ನಾಟಕದ ಕಥಾ ವಸ್ತು: ವಿಲಿಯಂ ಷೇಕ್ಸ್ ಪಿಯರನು ಅಸುನೀಗಿದ ಬಳಿಕ ಅವನ ನಾಟಕಗಳ ಖ್ಯಾತಿ ವಿಶ್ವದಾದ್ಯಂತ ಪಸರಿಸಿರುತ್ತದೆ. ಆತನ ನಾಟಕಗಳು, ಉಡುಗೆ ತೊಡುಗೆಗಳು, ಆತ ಬಳಸಿದ ಸಾಮಗ್ರಿಗಳು ಲಕ್ಷಾಂತರ ಪೌಂಡ್ಗಳಿಗೆ ಹರಾಜುಗೊಳ್ಳಲ್ಪಡುತ್ತಿರುತ್ತದೆ.
ಇದೇ ಸಂದರ್ಭದಲ್ಲಿ ಇಂಗ್ಲೆಂಡಿನ ಸ್ಟ್ರಾಟ್ ಫರ್ಡ್ ನ ಒಬ್ಬ ಕಳ್ಳ ಷೇಕ್ಸ್ ಪಿಯರ್ನ ತಲೆ ಬುರುಡೆಯನ್ನು ಕದ್ದು ಮಾರಾಟ ಮಾಡಿ ಕೋಟ್ಯಂತರ ದುಡ್ಡನ್ನು ಸಂಪಾದಿಸಬೇಕೆಂದು ಆಲೋಚಿಸುತ್ತಾನೆ.
ತಲೆ ಬುರುಡೆಯನ್ನು ಸಂಪಾದಿಸುವುದರಲ್ಲಿಯೂ ಯಶಸ್ವಿಯಾದ ಕಳ್ಳನು ಒಂದು ಸಮಸ್ಯೆಯಲ್ಲಿ ಬೀಳುತ್ತಾನೆ. ಅದೇನೆಂದರೆ, ಷೇಕ್ಸ್ ಪಿಯರ್ನ ಕೃತಿಯ ಪಾತ್ರಗಳಾಗುತ್ತಾ ಹೋಗುತ್ತಾನೆ. ಆ ಪಾತ್ರಗಳ ಅನುಭವವೇ ನಾಟಕವನ್ನು ಮುಂದುವರೆಸಿಕೊಂಡು ಹೋಗುತ್ತದೆ.
**
ವಸ್ತ್ರವಿನ್ಯಾಸ ಮತ್ತು ಪ್ರಸಾಧನ : ರಾಮಕೃಷ್ಣ ಬೆಳ್ತೂರ್
ರಂಗಸಜ್ಜಿಕೆ ಮತ್ತು ಪರಿಕರ: ರಘು ಸಿರಸಿ
ಬೆಳಕು: ಎಂ.ಜಿ.ನವೀನ್
ಸಂಗೀತ: ಪ್ರದೀಪ್ ಮುಳ್ಳೂರು
ರಚನೆ ಮತ್ತು ನಿರ್ದೇಶನ: ಪ್ರಭಾಕರ ರಾವ್
ನಿರ್ವಹಣೆ: ನವೀನ್ ವಸಿಷ್ಠ, ಹೇಮಂತ್ ಹೊಯ್ಸಳ, ಪವನ್
ನಾಟಕ: ಷೇಕ್ಸ್ಪಿಯರ್ನ ಬುರುಡೆ
ಪ್ರದರ್ಶನದ ದಿನಾಂಕ: ಜ.22, ಭಾನುವಾರ
ಸಮಯ- ಸಂಜೆ 7.30 ರಿಂದ 8.45
ಸ್ಥಳ- ಕೆ.ಎಚ್.ಕಲಾಸೌಧ, ಹನುಮಂತನಗರ, ಬೆಂಗಳೂರು
ಟಿಕೆಟ್ ದರ- ರೂ.100