ಕೊಪ್ಪಳ: ರಾಜ್ಯದಲ್ಲಿ ಖಾಲಿ ಇರುವ 550 ಪಶುವೈದ್ಯರ ಹುದ್ದೆಗಳನ್ನು 15 ದಿನಗಳ ಒಳಗೆ ನೇರ ನೇಮಕಾತಿ ಮೂಲಕ ಭರ್ತಿ ಮಾಡಲಾಗುವುದು ಎಂದು ಪಶುಸಂಗೋಪನೆ ಸಚಿವ ಎ.ಮಂಜು ತಿಳಿಸಿದರು.
ತಾಲ್ಲೂಕಿನ ಮುನಿರಾಬಾದ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಪಶುಸಂಗೋಪನಾ ಇಲಾಖೆಯಿಂದ ಬೇರೆ ಇಲಾಖೆಗಳಿಗೆ ನಿಯೋಜಿಸಲ್ಪಟ್ಟವರನ್ನು ಶೀಘ್ರವೇ ವಾಪಸ್ ಕರೆಸಲಾಗುವುದು’ ಎಂದು ಹೇಳಿದರು.
‘ಕುರಿಗಳ ಸಾವು ಸಂಬಂಧಿಸಿದ ಪರಿಹಾರ ವಿತರಣೆಯಲ್ಲಿ ವಿಳಂಬವಾಗಿದೆ. ಹತ್ತು ದಿನಗಳ ಒಳಗೆ ಪರಿಹಾರ ನೀಡಲಾಗುವುದು’ ಎಂದು ತಿಳಿಸಿದರು.