ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿಮಾನಿಗಳ ಹುಚ್ಚಾಟ

Last Updated 14 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ತಮಗಿಷ್ಟವಾದ ಚಿತ್ರ ನಟ ನಟಿಯರ ಅಭಿನಯ ಕಲೆಯನ್ನು ಮೆಚ್ಚಿ, ತಮ್ಮ ಹೃದಯ ಮಂದಿರದಲ್ಲಿ ಆರಾಧಿಸುವ ಸಾಕಷ್ಟು ಅಭಿಮಾನಿಗಳು ಕರ್ನಾಟಕದಲ್ಲಿದ್ದಾರೆ. ಆದರೆ ನಟ ಸುದೀಪ್ ಅವರನ್ನು ನೋಡಬೇಕೆಂದು ಬೆಳಗಾವಿಯ ಇಬ್ಬರು ಯುವಕರು ಇತ್ತೀಚೆಗೆ ಆತ್ಮಹತ್ಯೆ ಪ್ರಯತ್ನ, ಉಪವಾಸದಂತಹ ಹುಚ್ಚಾಟಗಳಿಗೆ ಮುಂದಾಗಿರುವುದು ದುರದೃಷ್ಟಕರ.

ಚಿತ್ರನಟರಿಗೂ ಅವರದೇ ಆದ ಜೀವನ, ಶೂಟಿಂಗ್‌ನಂತಹ ಕೆಲಸ ಕಾರ್ಯಗಳಿರುತ್ತವೆ. ಪ್ರತಿಯೊಬ್ಬ ಅಭಿಮಾನಿಯನ್ನೂ ಕಂಡು ವಿಚಾರಿಸುವಷ್ಟು ವ್ಯವಧಾನ ಅವರಿಗಿರುವುದಿಲ್ಲ. ಬಿಡುಗಡೆಯಾಗುವ ಅವರ ಚಿತ್ರಗಳನ್ನು ಚಿತ್ರಮಂದಿರಗಳಲ್ಲಿ ನೋಡುವ ಮೂಲಕ ಕನ್ನಡ ಭಾಷೆಗೆ ಹಾಗೂ ನಟರಿಗೆ ಗೌರವ, ಅಭಿಮಾನ ಸಲ್ಲಿಸಬೇಕೇ ಹೊರತು, ಅಂಧಾಭಿಮಾನ ಪ್ರದರ್ಶಿಸುವುದಲ್ಲ. ಇಂತಹ ಮಕ್ಕಳಿಗೆ ಪಾಲಕರು ಮತ್ತು ಶಿಕ್ಷಕರ ಸೂಕ್ತ ಮಾರ್ಗದರ್ಶನ, ಸಲಹೆ ಅತ್ಯವಶ್ಯ.
ಅಶೋಕ ಜಿ. ಕಮತಗಿ
ಮದ್ಲೂರ, ಸವದತ್ತಿ ತಾಲ್ಲೂಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT