ಸುಂಟಿಕೊಪ್ಪ: ‘ಮಹಿಳೆಗೆ ಜ್ಞಾನ, ಶಕ್ತಿ, ಧೈರ್ಯ ಇದ್ದರೆ ಸಂಸಾರದಲ್ಲಿ ನೆಮ್ಮದಿ ಕಾಣಬಹುದಾಗಿದೆ’ ಎಂದು ಮಡಿಕೇರಿಯ ಆರ್ಥಿಕ ಸಲಹೆಗಾರ್ತಿ ಗೀತಾ ಗಿರೀಶ್ ಅಭಿಪ್ರಾಯಪಟ್ಟರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಸೋಮವಾರಪೇಟೆ ತಾಲ್ಲೂಕು ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮ ಸಹಯೋಗದಲ್ಲಿ ಇಲ್ಲಿ ಮಂಟಪದಲ್ಲಿ ಭಾನುವಾರ ಆಯೋ ಜಿಸಿದ್ದ ತಾಲ್ಲೂಕು ಮಟ್ಟದ ಮಹಿಳಾ ಸಮಾವೇಶದಲ್ಲಿ ‘ಕೌಟುಂಬಿಕ ಸಾಮರಸ್ಯಕ್ಕೆ ಮಾಧ್ಯಮದ ಪಾತ್ರ’ ಕುರಿತು ಅವರು ಮಾತನಾಡಿದರು.
ಮಾಧ್ಯಮ ಇಂದಿನ ಆಧುನಿಕ ಯುಗದಲ್ಲಿ ಗುರುವಾಗಿ, ವೈದ್ಯರಾಗಿ, ತಾಯಿಯಾಗಿ, ಕಲೆ, ಸಂಸ್ಕೃತಿ, ಆಚಾರ ವಿಚಾರ, ಧರ್ಮ, ಯೋಗ, ಧ್ಯಾನವನ್ನು ಪ್ರತಿಪಾದಿಸುವ ಪ್ರಮುಖ ಅಂಗವಾಗಿದೆ. ಇದರ ಸದುಪಯೋಗವನ್ನು ಬಳಸಿ ಕೊಂಡು ನಮ್ಮ ಬದುಕಿನ ಉನ್ನತಿ ಕರಣಕ್ಕೆ ಮುಂದಾಗಬೇಕು ಎಂದರು.
ಸಮಾವೇಶವನ್ನು ಉದ್ಘಾಟಿಸಿದ ನಾಕೂರು ಲಾಯರ್ ತೋಟದ ವ್ಯವಸ್ಥಾ ಪಕ ಕೃಷ್ಣ, ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳನ್ನು ಉತ್ತಮ ನಾಗರಿಕ ನ್ನಾಗಿ ರೂಪಿಸಿದರೆ ಸಮಾಜಕ್ಕೆ,ದೇಶಕ್ಕೆ ಕೊಡುವ ಅತ್ಯುತ್ತಮ ಕಾಣಿಕೆಯಾಗಲಿದೆ ಎಂದು ಹೇಳಿದರು.
ಮಕ್ಕಂದೂರಿನ ಶೂದ್ ಕಾಫಿ ತೋಟದ ಮಾಲೀಕ ಅಜಯ್ ಶೂದ್, ಏಳನೇ ಹೊಸಕೋಟೆಯ ಗೀತಾಬಸಪ್ಪ, ಯೋಜನಾಧಿಕಾರಿ ಪ್ರಕಾಶ್ ರೈ ಮಾತನಾಡಿದರು.