ರಾಮನಗರ: ಬಿಬಿಎಂಪಿ ವತಿಯಿಂದ ಕಸಾಯಿ ಖಾನೆ ಆರಂಭ ವಿರೋಧಿಸಿ ಹಾರೋಹಳ್ಳಿಯಲ್ಲಿ ಶುಕ್ರವಾರ ಒಂದು ದಿನದ ಉಪವಾಸ ಸತ್ಯಾಗ್ರಹ ಆರಂಭ ವಾಗಿದೆ.
ರಾಮಚಂದ್ರಾಪುರ ಮಠದ ರಾಘವೇಂದ್ರ ಸ್ವಾಮೀಜಿ ನೇತೃತ್ವದಲ್ಲಿ 50ಕ್ಕೂ ಹೆಚ್ಚು ಸ್ವಾಮೀಜಿಗಳು, ನೂರಾರು ಜನರು ಭಾಗಿಯಾಗಿದ್ದಾರೆ.
ಕಸಾಯಿಖಾನೆ ನಿಂತರೆ ಹಾಲು ಕುಡಿಯುತ್ತೇವೆ. ಇಲ್ಲವಾದರೆ ಈ ಹೋರಾಟಕ್ಕಾಗಿ ನಮ್ಮ ರಕ್ತವನ್ನು ಚೆಲ್ಲುತ್ತೇವೆ ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ ಹೇಳಿದರು.
ಮೊದಲು ಇಲ್ಲಿರುವ ಸಂತರ ಕಸಾಯಿ ಮಾಡಿ ನಂತರ ಗೋವುಗಳ ಕಸಾಯಿಖಾನೆ ತೆರೆಯಿರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
50ಕ್ಕೂ ಹೆಚ್ಚು ಸ್ವಾಮೀಜಿಗಳು, ಶಾಸಕ ಸಿ.ಟಿ. ರವಿ, ಪ್ರಮೋದ್ ಮುತಾಲಿಕ್ ಹಾಗೂ ಸ್ಥಳೀಯ ಮುಖಂಡರು, ಗ್ರಾಮಸ್ಥರು ಪಾಲ್ಗೊಂಡರು. ಇದಕ್ಕೂ ಮುನ್ನ ಹಾರೋಹಳ್ಳಿಯಲ್ಲಿ ರಸ್ತೆ ತಡೆ, ಗೋವುಗಳ ಮೆರವಣಿಗೆ ನಡೆಯಿತು.