ಮಧ್ಯಮ ಮತ್ತು ಕೆಳವರ್ಗದ ಕ್ಷೇತ್ರವನ್ನು ಆರ್ಥಿಕವಾಗಿ ಬಲಪಡಿಸಲು ಸಹಕಾರಿ ಬ್ಯಾಂಕುಗಳು ವಹಿಸುತ್ತಿರುವ ಪಾತ್ರವನ್ನು ಪರಿಗಣಿಸಿ ಈ ಕ್ರಮ ಕೈಗೊಳ್ಳಬೇಕು’ ಎಂದು ಕೋರಲಾಯಿತು ಎಂದು ಜಿಲ್ಲಾ ಸಹಕಾರ ಬ್ಯಾಂಕ್ಗಳ ಸಂಘದ ಅಧ್ಯಕ್ಷ ಬಾಳಪ್ಪ ಕಗ್ಗಣಗಿ ತಿಳಿಸಿದರು.
ಕೇಂದ್ರ ಸಚಿವ ಅಶೋಕ ಲವಾಸ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಎನ್.ಸಿ.ಪಿ. ಅಧ್ಯಕ್ಷ ಶರದ್ ಪವಾರ್ ಅವರಿಗೂ ಮನವಿ ಸಲ್ಲಿಸಲಾಗಿದೆ ಎಂದರು.
ಸಂಘದ ಪದಾಧಿಕಾರಿಗಳಾದ ಬಾಳಾಸಾಹೇಬ ಕಾಕತಕರ, ಚಂದ್ರಕಾಂತ ಗುಂಡಕಲ್, ಮರಾಠಾ ಬ್ಯಾಂಕ ನಿರ್ದೇಶಕ ಲಕ್ಷ್ಮಣ ಹೊನಗೇಕರ, ಪ್ರಧಾನ ವ್ಯವಸ್ಥಾಪಕ ರವಿಕಿರಣ ಧುರಾಜಿ, ಬಸವೇಶ್ವರ ಬ್ಯಾಂಕ್ ಅಧ್ಯಕ್ಷ ವಿಜಯಕುಮಾರ ಅಂಗಡಿ, ದೈವಜ್ಞ ಬ್ಯಾಂಕ್ ಅಧ್ಯಕ್ಷ ಎಸ್.ಎಂ. ರೇವಣಕರ, ಪ್ರಧಾನ ವ್ಯವಸ್ಥಾಪಕ ಪಿ.ಎಸ್. ಸೇಠ, ಶಾಂತಪ್ಪಾಣ್ಣ ಮಿರ್ಜಿ ಬ್ಯಾಂಕ್ ಅಧ್ಯಕ್ಷ ಅಶೋಕ ದಾನವಾಡೆ ಹಾಗೂ ಪ್ರಧಾನ ವ್ಯವಸ್ಥಾಪಕ ಭೋಜಕರ ನಿಯೋಗದಲ್ಲಿದ್ದರು.