ಆದೇಶದಲ್ಲಿನ ನ್ಯೂನತೆ ಸರಿದೂಗಿಸಲು ರಾಜ್ಯ ಸರ್ಕಾರವು ಮುಂಬಡ್ತಿಯಲ್ಲಿ ಮೀಸಲಾತಿ ಕಲ್ಪಿಸುವ ಹೊಸ ನಿಯಮಾವಳಿಯ ಮಸೂದೆಗೆ ತಿದ್ದುಪಡಿ ತರಬೇಕು. ತಿದ್ದುಪಡಿ ಮಸೂದೆಗೆ ಸಚಿವ ಸಂಪುಟದ ಒಪ್ಪಿಗೆಯೂ ಪಡೆಯಬೇಕು ಎಂದು ಸಮಿತಿಯ ಜಿಲ್ಲಾ ಘಟಕದ ಸಂಚಾಲಕ ಕಪ್ಪಗಲ್ಲು ಓಂಕಾರಪ್ಪ ಕೋರಿದರು.
ಮರು ಪರಿಶೀಲನೆ ಅರ್ಜಿ ಸಲ್ಲಿಸುವಾಗ ಪೂರಕ ದಾಖಲೆಯನ್ನು ಸಲ್ಲಿಸಬೇಕು. ವಾದ ಮಂಡಿಸಲು ಸಮರ್ಥವಾದ ವಕೀಲರನ್ನು ನಿಯೋಜನೆ ಮಾಡಬೇಕು ಆಗ್ರಹಿಸಿದರು.
ಲೋಕಸಭೆಯಲ್ಲಿ ನನೆಗುದಿಗೆ ಬಿದ್ದಿರುವ ಬಡ್ತಿ ಮೀಸಲಾತಿ ಮಸೂದೆಯನ್ನು ಜಾರಿಗೆ ತರಲು ಅನುಚ್ಛೇದ 117ನೇ ತಿದ್ದುಪಡಿ ವಿಧೇಯಕವನ್ನು ಈ ಬಾರಿಯ ಅಧಿವೇಶನದಲ್ಲಿ ಕೇಂದ್ರ ಸರ್ಕಾರ ಅಂಗೀಕರಿಸಬೇಕು.
ನ್ಯಾಯಾಲಯಗಳ ದೌರ್ಜನ್ಯದಿಂದ ಮೀಸಲಾತಿ ಸಂರಕ್ಷಣೆಗೆ ಮೀಸಲಾತಿ ವಿಧೇಯಕಗಳನ್ನು ಸಂವಿಧಾನದ 9ನೇ ಅನುಬಂಧದಲ್ಲಿ ಸೇರ್ಪಡೆ ಮಾಡಬೇಕು ಎಂದು ಆಗ್ರಹಿಸಿದರು.
ಸಮಿತಿಯ ಪದಾಧಿಕಾರಿಗಳಾದ ಗ್ಯಾನಪ್ಪ ಬಡಿಗೇರ, ಡಿ.ಎಚ್.ಹುಸೇನಪ್ಪ, ತಿಪ್ಪೇಸ್ವಾಮಿ, ಎಚ್.ಎಂ.ರಾಜೇಶ, ಸಾವಿತ್ರಮ್ಮ, ಮುಖಂಡರಾದ ಡಿ.ಎಚ್.ಹನುಮೇಶಪ್ಪ, ರಮೇಶ, ಶ್ರೀನಿವಾಸ, ಕಪ್ಪಗಲ್ಲು ಹುಲಿಯಪ್ಪ, ದುರ್ಗಮ್ಮ, ಜಿ.ಶಿವಕುಮಾರ, ಬಸವರಾಜ, ವೀರೇಶ, ಲಿಂಗಪ್ಪ, ಶಶಿಕುಮಾರ, ಮಲ್ಲಿಕಾರ್ಜುನ, ಯೋಗರಾಜ, ರವಿಕುಮಾರ, ರಾಜ, ನರೇಂದ್ರ ಪಾಲ್ಗೊಂಡಿದ್ದರು.