ನರಗುಂದ: ಮಹಾದಾಯಿ ಹೋರಾಟ ವನ್ನು ತೀವ್ರ ಲಘುವಾಗಿ ಪರಿಗಣಿಸು ತ್ತಿರುವ ಉಭಯ ಸರ್ಕಾರಗಳಿಗೆ ನಮ್ಮ ಏಳ್ಗೆ ಬೇಕಿಲ್ಲ. ಮೂರು ತಿಂಗಳು ಗತಿಸಿದರೆ ಎರಡು ವರ್ಷಕ್ಕೆ ಹೋರಾಟ ಕಾಲಿಡುತ್ತಿದ್ದೇವೆ. ಇದಕ್ಕೆ ಪ್ರಧಾನಿಗಳು ಕೂಡಲೇ ಸ್ಪಂದಿಸಬೇಕು. ಇಲ್ಲವಾದರೆ ಎರಡನೇ ವರ್ಷದ ದಿನದಂದು ತಕ್ಕ ಉತ್ತರ ನೀಡಬೇಕಾಗುತ್ತದೆ ಎಂದು ಮಹಾದಾಯಿ ಹೋರಾಟ ಸಮಿತಿ ಕೋಶಾಧ್ಯಕ್ಷ ಎಸ್.ಬಿ.ಜೋಗಣ್ಣವರ ಎಚ್ಚರಿಸಿದರು.
ಪಟ್ಟಣದಲ್ಲಿ ನಡೆಯುತ್ತಿರುವ ಮಹಾ ದಾಯಿ ಧರಣಿಯ 565ನೇದಿನವಾದ ಸೋಮವಾರ ಮಾತನಾಡಿದರು. ರೈತರು ಸಿಡಿದೆದ್ದರೇ ಯಾರೂ ಉಳಿಯುವುದಿಲ್ಲ. ಆದ್ದರಿಂದ ಸಿಡಿದೇಳುವ ಮೊದಲು ರಾಜ್ಯ ಸರ್ಕಾರ ಮಾಡಬೇಕಾದ ಎಲ್ಲ ಪ್ರಯತ್ನ ಮಾಡಿ, ಕೇಂದ್ರದ ಕಣ್ಣು ತೆರೆಸಬೇಕು. ಇಲ್ಲವಾ ದರೆ ಇದರ ಪರಿಣಾಮವನ್ನು ಮುಂದಿನ ದಿನಗಳಲ್ಲಿಎದುರಿಸಿ ಎಂದರು.
ಮಹದಾಯಿ ಹೋರಾಟ ಸಮಿತಿ ಉಪಾಧ್ಯಕ್ಷ ಪರಶುರಾಮ ಜಂಬಗಿ ಮಾತನಾಡಿ ಮಹಾದಾಯಿ ಯೋಜನೆಗೆ ಎಲ್ಲ ಸಮುದಾಯ ಒಂದಾಗಬೇಕಿದೆ. ನಾಡಿನುದ್ದಕ್ಕೂ ಈಗಾಗಲೇ ಬೆಂಬಲ ವ್ಯಕ್ತವಾದರೂ ಅದು ಆಟಕ್ಕುಂಟು ಲೆಕ್ಕ ಕ್ಕಿಲ್ಲ ಎಂಬಂತಾಗಿದೆ. ಇದುಸಲ್ಲದು. ತಮಿ ಳುನಾಡಿನ ಒಕ್ಕಟ್ಟು ಇಲ್ಲಿ ಬರಬೇಕಿದೆ ಎಂದರು.
ಪ್ರತಿಯೊಬ್ಬ ಜನಪ್ರತಿನಿಧಿಯೂ ರೈತರ ಬೆಂಬಲ ಇಲ್ಲದೇ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಇದನ್ನು ಅರಿಯುವ ಮೂಲಕ ರೈತರ ಬೇಡಿಕೆ ಈಡೇರಿಸಲು ಅವರು ಮುಂದಾಗಬೇಕು. ಇದನ್ನೂ ಯಾರಿಂದಲೂ ಹೇಳಿಸಿಕೊಳ್ಳಬಾರದು. ಇದು ತಕ್ಕುದಲ್ಲ. ಇದರ ಬಗ್ಗೆ ಯಾವ ರೀತಿ ಒತ್ತಡ ಹೇರಬೇಕು. ಅದು ಮೊದಲು ನಡೆಯಬೇಕಾಗಿದೆ ಎಂದರು.
ವೀರಬಸಪ್ಪ ಹೂಗಾರ, ಬಸಮ್ಮ ಐನಾಪೂರ, ಪುಂಡಲೀಕ ಯಾದವ, ವಾಸು ಚವ್ಹಾಣ, ಎಸ್.ಕೆ.ಗಿರಿ ಯಣ್ಣವರ, ಕೆ.ಎಚ್. ಮೊರಬದ. ಎಲ್.ಬಿ.ಮುನೇನ ಕೊಪ್ಪ, ಎಸ್.ಬಿ. ಕೊಣ್ಣೂರು,ಸಿದ್ದಪ್ಪ ಚಂದ್ರತ್ನ ವರ, ಈರಣ್ಣ ಇದ್ದರು.