ಮುಂಬೈ: ನಿರ್ದೇಶಕ ಮಹೇಶ್ ಭಟ್ ಅವರಿಗೆ ₹ 50 ಲಕ್ಷ ನೀಡುವಂತೆ ಒತ್ತಾಯಿಸಿ ವಾಟ್ಸ್ ಆ್ಯಪ್ನಲ್ಲಿ ಬೆದರಿಕೆ ಹಾಕಿದ್ದ ಸಂದೀಪ್ ಸಾಹು ಎಂಬ ಯುವಕನನ್ನು ಪೊಲೀಸರು ಉತ್ತರಪ್ರದೇಶದಲ್ಲಿ ಬಂಧಿಸಿದ್ದಾರೆ.
ಈ ಸಂಬಂಧ ಮಹೇಶ್ ಭಟ್ ಅವರು ಮುಂಬೈನ ಜುಹು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅಪರಾಧ ವಿಭಾಗದ ಪೊಲೀಸರು ಪ್ರಕರಣದ ತನಿಖೆ ಕೈಗೊಂಡಿದ್ದರು.
ಮಹೇಶ್ ಭಟ್ ಅವರಿಗೆ ಆರೋಪಿಯು ಉತ್ತಪ್ರದೇಶದಿಂದ ಹಣ ನೀಡುವಂತೆ ಬೆದರಿಕೆ ಹಾಕಿದ್ದ. ಹಣ ನೀಡದಿದ್ದರೆ ಮಗಳು ಅಲಿಯಾ ಭಟ್ರನ್ನು ಕೊಲ್ಲುವುದಾಗಿ ಸಂದೇಶ ಕಳುಹಿಸಿದ್ದ ಎಂದು ಡಿಸಿಪಿ ವಿನಯ್ ರಾಥೋಡ್ ತಿಳಿಸಿದ್ದಾರೆ.