ಅಲ್ಲಿ ಒಂದು ದಿನ ತಂಗಿದ್ದು, ಸ್ವಾಮಿಗೆ ಪೂಜಾ ಉತ್ಸವಗಳ ಸೇವೆ ಸಲ್ಲಿಸಿದೆವು. ಪ್ರಸಾದದ ಹೂಗಳೊಡನೆ ಸ್ವಾಮಿಯ ಬೆಳ್ಳಿಯ ಕಣ್ಣು, ಕೈಗಳು ಬಂದವು! ನನ್ನ ಪತಿಗೆ ಗಾಬರಿಯಾಗಿ, ಅರ್ಚಕರಿಗೆ ತಿಳಿಸಿದಾಗ, ಅವರು ನಿಮ್ಮ ಯಾವುದಾದರೂ ಸಂಕಲ್ಪವಿದ್ದರೆ, ಅದು ಈಡೇರುವ ಸೂಚನೆಯ ಫಲವಾಗಿ, ಸ್ವಾಮಿಯ ಕಣ್ಣು ಪ್ರಸಾದದೊಡನೆ ಬಂದಿರುವುದೆಂದು ತಿಳಿಸಿದರು. ಕೆಲವು ದಿನಗಳಲ್ಲಿಯೇ ಸಕಾಲಕ್ಕೆ ಎಚ್ಡಿಎಫ್ಸಿಯಿಂದ ಹಣ ದೊರೆತು, ನಮ್ಮ ಬಹಳ ದಿನಗಳ ಸ್ವಪ್ನ ಸೌಧ ವಾಸ್ತವವಾಗಿ ಮೈದಾಳಿತು. ಕುಲದೈವ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿಯ ಕೃಪಾ ಕಟಾಕ್ಷದ ಪರಿಧಿಯಲ್ಲಿ ಪಶ್ಚಿಮ ಕಾರ್ಡ್ ರಸ್ತೆಯಲ್ಲಿ ರೂಪುಗೊಂಡ ನಮ್ಮ ನಿವಾಸಕ್ಕೆ ‘ಶ್ರೀಲಕ್ಷ್ಮೀನರಸಿಂಹ ನಿಲಯ’ ಎಂದೇ ಹೆಸರಿಟ್ಟೆವು.