ಪ್ರಧಾನಮಂತ್ರಿ ಇಂದಿರಾ ಗಾಂಧಿ ಅಥವ ಮುರಾರಜಿ ದೇಸಾಯಿರವರ ಆತ್ಮ ಗೌರವಕ್ಕೆ ಕುಂದಾಗದಂಥ ರೀತಿಯಲ್ಲಿ ಈ ಸೂತ್ರವನ್ನು ರೂಪಿಸಲಾಗಿದೆಯೆಂದು ಹೇಳಲಾಗಿದೆ. ಈ ಸೂತ್ರದ ಪ್ರಕಾರ ಶ್ರೀಮತಿ ಇಂದಿರಾ ಗಾಂಧಿಯವರು ಪ್ರಧಾನಮಂತ್ರಿಯಾಗಿ ಮುಂದುವರೆಯುತ್ತಾರೆ. ಇದಲ್ಲದೆ ಮುರಾರಜಿ ದೇಸಾಯಿರನ್ನು ಉಪ ಪ್ರಧಾನಮಂತ್ರಿಯನ್ನಾಗಿ ನೇಮಕ ಮಾಡಲಾಗುತ್ತದೆ. ಪ್ರಮುಖ ನೀತಿಗಳ ಸಂಬಂಧದಲ್ಲಿ ನಿರ್ಧಾರ ಕೈಗೊಳ್ಳುವುದಕ್ಕಾಗಿ ಮೂವರ ಸಮಿತಿಯೊಂದನ್ನು ನೇಮಕ ಮಾಡಲಾಗುವುದು. ಸಮಿತಿಯಲ್ಲಿ ಇಂದಿರಾ, ಮುರಾರಜಿ ಮತ್ತು ಕಾಮರಾಜರು ಸದಸ್ಯರಾಗಿರುತ್ತಾರೆ.