ಚಿಕ್ಕಮಗಳೂರು: ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂಸ್ಥಾಪಿಸಿದ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ ರಾಷ್ಟ್ರೀಯ ಸಮಾವೇಶ ಇದೇ 30 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿದೆ ಎಂದು ಆರ್ಪಿಐ ರಾಜ್ಯ ಸಂಘಟನಾ ಕಾರ್ಯ ದರ್ಶಿ ಟಿ.ಸಿ.ಕೃಷ್ಣಪ್ರಸಾದ್ ತಿಳಿಸಿದರು.
ನಗರದಲ್ಲಿ ಮಂಗಳವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾರಾಷ್ಟ್ರ ಮತ್ತು ದೆಹಲಿಗೆ ಸೀಮಿತ ವಾಗಿದ್ದ ಆರ್ಪಿಐ ರಾಷ್ಟ್ರೀಯ ಅಧಿ ವೇಶನ ಪ್ರಥಮ ಬಾರಿಗೆ ಕರ್ನಾಟಕದಲ್ಲಿ ನಡೆಯುತ್ತಿದೆ ಎಂದು ತಿಳಿಸಿದರು.
ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಮ್ ದಾಸ್ ಅಠವಳೆ ಕೇಂದ್ರ ಸಚಿವರಾದ ನಂತರ ಪ್ರಥಮ ರಾಷ್ಟ್ರೀಯ ಕಾರ್ಯ ಕಾರಿಣಿಯಲ್ಲಿ ಬೆಂಗಳೂರಿನಲ್ಲಿ ರಾಷ್ಟ್ರೀಯ ಅಧಿವೇಶನ ಆಯೋಜಿಸು ವುದಾಗಿ ಪ್ರಕಟಿಸಿದ್ದರು. ಆರ್ಪಿಐ 60 ವರ್ಷ ಪೂರೈಸುವ ಸಂದರ್ಭ ಅಂಬೇ ಡ್ಕರ್ ಅವರ 125ನೇ ಜಯಂತಿಯನ್ನು ಏಕೀಕರಿಸಿ 29ರಂದು ಬೆಳಿಗ್ಗೆ 11.30ಕ್ಕೆ ಬೆಂಗಳೂರಿನ ಹೋಟೆಲ್ ಕ್ಯಾಪಿಟಲ್ನ ಸೆನೆಟ್ ಸಭಾಂಗಣದಲ್ಲಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಡೆಯಲಿದೆ.
30 ರಾಜ್ಯಗಳ ಆರ್ಪಿಐ ಪದಾಧಿಕಾರಿಗಳು, ಕಾರ್ಯಕಾರಿಣಿ ಸದಸ್ಯರು ದೇಶದ ಪ್ರಚಲಿತ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚಿಸಿ ಹಲವು ರಾಜಕೀಯ ನಿರ್ಣಯ ತೆಗೆದುಕೊಳ್ಳಲಿದ್ದಾರೆ ಎಂದರು.
ಮುಂದಿನ ವರ್ಷ ರಾಜ್ಯದಲ್ಲಿ ನಡೆಯುವ ವಿಧಾನಸಭೆ ಚುನಾವ ಣೆಯಲ್ಲಿ ಆರ್ಪಿಐ ಸ್ಪರ್ಧಿಸುವ ಬಗ್ಗೆ ಚರ್ಚಿಸಲಾಗುವುದು. ಚುನಾವಣೆಗೆ ಪಕ್ಷ ಸಜ್ಜುಗೊಳಿಸುವ ಮಹತ್ವದ ನಿರ್ಣಯ ಕೈಗೊಳ್ಳಲಿದ್ದಾರೆ. ಕಾರ್ಯಕಾರಿಣಿ ಸಭೆಯ ನಿರ್ಣಯಗಳನ್ನು 30ರಂದು ಮಧ್ಯಾಹ್ನ 12ಕ್ಕೆ ಬಹಿರಂಗ ಸಭೆಯಲ್ಲಿ ಅನುಮೋದಿಸಲಾಗುವುದು ಎಂದರು.
ಸದಸ್ಯತ್ವ ಅಭಿಯಾನ, ಕಾರ್ಮಿಕ ಘಟಕ ರಿಪಬ್ಲಿಕನ್ ಟ್ರೇಡ್ ಯೂನಿ ಯನ್, ವಿದ್ಯಾರ್ಥಿ ಘಟಕ ರಿಪಬ್ಲಿಕನ್ ಸ್ಟೂಡೆಂಟ್ ಫೆಡರೇಷನ್, ವಕೀಲರ ಘಟಕ ರಿಪಬ್ಲಿಕನ್ ಲಾಯರ್್ಸ ಫೆಡ ರೇಷನ್, ಮಹಿಳಾ ಘಟಕ ರಿಪಬ್ಲಿಕನ್ ವುಮೆನ್ ಫೆಡರೇಷನ್ ಮತ್ತಿತರ ಘಟಕಗಳಿಗೆ ರಾಷ್ಟ್ರಮಟ್ಟದಲ್ಲಿ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.
ಬಹಿರಂಗ ಸಮಾವೇಶದಲ್ಲಿ ಚಿತ್ರದುರ್ಗ ಮುರುಘಾ ಮಠದ ಡಾ. ಶಿವಮೂರ್ತಿ ಶರಣರು, ಬೌದ್ಧ ಬಿಕ್ಕುಗಳು ಸಾನ್ನಿಧ್ಯ ವಹಿಸುವರು. ಮುಸ್ಲಿಂ, ಕ್ರೈಸ್ತ, ಸಿಖ್, ಜೈನ ಧರ್ಮ ಗುರುಗಳು ಪಾಲ್ಗೊ ಳ್ಳುವರು. ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಮುಖಂಡರು ಭಾಗವಹಿ ಸುವರು. ಕೇಂದ್ರ ಸಚಿವ ರಾಮದಾಸ್ ಅಠವಳೆ ಉದ್ಘಾಟಿಸುವರು. ಡಾ. ಎಂ. ವೆಂಕಟಸ್ವಾಮಿ, ಆರ್ಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಮಂಜುನಾಥ್, ರಾಜ್ಯ ಸಂಘಟನಾ ಕಾರ್ಯದರ್ಶಿ ಗೋಪಾಲ ಕೃಷ್ಣ, ರವಿಶಂಕರ್ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.