ಮುಂಬೈ: ಆಸ್ಕರ್ ಪ್ರಶಸ್ತಿ ವಿಜೇತ ಎ.ಆರ್ ರಹಮಾನ್ ಅವರು ಮುಂದಿನ ದಿನಗಳಲ್ಲಿ ಕೆನಡಾ ಸಹಯೋಗದೊಂದಿಗೆ ಸಂಗೀತ ಸಂಯೋಜನೆ ಮಾಡುವುದಾಗಿ ತಿಳಿಸಿದ್ದಾರೆ.
ಗಾಯಕ, ಸಂಗೀತ ನಿರ್ದೇಶಕ ಎ.ಆರ್ ರಹಮಾನ್ ಟೊರೊಂಟೊದ ಮೇಯರ್ ಜಾನ್ ಟೋರಿ ಅವರು ನೀಡಿರುವ ಆಮಂತ್ರಣವನ್ನು ಸ್ವೀಕರಿಸಿರುವುದರ ಬಗ್ಗೆ ತಮ್ಮ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
‘ಪ್ರಸ್ತುತ ನಾನು ತಮಿಳುನಾಡಿನಲ್ಲಿ ನೆಲಿಸಿದ್ದೇನೆ. ನನ್ನ ಕುಟುಂಬ ಭಾರತದಲ್ಲಿ ಅಪಾರ ಸಂಖ್ಯೆಯ ಆಪ್ತರನ್ನು ಹೊಂದಿರುವುದು ಸಂತಸ ತಂದಿದೆ’ ಎಂದು ರಹಮಾನ್ ತಿಳಿಸಿದ್ದಾರೆ.
‘ರಾಕ್ ಸ್ಟಾರ್’ ಚಿತ್ರದ ಸಂಗೀತ ಸಂಯೋಜಕರು ಏರ್ಪಡಿಸಿದ್ದ ಲಲಿತಕಲಾ ಕಾರ್ಯಕ್ರಮಕ್ಕೆ ಟೊರೊಂಟೊದ ಮೇಯರ್ ಜಾನ್ ಟೋರಿ ಅವರನ್ನು ಆಹ್ವಾನಿಸಲಾಗಿತ್ತು. ಕಾರ್ಯಕ್ರಮದಲ್ಲಿ ಮಾತನಾಡಿದ ರೆಹಮಾನ್ ಮುಂದಿನ ದಿನಗಳಲ್ಲಿ ಕೆನೆಡಾದ ಸಹಯೋಗದೊಂದಿಗೆ ಸಂಗೀತ ಸಂಯೋಜನೆ ಮಾಡುವುದಾಗಿ ತಿಳಿಸಿದ್ದಾರೆ.