ಚಿಕ್ಕಮಗಳೂರು ಜಿಲ್ಲೆಯ ಮೀಸಲು ಅರಣ್ಯ ಮತ್ತು ಸಾಗುವಾನಿ ನೆಡುತೋಪುಗಳಲ್ಲಿ ‘ಥಿನ್ನಿಂಗ್’ ಹೆಸರಿನಲ್ಲಿ ಅರಣ್ಯ ಇಲಾಖೆ ನಡೆಸುತ್ತಿದ್ದ ಸಾವಿರಾರು ಮರಗಳ ನಾಶದ ಬಗೆಗಿನ ಸರಣಿ ವರದಿಗಳು (ಪ್ರ.ವಾ., ಜ. 20) ಗಮನ ಸೆಳೆದವು.
ಹಸಿರನ್ನು ಪ್ರೀತಿಸುವ ನಾವು ಅದನ್ನು ಬೆಳೆಸಲಾಗದಿದ್ದರೂ ಉಳಿಸಲು ಪ್ರಯತ್ನಿಸಬೇಕು. ಕಪ್ಪತಗುಡ್ಡ ಅರಣ್ಯ ಉಳಿಸಿ ಹೋರಾಟಕ್ಕೂ ಮಾಧ್ಯಮಗಳು ಆದ್ಯತೆ ನೀಡಿ, ಅಧ್ಯಯನ ವರದಿ ಪ್ರಕಟಿಸಬೇಕು.
-ಯತೀಶ್, ತುಮಕೂರು