ನಮ್ಮ ನೋಟುಗಳ ಒಂದು ಭಾಗದಲ್ಲಿ ಗಾಂಧೀಜಿ ಭಾವಚಿತ್ರವನ್ನು ಪ್ರಕಟಿಸಿರುವುದು ಸರಿಯಷ್ಟೆ. ಆದರೆ ಆಂಗ್ಲರ ಕಪಿಮುಷ್ಟಿಯಿಂದ ದೇಶವನ್ನು ಬಿಡಿಸಲು ಸಾಕಷ್ಟು ಸ್ವಾತಂತ್ರ್ಯ ಹೋರಾಟಗಾರರು ತಮ್ಮ ಆಸ್ತಿ ಪಾಸ್ತಿ ಕಳೆದುಕೊಂಡಿದ್ದಾರೆ, ಪ್ರಾಣವನ್ನು ಬಲಿಕೊಟ್ಟಿದ್ದಾರೆ. ಹೀಗಾಗಿ ಗಾಂಧಿಯವರೊಂದಿಗೆ ಹೋರಾಟದಲ್ಲಿ ಭಾಗಿಯಾದ ಇತರ ಹಿರಿಯ ನಾಯಕರ ಭಾವಚಿತ್ರಗಳನ್ನು ಕೂಡ ನೋಟುಗಳ ಮೇಲೆ ಪ್ರಕಟಿಸುವ ಮೂಲಕ ಅವರ ಪರಿಚಯವನ್ನು ಇಂದಿನವರಿಗೆ ಮಾಡಿಕೊಡಬೇಕಾಗಿದೆ.
ಈ ಬಗ್ಗೆ ಕಳೆದ ಹತ್ತು ವಷ೯ಗಳಿಂದ ಕೇಂದ್ರ ಸರ್ಕಾರ, ಆರ್ಥಿಕ ಸಚಿವಾಲಯ ಮತ್ತು ರಿಸರ್ವ್ ಬ್ಯಾಂಕಿಗೆ ಹಲವು ಬಾರಿ ಮನವಿ ಸಲ್ಲಿಸಲಾಗಿತ್ತು. ಇದಕ್ಕೆ ಸ್ಪಂದಿಸಿದ ಸರ್ಕಾರ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿತ್ತು. ಆದರೆ ಕಾರಣಾಂತರಗಳಿಂದ ಈವರೆಗೂ ರಿಸರ್ವ್ ಬ್ಯಾಂಕ್ ಇಂತಹ ಮುದ್ರಣಕ್ಕೆ ಮುಂದಾಗದಿರುವುದು ವಿಪರ್ಯಾಸ.
-ಬಸವರಾಜ ಹುಡೇದಗಡ್ಡಿ, ಬೆಂಗಳೂರು