ಸಿದ್ದಾಪುರ: ಕೃಷಿ ಸಂಸ್ಕೃತಿಯೊಂದಿಗೆ ಬೆಸೆದ ಜಾನಪದ ಕ್ರೀಡೆ ಕಂಬಳ ಜನರ ಜೀವನದೊಂದಿಗೆ ಹಾಸುಹೊಕ್ಕಾಗಿದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಹಾಲಾಡಿ ತಾರಾನಾಥ ಶೆಟ್ಟಿ ಹೇಳಿದರು.
ಸಿದ್ದಾಪುರ ಕಡ್ರಿ ದೊಡ್ಮನೆ ಅವರ ನೇತೃತ್ವದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಭಾನುವಾರ ಸಿದ್ದಾ ಪುರ ಬಸ್ ನಿಲ್ದಾಣ ವಠಾರದಲ್ಲಿ ನಡೆದ ಬೃಹತ್ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಕರಾವಳಿಯ ಜಾನಪದ ಕ್ರೀಡೆಯಾದ ಕಂಬಳ ಮರೆಯಾದರೆ ರೈತರ ಆಚರಣೆ ಮತ್ತು ಮನೋ ರಂಜನೆಗಳಿಗೆ ಧಕ್ಕೆ ತಂದಂತಾಗುತ್ತದೆ. ಇಂತಹ ಆಚರಣೆಗಳನ್ನು ಉಳಿಸಿ ಬೆಳೆಸುವ ಹೊಣೆಗಾರಿಕೆ ಸರ್ಕಾರದ್ದು. ಕಂಬಳ ಉಳಿವಿಗಾಗಿ ಸರ್ಕಾರ ಸೂಕ್ತ ಕಾನೂನನ್ನು ಜಾರಿಗೆ ತಂದು, ಸಂಪ್ರ ದಾಯಬದ್ಧವಾಗಿ ನಡೆಯಲು ಅನು ಕೂಲವಾಗುವಂತೆ ಶಾಸನ ರೂಪಿಸಬೇಕು ಎಂದರು.
ಮೆಸ್ಕಾಂ ನಿರ್ದೇಶಕ ಸಂಪಿಗೇಡಿ ಸಂಜೀವ ಶೆಟ್ಟಿ ಅವರು ಕಡ್ರಿ ದೊಡ್ಮನೆ ಕಂಬಳ ಮನೆಯಲ್ಲಿ ಪ್ರತಿಭಟನೆಗೆ ಜಾಲನೆ ನೀಡಿ ನಂತರ ಮಾತನಾಡಿ, ಕರಾವಳಿಯ ರೈತಾಪಿ ವರ್ಗ ಭತ್ತ ಕಟಾವಿನ ನಂತರ ತಮ್ಮ ಮನರಂಜನೆ ಗೋಸ್ಕರ ಏರ್ಪಡಿಸುತ್ತಿದ್ದ ಈ ಕ್ರೀಡೆಗೆ ಹಲವು ವರ್ಷಗಳ ಇತಿಹಾಸವಿದೆ. ಕಂಬಳದಲ್ಲಿ ಯಾವುದೇ ರೀತಿಯ ಹಿಂಸೆಗಳಿಲ್ಲ ಎಂದರು.
ತಾಲ್ಲೂಕು ಪಂಚಾಯಿತಿ ಸದಸ್ಯ ಎಸ್.ಕೆ.ವಾಸುದೇವ ಪೈ, ಸಿದ್ದಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರೋಜಿನಿ ಶೆಟ್ಟಿ, ಕಾಂಪ್ಕೋ ನಿರ್ದೇಶಕ ಕಿಶೋರ ಕುಮಾರ ಕೊಡ್ಗಿ, ಕರ್ನಾಟಕ ಕಾರ್ಮಿಕ ವೇದಿಕೆ ಉಡುಪಿ ಜಿಲ್ಲಾಧ್ಯಕ್ಷ ರವಿ ಶೆಟ್ಟಿ, ಸಿದ್ದಾಪುರ ಘಟಕದ ಅಧ್ಯಕ್ಷ ದಿನಕರ ಶೆಟ್ಟಿ, ಬಂದೂರು ಘಟಕದ ಅಧ್ಯಕ್ಷ ಪ್ರದೀಪ ದೇವಾಡಿಗ, ಹಿರಿಯ ನಾಗರಿಕ ವೇದಿಕೆಯ ಅಧ್ಯಕ್ಷ ಜಾಂಬ್ಳಿ ಭಾಸ್ಕರ್ ಶೆಟ್ಟಿ, ಸಿದ್ದಾಪುರ- ಹೊಸಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಪ್ರದೀಪ ಯಡಿಯಾಳ, ಮಾಜಿ ಅಧ್ಯಕ್ಷ ರಾಘವೇಂದ್ರ ರಾವ್ ಮಾನಂಜೆ, ಸಿದ್ದಾಪುರ ನಾಗರಿಕ ಹಿತ ರಕ್ಷಣಾ ವೇದಿಕೆಯ ಅಧ್ಯಕ್ಷ ದಿವಾಕರ ಹೆಗ್ಡೆ, ಸಿದ್ದಾಪುರ ಪಟೇಲ್ ಹೌಸ್ನ ಜಯಪ್ರಕಾಶ ಶೆಟ್ಟಿ, ಗೋಪಾಲ ಕಾಂ ಚನ್, ಕಂಬಳ ಮನೆಯವರಾದ ಸತೀಶ ಶೆಟ್ಟಿ ಕಡ್ರಿ, ಜಗದೀಶ ಶೆಟ್ಟಿ ಕಡ್ರಿ, ಹಾರ್ದಳಿ ಸಂತೋಷ್ ಕುಮಾರ ಶೆಟ್ಟಿ ಕಡ್ರಿ, ಕಂಬಳದ ಅಭಿಮಾನಿಗಳು , ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷ ಹಾಗೂ ಪದಾಧಿಕಾರಿಗಳು ಇದ್ದರು. ಕಡ್ರಿ ದೊಡ್ಮನೆ ಚಂದ್ರಶೇಖರ ಶೆಟ್ಟಿ ನಿರೂಪಿಸಿದರು.