ಬೆಂಗಳೂರು: ಗಣರಾಜ್ಯೋತ್ಸವದ ಅಂಗವಾಗಿ ಆಕಾಶವಾಣಿ ನಡೆಸಿದ ಸರ್ವಭಾಷಾ ಕವಿ ಸಮ್ಮೇಳನ ಜ.25ರಂದು ರಾತ್ರಿ 10 ಗಂಟೆಗೆ ಪ್ರಸಾರವಾಗಲಿದೆ ಎಂದು ನಿಲಯ ನಿರ್ದೇಶಕಿ ಬಿ.ವಿ.ಪದ್ಮ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಬಾರಿಯ ಕವಿ ಸಮ್ಮೇಳನ ಜ.12ರಂದು ವಾರಣಸಿಯಲ್ಲಿ ನಡೆದಿತ್ತು. ಕನ್ನಡದ ಕವಿ ಎಸ್.ಮಂಜುನಾಥ್ ಸೇರಿದಂತೆ ವಿವಿಧ ಭಾಷೆಗಳ 23 ಕವಿಗಳು ಪಾಲ್ಗೊಂಡಿದ್ದರು.