‘ಗದಗ ಜಿಲ್ಲೆಯ ನರೇಗಲ್ ಹಿರೇಮಠ ಹಾಗೂ ಸವದತ್ತಿಯ ಮೂಲಿಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ನಿತ್ಯ ಸಂಜೆ 7ರಿಂದ 9ರ ತನಕ ಪುರಾಣ ಪ್ರವಚನ ನಡೆಸಿಕೊಡಲಿದ್ದಾರೆ. ಅವರಿಗೆ ಕಲಾವಿದ ಜಿ. ಶಿವಾನಂದ ಸಂಗೀತ ನೀಡುವರು. ಪ್ರಸಾದ ಸೇವೆಯೂ ಇರಲಿದೆ’ ಎಂದರು.
ಮಾರ್ಚ್ 20ರ ಬೆಳಿಗ್ಗೆ ಸಾಮೂಹಿಕ ಲಿಂಗದೀಕ್ಷೆ ಹಾಗೂ ಜಂಗಮ ವಟುಗಳಿಗೆ ಅಯ್ಯಾಚಾರ ಕಾರ್ಯಕ್ರಮ ನಡೆಯಲಿದೆ. ಬೆಳಿಗ್ಗೆ 9ಕ್ಕೆ ರೇಣುಕಾಚಾರ್ಯರ ಭಾವಚಿತ್ರದ ಮೆರವಣಿಗೆ ನಡೆಯಲಿದೆ.
ಕಾರ್ಯಕ್ರಮ ಸಮಿತಿ ಅಧ್ಯಕ್ಷ ಕೊಟ್ರಯ್ಯನವರ ಕೋವಳ್ಳಿಮಠ, ಸಮಿತಿ ಉಪಾಧ್ಯಕ್ಷ ಬಸವರಾಜ ನೀರಲಗಿ, ಬಸವರಾಜಯ್ಯ ಭೂಸ ನೂರಮಠ, ಮುರುಗೇಶ ಯಳ ಮಲಿ, ರುದ್ರಪ್ಪ ಹಾದಿಮನಿ, ಮಾಲ ತೇಶ ಶೀತಾಳ, ಮತ್ತಿತರರಿದ್ದರು.