ಯಶವಂತಪುರ– ಹಾಸನ ರೈಲು ಕುಣಿಗಲ್ ಮಾರ್ಗವಾಗಿ ಸಂಚಾರ ಆರಂಭಿಸಿರುವುದು ಸಂತಸದ ಸುದ್ದಿ. ಈ ರೈಲನ್ನು ಯಶವಂತಪುರದಿಂದ ಹಾಸನಕ್ಕೆ ಬೆಳಿಗ್ಗೆ ಏಳು ಗಂಟೆಗೆ ಕುಣಿಗಲ್ ಮಾರ್ಗವಾಗಿ ಓಡಿಸುವುದು ಸೂಕ್ತ. ಇದರಿಂದ ಈ ಮಾರ್ಗದಲ್ಲಿ ಬರುವ ಯಡಿಯೂರು ಸಿದ್ಧಲಿಂಗೇಶ್ವರ, ಬೆಳ್ಳೂರು ಕ್ರಾಸ್ನಲ್ಲಿರುವ ಆದಿಚುಂಚನಗಿರಿ ಕ್ಷೇತ್ರ, ಶ್ರವಣಬೆಳಗೊಳ, ಚನ್ನರಾಯಪಟ್ಟಣ ನಿಲ್ದಾಣ ತಲುಪಲು ಹೆಚ್ಚು ಅನುಕೂಲ.
ಹೆದ್ದಾರಿಯ ಮೇಲೆ ಒತ್ತಡ ತಪ್ಪಿಸಿ ಈ ರೈಲು ಮಾರ್ಗವನ್ನು ಸದುಪಯೋಗಪಡಿಸಿಕೊಂಡರೆ ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳ, ಮಂಗಳೂರು, ಉಡುಪಿ, ಕೊಲ್ಲೂರು, ಕುಂದಾಪುರ, ಕಾರವಾರ ತಲುಪಲು ಈ ಮಾರ್ಗ ಸಹಕಾರಿ.
ಅರಸೀಕೆರೆ ಮಾರ್ಗವಾಗಿ ಚಲಿಸುತ್ತಿರುವ ಬೆಂಗಳೂರು– ಮಂಗಳೂರು ರೈಲು ಗಾಡಿಯನ್ನು ಈ ಮಾರ್ಗದಲ್ಲಿ ಓಡಿಸಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸಿದರೆ ಇಂಧನ ಹಾಗೂ ಜನಸಾಮಾನ್ಯರಿಗೆ ಸಮಯ ಉಳಿತಾಯ ಆಗುತ್ತದೆ. -ಆರ್. ಶಂಕರ್ಮಣಿ, ಬೆಂಗಳೂರು