‘ಹಿಂದೂ ಮಹಾಸಾಗರದ ಸಮಭಾಜಕ ವೃತ್ತದಿಂದ ಬಂಗಾಳಕೊಲ್ಲಿ ನೈರುತ್ಯದವರೆಗೆ ಗಾಳಿ ಒತ್ತಡ ಹೆಚ್ಚಿದೆ. ಅದರಿಂದಾಗಿ ಬೆಂಗಳೂರು, ಮಂಡ್ಯ, ಹಾಸನ, ತುಮಕೂರು, ಚಾಮರಾಜನಗರ, ಕೋಲಾರ ಸೇರಿದಂತೆ ಹಲವು ನಗರಗಳಲ್ಲಿ ಎರಡು ದಿನಗಳವರೆಗೆ ಮೋಡ ಕವಿದ ವಾತಾವರಣವಿರಲಿದೆ’ ಎಂದು ಹವಾಮಾನ ಇಲಾಖೆಯ ನಿರ್ದೇಶಕ (ಪ್ರಭಾರ) ಸುಂದರ್ ಎಂ. ಮೇತ್ರಿ ‘ಪ್ರಜಾವಾಣಿ’ಗೆ ತಿಳಿಸಿದರು.