ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳವಾರ, 7–2–1967

Last Updated 6 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಕಾಳಿ ನದಿ ವಿದ್ಯುತ್ ಯೋಜನೆ ಕೆಲಸ ಮುಂದುವರಿಸಲು ಕೇಂದ್ರದ ಸೂಚನೆ
ನವದೆಹಲಿ, ಫೆ. 6–
ಕಾಳಿ ನದಿ ವಿದ್ಯುತ್ ಯೋಜನೆಯ ಕೆಲಸವನ್ನು ಮುಂದುವರಿಸುವಂತೆ ಯೋಜನಾ ಆಯೋಗವು ಮೈಸೂರು ಸರ್ಕಾರಕ್ಕೆ ತಿಳಿಸಿದೆಯಲ್ಲದೆ ಈ ಉದ್ದೇಶಕ್ಕೆ ಅಗತ್ಯವಾದ ಹಣವನ್ನು ನೀಡುವುದಾಗಿಯೂ ತಿಳಿಸಿದೆ.
ಯೋಜನೆ ಮೇಲಿನ ವರದಿಯನ್ನು ಸರಿಯಾಗಿ ಪರಿಶೀಲಿಸಿದ ಮೇಲೆ ಯೋಜನೆಯನ್ನು ಕಾರ್ಯಗತ ಗೊಳಿಸುವುದಕ್ಕೆ ಮಂಜೂರು ನೀಡಲಾಗುವುದು. ರಾಜ್ಯ ಸರ್ಕಾರವು ಈ ಕೆಲಸವನ್ನು ತ್ವರಿತವಾಗಿ ಕೈಗೊಂಡರೆ ಪ್ರಮುಖ ಅಣೆಕಟ್ಟಿನ ಕೆಲಸವನ್ನು ನಾಲ್ಕನೆ ಯೋಜನೆ ಮಧ್ಯದಲ್ಲಿ ಪ್ರಾರಂಭಿಸಬಹುದೆಂದು ನಂಬಲಾಗಿದೆ.

ರಾಜ್ಯಗಳ ನಾಲ್ಕನೆಯ ಯೋಜನೆಗಳ ಒಟ್ಟು ವೆಚ್ಚ 7071.7 ಕೋಟಿ ರೂ.
ನವದೆಹಲಿ, ಫೆ. 6–
ರಾಜ್ಯ ಸರ್ಕಾರಗಳ ನಾಲ್ಕನೆಯ ಯೋಜನೆಗಳ ಒಟ್ಟು ವೆಚ್ಚ 7071.7 ಕೋಟಿ ರೂ. ತೃತೀಯದಲ್ಲಿ ಒಟ್ಟು ವೆಚ್ಚ 4147.7 ಕೋಟಿ ರೂ. ಆಗಿತ್ತು ಎಂದು ಯೋಜನಾ ಆಯೋಗ ಪ್ರಕಟಿಸಿದೆ. ಪಶ್ಚಿಮ ಬಂಗಾಳವನ್ನು ಬಿಟ್ಟು ಇತರ ಎಲ್ಲ ರಾಜ್ಯಗಳು ಯೋಜನಾ ವೆಚ್ಚವನ್ನು  ಅಂತಿಮಗೊಳಿಸಿ
ಈಗಾಗಲೇ ಪ್ರಕಟಿಸಿವೆ.

ಮತದಾನಕ್ಕಾಗಿ 15ರಂದು ರಜಾ ದಿನ
ಬೆಂಗಳೂರು, ಫೆ. 6–
ನಾಲ್ಕನೆಯ ಸಾರ್ವತ್ರಿಕ ಚುನಾವಣೆಯ ಮತದಾನ ದಿನವಾದ 15ನೇ ತಾರೀಖು ಯಾವ ಯಾವ ಕ್ಷೇತ್ರಗಳಲ್ಲಿ ಮತದಾನ ನಡೆಯುವುದೋ ಆ ಕ್ಷೇತ್ರಗಳಲ್ಲಿ ಸಾರ್ವತ್ರಿಕ ರಜಾ ದಿನವೆಂದು ಘೋಷಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT