ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏ.22 ರಂದು ನಗರ ಜಿಲ್ಲಾ ಸಾಹಿತ್ಯ ಸಮ್ಮೇಳನ

Last Updated 15 ಏಪ್ರಿಲ್ 2017, 19:44 IST
ಅಕ್ಷರ ಗಾತ್ರ
ಬೆಂಗಳೂರು:‘11ನೇ ಬೆಂಗಳೂರು ನಗರ  ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು  ಏಪ್ರಿಲ್ 22 ಮತ್ತು 23 ರಂದು ವಿಜಯನಗರದ ಆದಿಚುಂಚನಗಿರಿ ಸಮುದಾಯ ಭವನದಲ್ಲಿ  ಆಯೋಜಿಸಲಾಗಿದೆ’ ಎಂದು  ಬೆಂಗಳೂರು ನಗರ ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಾಯಣ್ಣ ತಿಳಿಸಿದರು.
 
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,‘ಸಮ್ಮೇಳನದ ಅಧ್ಯಕ್ಷರನ್ನಾಗಿ ಹಿರಿಯ ಸಾಹಿತಿ ಜರಗನಹಳ್ಳಿ  ಶಿವಶಂಕರ್‌ ಅವರನ್ನು ಆಯ್ಕೆ ಮಾಡಲಾಗಿದೆ. ಏ.22ರ ಬೆಳಿಗ್ಗೆ 8ಕ್ಕೆ ಪ್ರಸನ್ನ ಚಿತ್ರಮಂದಿರದಿಂದ ಸಮ್ಮೇಳನದ ಮೆರವಣಿಗೆ ನಡೆಯಲಿದೆ’ ಎಂದರು.
 
‘ಸಮ್ಮೇಳನದಲ್ಲಿ ವಿಜ್ಞಾನ–ತಂತ್ರಜ್ಞಾನ, ಬೆಂಗಳೂರು–ಕನ್ನಡ ಸಂಸ್ಕೃತಿ, ಮಾಧ್ಯಮಗಳು ಮತ್ತು ಬೆಂಗಳೂರು ಕುರಿತು ವಿಚಾರಗೋಷ್ಠಿಗಳು ನಡೆಯಲಿವೆ. ಸಾಹಿತಿಗಳಾದ ಹಂ.ಪ .ನಾಗರಾಜಯ್ಯ, ಡಾ.ಎಂ. ಚಿದಾನಂದಮೂರ್ತಿ,  ಟಿ.ಆರ್‌. ಅನಂತರಾಮು, ಎಸ್‌.ಜಿ.ಸಿದ್ದರಾಮಯ್ಯ ಅವರು ಭಾಗವಹಿಸಲಿದ್ದಾರೆ’ ಎಂದರು.
 
‘ಕವಿಗೋಷ್ಠಿ, ಸಮ್ಮೇಳ ನಾಧ್ಯಕ್ಷರ ಜೊತೆ  ಸಂವಾದ,  110 ಸಾಧಕರಿಗೆ ಸನ್ಮಾನ, ಸಾಂಸ್ಕೃತಿಕ ಕಾರ್ಯಕ್ರಮಗಳು  ಇರಲಿವೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT