ಮಾಜಿ ಪ್ರಧಾನಿ ದಿ. ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಮನೆಗೆ ಭೇಟಿ ನೀಡಿದ ಮೊದಲ ಪ್ರಧಾನಿ ನರೇಂದ್ರ ಮೋದಿ ಎಂಬುದು ಈಚೆಗೆ ಮಾಧ್ಯಮಗಳ ಮೂಲಕ ತಿಳಿಯಿತು.
ಹಿಂದಿನ ಪ್ರಧಾನಿಗಳಾಗಲಿ, ರಾಜ್ಯದ ಮುಖ್ಯಮಂತ್ರಿಗಳಾಗಲಿ ಅವರ ಮನೆಗೆ ಭೇಟಿ ನೀಡಿರಲಿಲ್ಲ ಎಂಬುದು ಅಚ್ಚರಿ ಮೂಡಿಸಿತು.
ರೈತರು ಮತ್ತು ಸೈನಿಕರ ಬಗ್ಗೆ ಅತಿ ಕಳಕಳಿ ಹೊಂದಿದ್ದ, ದೇಶದಲ್ಲಿ ‘ಜೈ ಜವಾನ್ ಜೈ ಕಿಸಾನ್’ ಘೋಷಣೆ ಮೊಳಗಿಸಿದ್ದ ಶಾಸ್ತ್ರಿ ಅವರ ಮನೆಗೆ ವಾಹನ ಹೋಗಲು ಸರಿಯಾದ ರಸ್ತೆಯೂ ಇಲ್ಲ ಅಂದರೆ ನಂಬುವುದೂ ಕಷ್ಟ. -ಎಮ್ ಆರ್ ಗೌಡರ, ಬಾಗಲಕೋಟೆ