ಹತ್ತಾರು ವರ್ಷಗಳಿಂದ ಜನರ ಸೇವೆ ಜೊತೆಗೆ ಕಲಾ ಸಾಧನೆ ಮಾಡುತ್ತಿರುವ ಸುಕ್ರಜ್ಜಿ ಎಲೆ ಮರೆಯ ಕಾಯಿಯಂತೆ ದುಡಿದಿದ್ದಾರೆ. ನೊಂದ ಜೀವಗಳಿಗೆ ಸ್ಫೂರ್ತಿಯಾಗಿ, ಬದುಕಿನ ಸೆಲೆಯಾಗಿ ಕಲಾಪೋಷಕಿಯಾಗಿದ್ದ ಸುಕ್ರಜ್ಜಿಗೆ ಪದ್ಮಶ್ರೀ ಪ್ರಶಸ್ತಿಯು ಸಾಂಸ್ಕೃತಿಕ ಪರಂಪರೆಗೆ ಸಂದ ಗೌರವಾಗಿದೆ ಎಂದು ಅವರು ಹೇಳಿದರು.
ಇದೇ ಸಂದರ್ಭದಲ್ಲಿ ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಡಾ. ಪ್ರಕಾಶ ನಾಯಕ ಅವರು ಸುಕ್ರಿಯ ಕುರಿತಾಗಿ ಬರೆದ 'ಬದುಕು ಬರೆದ ಸುಕ್ರಜ್ಜಿ' ಕೃತಿಯನ್ನು ಬಿಡುಗಡೆಗೊಳಿಸಲಾಯಿತು. ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಪಿಚ್ಚಳ್ಳಿ ಶ್ರೀನಿವಾಸ ಉಪಸ್ಥಿತರಿದ್ದರು. ರಿಜಿಸ್ಟ್ರಾರ್ ಸಿದ್ರಾಮ ಸಿಂಧೆ, ಸದಸ್ಯರಾದ ಆನಂದಪ್ಪ ಜೋಗಿ, ಕೆ.ಎಂ. ಮೇತ್ರಿ, ಲೇಖಕಿ ಸಿ.ಸಿ. ಹೇಮಲತಾ ನಿರೂಪಿಸಿದರು.