ತಾಲ್ಲೂಕಿನ್ಯಾದಂತ ಜನರು ಬೇಸಿಗೆ ಬವಣೆ ಎದುರಿಸುತ್ತಿದ್ದಾರೆ. ಕುಡಿಯುವ ನೀರು ಸಿಗುತ್ತಿಲ್ಲ. ನೀರಿಗಾಗಿ ಹಾಹಾಕಾರ ನಡೆದಿದೆ. ಅದನ್ನು ಹೇಗೆ ನಿಭಾಯಿಸುವುದು ಎಂಬ ಅಂಶಗಳ ಕುರಿತು ಚರ್ಚಿಸಬೇಕಾಗಿತ್ತು. ಅಲ್ಲದೇ, ಮೂರು ತಿಂಗಳಿಂದ ಸಭೆ ನಡೆದಿಲ್ಲ. ಈ ರೀತಿ ದಿಢೀರನೆ ಇಓ ಗೈರುಹಾಜರಾದರೆ ಸದಸ್ಯರು ಮತ್ತು ಅಧಿಕಾರಿಗಳು ಏನು ಮಾಡಬೇಕು ಎಂದು ಸದಸ್ಯರಾದ ಈಶ್ವರ ಹರವಿ, ಗದಿಗೆವ್ವ ಹಿರೇಮಠ, ವಿಜಯಲಕ್ಷ್ಮಿ ಮುಂದಿನಮನಿ ಹರಿಹಾಯ್ದರು.