ಉಡುಪಿ: ‘ನಗರಾಭಿವೃದ್ಧಿ ಪ್ರಾಧಿಕಾರದ ₹5 ಕೋಟಿ ಅನುದಾನದಿಂದ ಕೆರೆಗ ಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ’ ಎಂದು ಮೀನುಗಾರಿಕೆ, ಕ್ರೀಡಾ ಮತ್ತು ಯುವ ಸಬಲೀಕರಣ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.ಬೀಡಿನಗುಡ್ಡೆ ಸಮೀಪ ಇರುವ ಮಜಲ್ ಕೆರೆ ಅಭಿವೃದ್ಧಿಗೆ ಶನಿವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ‘ನಗರಾಭಿವೃದ್ಧಿ ಪ್ರಾಧಿ ಕಾರ ನಕ್ಷೆ ಮಂಜೂರಾತಿ ನೀಡುವಾಗ ಈ ಹಿಂದೆ ಸೇಂಟ್ಸ್ಗೆ ₹1,000 ಕೆರೆ ಅಭಿವೃದ್ಧಿ ಶುಲ್ಕ ವಸೂಲಿ ಮಾಡುತ್ತಿತ್ತು. ಆದರೆ, ಅದನ್ನು ₹600ಕ್ಕೆ ಇಳಿಸಲಾಗಿದೆ. ಈ ಅನುದಾನವನ್ನು ಬೇರೆ ಉದ್ದೇಶಕ್ಕೆ ಬಳಸದೆ ಕೇವಲ ಕೆರೆ ಅಭಿವೃದ್ಧಿಗೆ ಮಾತ್ರ ಬಳಕೆ ಮಾಡಲಾಗುತ್ತಿದೆ. ನೀರಿನ ಸಮಸ್ಯೆ ಬಗೆಹರಿಸಲು ಇದರಿಂದ ಸಾಧ್ಯವಾ ಗಲಿದೆ’ ಎಂದು ಅವರು ಹೇಳಿದರು.