ಮಂಜುನಾಥ ಪಾಟೀಲ, ಹನುಮಂತಪ್ಪ ಮುದ್ದಾಪುರ, ಅಮರೇಶಪ್ಪ ಹಾಲಾಪುರ, ಮಲ್ಲಿಕಾರ್ಜುನ ಪಾಟೀಲ ಯದ್ದಲದಿನ್ನಿ, ಬಸ್ಸಪ್ಪ ಬ್ಯಾಳಿ, ಸುವರ್ಣ ವೆಂಕಟೇಶ ಇದ್ದರು.
ಸಿರವಾರ ವರದಿ: ನೋಟು ರದ್ದತಿಯಿಂದ ದೇಶಕ್ಕೆ ಕಂಟಕವಾಗಿದೆ ಎಂದು ಸಂಸದ ಬಿ.ವಿ.ನಾಯಕ ವಾಗ್ದಾಳಿ ನಡೆಸಿದರು. ಇಲ್ಲಿ ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಶುಕ್ರವಾರ ಏರ್ಪಡಿಸಿದ್ದ ಜನ ವೇದನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೇಶದ ಬಡಜನರ ಮೇಲೆ ಪ್ರಧಾನಿ ಆಕ್ರಮಣ ಮಾಡಿರುವುದು ರಾಷ್ಟ್ರೀಯ ದುರಂತ. ಇದರಿಂದ ಬಡವರಿಗೆ ಅನುಕೂಲವಾಗಿಲ್ಲ ಎಂದು ಆರೋಪಿಸಿದರು.
ವಿಧಾನ ಪರಿಷತ್ ಸದಸ್ಯ ಎನ್.ಎಸ್.ಭೋಸರಾಜ ಮಾತನಾಡಿ, ಪ್ರಧಾನಿ ಬಡವರ ಮೇಲೆ ಬ್ರಹ್ಮಾಸ್ತ್ರ ಬಿಡುತ್ತಿದ್ದಾರೆ ಎಂದರು.
ಕಾಡಾ ಅಧ್ಯಕ್ಷ ಜಿ.ಹಂಪಯ್ಯನಾಯಕ, ವಿಧಾನ ಪರಿಷತ್ ಸದಸ್ಯ ಬಸವರಾಜ ಪಾಟೀಲ ಇಟಗಿ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ರಾಮಣ್ಣ ಇರಬಗೇರಾ, ವೀಕ್ಷಕರಾದ ಜೆ. ಶಿವಮೂರ್ತಿ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ನಿರ್ಮಲ ಮಂದಕಲ್, ಜಿಲ್ಲಾ ಪಂಚಾಯಿತಿ ಸದಸ್ಯ ಗಂಗಣ್ಣ ಸಾಹುಕಾರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಯ್ಯನಗೌಡ, ಅಬ್ದುಲ್ ಗಫರ್, ಮುಖಂಡರಾದ ಚುಕ್ಕಿ ಸೂಗಪ್ಪ ಸಾಹುಕಾರ, ಶಿವಾಜಿರಾವ್ ದರ್ಶನಕರ್, ಚಂದ್ರು ಕಳಸ, ಕೆ.ಅಸ್ಲಾಂಪಾಷ, ಎಂ.ಈರಣ್ಣ, ದಾನನಗೌಡ, ಶಿವಶರಣ ಅರಕೇರಿ ಇದ್ದರು.