಿ, ಕೊಳ್ಕೆಬೈಲ್‌ಗೆ ಲೋಕಸಭೆ ಟಿಕೆಟ್‌
(ಪ್ರಜಾವಾಣಿ ಪ್ರತಿನಿಧಿಯಿಂದ)
ನವದೆಹಲಿ, ಡಿ. 20–
ಮೈಸೂರು ಪ್ರದೇಶ ಕಾಂಗ್ರೆಸಿನ ಚುನಾವಣಾ ಸಮಿತಿಯು ಶಿಫಾರಸು ಮಾಡಿದ್ದ ಮೈಸೂರು ಕಾಂಗ್ರೆಸ್‌ ಅಭ್ಯರ್ಥಿಗಳ ಪಟ್ಟಿಯನ್ನು ಕೆಲವು ಸಣ್ಣ ಪುಟ್ಟ ಬದಲಾವಣೆಗಳೊಡನೆ ಕೇಂದ್ರ ಚುನಾವಣಾ ಸಮಿತಿಯು ಇಂದು ಅನುಮೋದಿಸಿತು.

ರಾಜ್ಯ ವಿಧಾನ ಸಭೆ ಅಭ್ಯರ್ಥಿಗಳ ಪಟ್ಟಿಯಲ್ಲಿ ಮೂರು ಅಥವಾ ನಾಲ್ಕು ಮಾರ್ಪಾಡುಗಳನ್ನು ಕೇಂದ್ರ ಸಮಿತಿ ಮಾಡಿದೆ.

ಪ್ರಧಾನ ಮಂತ್ರಿಯ ಪಾರ್ಲಿಮೆಂಟರಿ ಕಾರ್ಯದರ್ಶಿಯಾದ ಡಾ. ಸರೋಜಿನಿ ಮಹಿಷಿಯವರಿಗೆ ಉತ್ತರ ಧಾರವಾಡ ಲೋಕಸಭೆ ಕ್ಷೇತ್ರವನ್ನು ನೀಡಲುಕೇಂದ್ರ ಚುನಾವಣಾ ಸಮಿತಿಯುಅತ್ಯಧಿಕ ಬಹುಮತದಿಂದ ಒಪ್ಪಿಗೆ ಕೊಟ್ಟಿದೆ. ಇದು ಕೇಂದ್ರ ಸಮಿತಿ ರಾಜ್ಯ ಪಟ್ಟಿಯಲ್ಲಿ ಮಾಡಿರುವ ಏಕೈಕ ಮುಖ್ಯ ಬದಲಾವಣೆ.
(ಡಾ. ಸರೋಜಿನಿ ಮಹಿಷಿಯವರಿಗೆ ಪ್ರದೇಶ ಕಾಂಗ್ರೆಸ್‌ ಚುನಾವಣಾ ಸಮಿತಿಯು ಟಿಕೆಟ್‌ ನೀಡಿರಲಿಲ್ಲ).

ಲೋಕಸಭೆಗೆ ಮತ್ತೆ ಸ್ಪರ್ಧಿಸದಿರಲು ಟಿ.ಟಿ.ಕೆ. ದೃಢ ನಿರ್ಧಾರ
ಮದ್ರಾಸ್‌, ಡಿ. 20–
ಮುಂಬರುವ ಸಾರ್ವತ್ರಿಕ ಚುನಾವಣೆಗಳಲ್ಲಿ ತಾವು ಲೋಕಸಭೆಗೆ ಸ್ಪರ್ಧಿಸುವುದಿಲ್ಲವೆಂದು ಮಾಜಿ ಅರ್ಥ ಸಚಿವ ಶ್ರೀ ಟಿ.ಟಿ. ಕೃಷ್ಣಮಾಚಾರಿ ಅವರು ಇಂದು ಇಲ್ಲಿ ಮತ್ತೊಮ್ಮೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT